Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಿಶ್ವಕಪ್ ಟ್ರೋಫಿ ದೇವಾಲಯಕ್ಕೆ ಒಯ್ದ ಬಗ್ಗೆ ಮಾಜಿ ಆಟಗಾರ ಅಸಮಾಧಾನ!  ಅವರು ಕೇಳಿದ ಪ್ರಶ್ನೆ ಇಲ್ಲಿದೆ

---Advertisement---

ಭಾರತ ಟಿ20 ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್, ಕೋಚ್ ಗೌತಮ್ ಗಂಭೀರ್ ಮತ್ತು ಐಸಿಸಿ ಅಧ್ಯಕ್ಷ ಜಯ್ ಶಾ ಅವರು ರವಿವಾರ ಗೆದ್ದ ವಿಶ್ವಕಪ್ ಟಿ20 ಟ್ರೋಫಿಯನ್ನು ಅಹ್ಮದಾಬಾದ್ ನ ಹಿಂದೂ ದೇವಾಲಯಕ್ಕೆ ಒಯ್ದ ಕ್ರಮವನ್ನು ತೃಣಮೂಲ ಕಾಂಗ್ರೆಸ್ ಸಂಸದ ಹಾಗೂ ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ ಪ್ರಶ್ನಿಸಿದ್ದಾರೆ.

ಕೀರ್ತಿ ಆಜಾದ್ 1983ರ ಏಕದಿನ ವಿಶ್ವಕಪ್ ಗೆದ್ದ ತಂಡದ ಸದಸ್ಯರು.
ಒಂದು ಧರ್ಮಕ್ಕೆ ಇದನ್ನು ಸೀಮಿತಗೊಳಿಸುವುದು ನಾಚಿಕೆಗೇಡು ಎಂದು ಕೀರ್ತಿ ಆಜಾದ್ ಟೀಕಿಸಿದ್ದಾರೆ. 1983ರಲ್ಲಿ ಕಪಿಲ್ ದೇವ್ ನೇತೃತ್ವದಲ್ಲಿ ತಂಡ ವಿಶ್ವಕಪ್ ಗೆದ್ದಾಗ, ತಂಡದಲ್ಲಿ ಹಿಂದೂ, ಮುಸ್ಲಿಂ, ಸಿಕ್ಖ್ ಹಾಗೂ ಕ್ರಿಶ್ಚಿಯನ್ನರು ಕೂಡಾ ತಂಡದಲ್ಲಿದ್ದರು. ನಾವು ನಮ್ಮ ಧಾರ್ಮಿಕ ತವರು ಎನಿಸಿದ ಇಂಡಿಯಾ, ಭಾರತ, ಹಿಂದೂಸ್ತಾನಕ್ಕೆ ಅದನ್ನು ಒಯ್ದೆವು” ಎಂದು ಹೇಳಿದ್ದಾರೆ.

ಏಕೆ ಮಸೀದಿಗೆ ಒಯ್ದಿಲ್ಲ? ಏಕೆ ಚರ್ಚ್ ಗೆ ಒಯ್ದಿಲ್ಲ? ಏಕೆ ಗುರುದ್ವಾರಕ್ಕೆ ಒಯ್ದಿಲ್ಲ? ಈ ಟ್ರೋಫಿ ಎಲ್ಲ ಧರ್ಮಗಳ 140 ಕೋಟಿ ಮಂದಿಗೆ ಸೇರಿದ್ದು. ಇದು ಒಂದು ಧರ್ಮದ ವಿಜಯದ ಸಂಕೇತವಲ್ಲ!” ಎಂದು ಎಕ್ಸ್ ಪೋಸ್ಟ್ ನಲ್ಲಿ ಆಜಾದ್ ಪ್ರಶ್ನೆ ಕೇಳಿದ್ದಾರೆ‌.ಈ ತಂಡ ಭಾರತವನ್ನು ಪ್ರತಿನಿಧಿಸುತ್ತದೆ. ಸೂರ್ಯಕುಮಾರ್ ಯಾದವ್ ಅಥವಾ ಜಯ್ ಶಾ ಕುಟುಂಬವನ್ನು ಪ್ರತಿನಿಧಿಸುವುದಿಲ್ಲ ಎಂದು ಹೇಳಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...