Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

🔴 ಅಡ್ಮಿಷನ್ ಓಪನ್

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ

2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)

ಸಂಪೂರ್ಣ ಮಾಹಿತಿ & ದಾಖಲಾತಿಗಾಗಿ ಕ್ಲಿಕ್ ಮಾಡಿ ➔
---Advertisement---

ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯ ಗರ್ಭಗುಡಿಗೆ ಚಿನ್ನದ ಹೊದಿಕೆ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188

ಸುದ್ದಿಒನ್, ಚಳ್ಳಕೆರೆ, ಜನವರಿ. 03 : ತಾಲೂಕಿನ ನಾಯಕನಹಟ್ಟಿ ಪವಾಡ ಪುರುಷ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯ ಗರ್ಭಗುಡಿಗೆ ದಾನಿಗಳ ನೆರವಿನಿಂದ ಚಿನ್ನಲೇಪಿತ ಹೊದಿಕೆ ಅಳವಡಿಸಿದ್ದು ಭಕ್ತಾಧಿಗಳಿಗೆ ವಿಶೇಷ ಆಕರ್ಷಣೆಯ ಕೇಂದ್ರವಾಗಿದೆ.

ಚಿತ್ರದುರ್ಗದ ಮಾತಾ ಏಜೆನ್ಸಿ ಮಾಲೀಕರಾದ ಮಹಾಂತೇಶ್ ರವರು ಸುಮಾರು ₹ 30 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಬಾಗಿಲಿಗೆ ಚಿನ್ನದ ಲೇಪನವನ್ನು ಹಾಕಿಸುವ ಮೂಲಕ ಭಕ್ತಿ ಮೆರೆದಿದ್ದಾರೆ. ಈ ಹಿಂದೆ ಕಲ್ಲಿನ ಗೋಡೆಗಳ ಮೇಲೆ ತಾಮ್ರದ ಹೊದಿಕೆ ಅಳವಡಿಸಲಾಗಿತ್ತು. ಇದೀಗ ತಾಮ್ರದ ಶೀಟ್ ಮತ್ತು ಚಿತ್ರಕಲಾ ಕೃತಿಗಳಿಗೆ ಚಿನ್ನದ ಲೇಪನ ಮಾಡಲಾಗಿದೆ. ಹೀಗಾಗಿ ದೇವಾಲಯ ಗರ್ಭಗುಡಿಯಲ್ಲಿ ಚಿನ್ನ ಲೇಪನದ ದೃಶ್ಯವನ್ನು ಭಕ್ತಾದಿಗಳು ಕಣ್ತುಂಬಿ ಕೊಳ್ಳುತ್ತಿದ್ದಾರೆ.

 

ಸುಮಾರು 11 ಅಡಿ ಎತ್ತರ ಮತ್ತು 21 ಅಡಿ ಅಗಲವಿರುವ ಈ ಲೇಪನದಲ್ಲಿ ಪ್ರಮುಖವಾಗಿ ತಾಮ್ರ ಬಳಸಲಾಗಿದೆ. ಇದರ ಮೇಲೆ ಬೆಳ್ಳಿ ಮತ್ತು ಬಂಗಾರದ ಲೇಪನ ಮಾಡಲಾಗಿದೆ. ಒಟ್ಟಾರೆ 157.2 ಕೆ.ಜಿ ತೂಕವಾಗಿರುವ ಇದರಲ್ಲಿ ಎಂಟು ವಿಗ್ರಹಗಳು ಮತ್ತು ತಾಮ್ರದ ಶೀಟ್ ಒಳಗೊಂಡಿದೆ. ಇವುಗಳಿಗೆ ನಿಕ್ಕಲ್ ಎಲಿಕ್ಟ್ರೊಪ್ಲೇಟಿಂಗ್ ಮಾಡಲಾಗಿದೆ.

ಗಂಧರ್ವ, ಆನೆ, ಸಿಂಹ, ಗಂಡುಬೇರುಂಡ, ದೀಪದ ಲಕ್ಷ್ಮೀ ಗಣಪತಿ ಮತ್ತು ಗಜಲಕ್ಷ್ಮಿಯರ ವಿಗ್ರಹಗಳು ಬಾಗಿಲವಾಡದಲ್ಲಿವೆ.
ಎರಡು ಬದಿಯಲ್ಲಿ ನವಿಲು ಮತ್ತು ದೀಪ ಅಳವಡಿಸಲಾಗಿದೆ. ವಿಶೇಷ ಬಾಗಿಲಿನ ಮೇಲ್ಭಾಗದಲ್ಲಿ ಹೂಮಾಲೆಯನ್ನು ಕೈಯಲ್ಲಿ ಹಿಡಿದಿರುವ ಗಂಧರ್ವರ ಚಿತ್ರಗಳಿವೆ. ಒಟ್ಟಾರೆ ಅತ್ಯಾಧಿನಿಕ ವಿಧಾನದಲ್ಲಿ ತಾಮ್ರದ ಮೇಲೆ ನಿಕ್ಕಲ್ ಮತ್ತು ಬಂಗಾರದ ಲೇಪನ ಮೂಡಲಾಗಿದೆ. ಇದಕ್ಕೂ ಮುಂಚೆ ಕ್ಲೀನಿಂಗ್ ಮತ್ತು ಬಫಿಂಗ್ ಮಾಡಲಾಗಿದೆ. ತಾಮ್ರದ ಸೀಟುಗಳ ಮೇಲೆ ಎಂಟರಿಂದ 10 ಮೈಕ್ರಾನ್ ದಪ್ಪದ ಚಿನ್ನದ ಲೇಪನ ಮಾಡಲಾಗಿದೆ. ಈಗ ತಿಪ್ಪೇರುದ್ರಸ್ವಾಮಿ ದೇವಾಲಯಕ್ಕೆ ಚಿನ್ನದ ಲೇಪನ ಮೆರುಗು ತಂದಿದೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...