Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಎಡ, ಬಲ ಪಂಥಕ್ಕೆ ಕಟ್ಟು ಬೀಳದೆ ಮಧ್ಯಮ ಮಾರ್ಗ ಅನುಸರಿಸಿ : ಮಾದಾರಚನ್ನಯ್ಯ ಸ್ವಾಮೀಜಿ

---Advertisement---

ಸುದ್ದಿಒನ್, ಬಾಗಲಕೋಟೆ, ಜುಲೈ. 02 :ಎಡ, ಅಥವಾ ಬಲ ಪಂಥಕ್ಕೆ ಕಟ್ಟು ಬೀಳದೆ ಮಧ್ಯಮ ಮಾರ್ಗ ಅನುಸಿರಿದಾಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಶ್ರೀ ಬಸವಮೂರ್ತಿ ಮಾದಾರಚನ್ನಯ್ಯ ಸ್ವಾಮೀಜಿ ಪ್ರತಿಪಾದಿಸಿದರು.

ನವನಗರದಲ್ಲಿ ಶ್ರೀಮಾದಾರ ಚನ್ನಯ್ಯ ಸೇವಾ ಸಮಿತಿ ಆಯೋಜಿಸಿದ್ದ ಪ್ರೊ. ಹೆಚ್. ಲಿಂಗಪ್ಪ ರಚಿಸಿರುವ ದಲಿತ ವಚನಕಾರರ ಕುರಿತ ಗ್ರಂಥಗಳ ಬಿಡುಗಡೆ ಸಮಾರಂಭದ ಸಾನಿದ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು ಮಹಾತ್ಮ ಗೌತಮ ಬುದ್ದರು ಮುಕ್ತ ಮನಸ್ಸಿನಿಂದ ಜಗದ ವಿಷಯಗಳನ್ನು ಸ್ಪೀಕರಿಸುವ ಮನೋಭಾವ ಸಿದ್ದಿಸಿಕೊಂಡರು ಎಡ ಬಲ ಎನ್ನದೆ ಮಧ್ಯಮ ಮಾರ್ಗ ಅನುಸರಿಸಿದ ಫಲವಾಗಿ ಚಿರ ಸ್ಥಾಯಿಯಾಗಿ ಉಳಿದಿದ್ದಾರೆ ಎಂದು ನುಡಿದರು.

ಮಾದಿಗ ಸಮುದಾಯಕ್ಕೆ ಬಹುದೊಡ್ಡ ಪರಂಪರೆ ಇದೆ. ಈ ಬಗ್ಗೆ ಸಮುದಾಯದ ಯುವ ಸಮುದಾಯ ತಿಳಿದಿಕೊಳ್ಳಬೇಕು. ತಳ ವರ್ಗದ ಶರಣೆ, ಶರಣರ ಹಾಗೂ ಸಾಧಕರ ಕುರಿತು ಸುಮಾರು ಐವತ್ತು ಗ್ರಂಥಗಳನ್ನು ಹೆಚ್. ಲಿಂಗಪ್ಪ ಬರೆದಿರುವುದು ಸಾಧನೆಯೇ ಸರಿ, ಯುವ ಪೀಳಿಗೆಗೆ ಈ ಗ್ರಂಥಗಳು ಮಾರ್ಗದರ್ಶಿಯಾಗಿವೆ ಎಂದರು. ನಿವೃತ್ತಿಯಾದ ಒಬ್ಬ ಉಪನ್ಯಾಸಕರು ಹೇಗೆ ಬದುಕು ನಡೆಸಬೇಕೆಂಬುದಕ್ಕೆ ಪ್ರೊ. ಲಿಂಗಪ್ಪ ಮಾದರಿಯಾಗಿದ್ದಾರೆ. ಯುವ ಸಮುದಾಯ ಸಮಾಜದ ಆದರ್ಶ ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಕರೆ ನೀಡಿದರು.

ಕಲ್ಯಾಣ ಕರ್ನಾಟಕದಲ್ಲಿ ನಡೆದ ವಚನ ಚಳುವಳಿ ಜಗತ್ತಿಗೆ ಮಾದರಿಯಾಗಿದೆ. ಕಲ್ಯಾಣ ಕ್ರಾಂತಿಯ ನಂತರ ವಚನಕಾರರು ತಾವು ಬರೆದ ವಚನ ಗ್ರಂಥಗಳನ್ನು ರಕ್ಷಿಸಲು ನಾಡಿನ ಹಲವು ಕಡೆ ತೆರಳಿದರು. ಹೀಗಾಗಿ ಇಂದು ಅವರು ರಚಿಸಿದ ವಚನಗಳು ನಮಗೆ ಲಭ್ಯವಾಗಿವೆ ವಚನಗಳು ಸಮ ಸಮಾಜ ನಿರ್ಮಾಣಕ್ಕೆ ಮಾರ್ಗದರ್ಶಿಯಾಗಿವೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಎಸ್. ಆರ್. ಪಾಟೀಲ್ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಸಮಾಜದಲ್ಲಿ ಜಾತೀಯತೆ ಜೀವಂತವಾಗಿರುವುದು ಬೇಸರದ ಸಂಗತಿ ಎಂದು ವಿಷಾದಿಸಿದರು.

12 ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಶರಣ ಚಳುವಳಿಯ ಮೂಲಕ ಜಾತೀಯತೆ ಮೂಢನಂಬಿಕೆ ಕಂದಾಚಾರಗಳನ್ನು ತೊಡೆದು ಹಾಕಲು ಶ್ರಮಿಸಿದರು.
ವಚನಕಾರರ ಚಳುವಳಿ ಎಂದರೆ ಅದೊಂದು ದಲಿತ ಚಳುವಳಿ ಎಂದರು.ಎಚ್ ಲಿಂಗಪ್ಪ ನವರು ದಲಿತ ಶರಣ ಶರಣೆಯರ, ವಚನಕಾರರ ಕುರಿತು ಎಂಟು ಗ್ರಂಥಗಳನ್ನು ರಚಿಸಿ ಲೋಕಾರ್ಪಣೆ ಮಾಡಿರುವುದು ಅತ್ಯುತ್ತಮ ಕಾರ್ಯ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕರಾದ ವೀರಣ್ಣ ಚರಂತಿಮಠ ಮಾತನಾಡಿ ಶರಣರ ಕುರಿತು ಪ್ರಕಟಗೊಂಡಿರುವ ಕೃತಿಗಳನ್ನು ಪ್ರತಿಯೊಬ್ವರು ಓದಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕೇವಲ ಬರೆದರೆ ಸಾಲದು ಸಮಾಜಕ್ಕೆ ತೊಂದರೆ ನೀಡದ ರೀತಿಯಲ್ಲಿ ಬದುಕುವುದನ್ನು ಅರಿಯಬೇಕು ಎಂದರು.

ಆಗಿ ಹೋಗಿರುವ ಕಹಿ ಘಟನೆಗಳನ್ನು ಮರೆತು ಉತ್ತಮ ಜೀವನದ ಕಡೆ ಗಮನ ನೀಡಬೇಕೆಂದರು. ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಮಿರಸಾಬೀಹಳ್ಳಿ ಶಿವಣ್ಣ, ಡಾ.ಮಹಾಂತೇಶ್, ಮುತ್ತಣ್ಣ ಬೆಣ್ಣೂರ ಮತ್ತಿತರರು ಇದ್ದರು. ಇದೇ ವೇಳೆ ಸಾಹಿತಿ ಪ್ರೊ. ಹೆಚ್. ಲಿಂಗಪ್ಪ ಅವರಿಗೆ ಚಾಲುಕ್ಯಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಯಿತು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment