ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯ ಗರ್ಭಗುಡಿಗೆ ಚಿನ್ನದ ಹೊದಿಕೆ

1 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188

ಸುದ್ದಿಒನ್, ಚಳ್ಳಕೆರೆ, ಜನವರಿ. 03 : ತಾಲೂಕಿನ ನಾಯಕನಹಟ್ಟಿ ಪವಾಡ ಪುರುಷ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯ ಗರ್ಭಗುಡಿಗೆ ದಾನಿಗಳ ನೆರವಿನಿಂದ ಚಿನ್ನಲೇಪಿತ ಹೊದಿಕೆ ಅಳವಡಿಸಿದ್ದು ಭಕ್ತಾಧಿಗಳಿಗೆ ವಿಶೇಷ ಆಕರ್ಷಣೆಯ ಕೇಂದ್ರವಾಗಿದೆ.

ಚಿತ್ರದುರ್ಗದ ಮಾತಾ ಏಜೆನ್ಸಿ ಮಾಲೀಕರಾದ ಮಹಾಂತೇಶ್ ರವರು ಸುಮಾರು ₹ 30 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಬಾಗಿಲಿಗೆ ಚಿನ್ನದ ಲೇಪನವನ್ನು ಹಾಕಿಸುವ ಮೂಲಕ ಭಕ್ತಿ ಮೆರೆದಿದ್ದಾರೆ. ಈ ಹಿಂದೆ ಕಲ್ಲಿನ ಗೋಡೆಗಳ ಮೇಲೆ ತಾಮ್ರದ ಹೊದಿಕೆ ಅಳವಡಿಸಲಾಗಿತ್ತು. ಇದೀಗ ತಾಮ್ರದ ಶೀಟ್ ಮತ್ತು ಚಿತ್ರಕಲಾ ಕೃತಿಗಳಿಗೆ ಚಿನ್ನದ ಲೇಪನ ಮಾಡಲಾಗಿದೆ. ಹೀಗಾಗಿ ದೇವಾಲಯ ಗರ್ಭಗುಡಿಯಲ್ಲಿ ಚಿನ್ನ ಲೇಪನದ ದೃಶ್ಯವನ್ನು ಭಕ್ತಾದಿಗಳು ಕಣ್ತುಂಬಿ ಕೊಳ್ಳುತ್ತಿದ್ದಾರೆ.

 

ಸುಮಾರು 11 ಅಡಿ ಎತ್ತರ ಮತ್ತು 21 ಅಡಿ ಅಗಲವಿರುವ ಈ ಲೇಪನದಲ್ಲಿ ಪ್ರಮುಖವಾಗಿ ತಾಮ್ರ ಬಳಸಲಾಗಿದೆ. ಇದರ ಮೇಲೆ ಬೆಳ್ಳಿ ಮತ್ತು ಬಂಗಾರದ ಲೇಪನ ಮಾಡಲಾಗಿದೆ. ಒಟ್ಟಾರೆ 157.2 ಕೆ.ಜಿ ತೂಕವಾಗಿರುವ ಇದರಲ್ಲಿ ಎಂಟು ವಿಗ್ರಹಗಳು ಮತ್ತು ತಾಮ್ರದ ಶೀಟ್ ಒಳಗೊಂಡಿದೆ. ಇವುಗಳಿಗೆ ನಿಕ್ಕಲ್ ಎಲಿಕ್ಟ್ರೊಪ್ಲೇಟಿಂಗ್ ಮಾಡಲಾಗಿದೆ.

ಗಂಧರ್ವ, ಆನೆ, ಸಿಂಹ, ಗಂಡುಬೇರುಂಡ, ದೀಪದ ಲಕ್ಷ್ಮೀ ಗಣಪತಿ ಮತ್ತು ಗಜಲಕ್ಷ್ಮಿಯರ ವಿಗ್ರಹಗಳು ಬಾಗಿಲವಾಡದಲ್ಲಿವೆ.
ಎರಡು ಬದಿಯಲ್ಲಿ ನವಿಲು ಮತ್ತು ದೀಪ ಅಳವಡಿಸಲಾಗಿದೆ. ವಿಶೇಷ ಬಾಗಿಲಿನ ಮೇಲ್ಭಾಗದಲ್ಲಿ ಹೂಮಾಲೆಯನ್ನು ಕೈಯಲ್ಲಿ ಹಿಡಿದಿರುವ ಗಂಧರ್ವರ ಚಿತ್ರಗಳಿವೆ. ಒಟ್ಟಾರೆ ಅತ್ಯಾಧಿನಿಕ ವಿಧಾನದಲ್ಲಿ ತಾಮ್ರದ ಮೇಲೆ ನಿಕ್ಕಲ್ ಮತ್ತು ಬಂಗಾರದ ಲೇಪನ ಮೂಡಲಾಗಿದೆ. ಇದಕ್ಕೂ ಮುಂಚೆ ಕ್ಲೀನಿಂಗ್ ಮತ್ತು ಬಫಿಂಗ್ ಮಾಡಲಾಗಿದೆ. ತಾಮ್ರದ ಸೀಟುಗಳ ಮೇಲೆ ಎಂಟರಿಂದ 10 ಮೈಕ್ರಾನ್ ದಪ್ಪದ ಚಿನ್ನದ ಲೇಪನ ಮಾಡಲಾಗಿದೆ. ಈಗ ತಿಪ್ಪೇರುದ್ರಸ್ವಾಮಿ ದೇವಾಲಯಕ್ಕೆ ಚಿನ್ನದ ಲೇಪನ ಮೆರುಗು ತಂದಿದೆ.

Share This Article
Enable Notifications OK No thanks