ಧಾರವಾಡ : ಸೌಜನ್ಯ ಕೇಸ್ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ ವಿರುದ್ಧ ಈಗಾಗಲೇ ಹಲವು ಕೇಸ್ ಗಳು ದಾಖಲಾಗಿವೆ. ಇದೀಗ ಜೈನ ಸಮುದಾಯದ ರಾಜರ ಬಗ್ಗೆ ಮಾತನಾಡಿದ್ದಕ್ಕೆ ಎಫ್ಐಆರ್ ದಾಖಲಾಗಿದೆ.
ದೂರುದಾರ ಮಂಜುನಾಥ್ ಮಾತನಾಡಿ, ನಮ್ಮ ಜೈನ ಸಮುದಾಯಕ್ಕೆ ಗಿರೀಶ್ ಮಟ್ಟಣ್ಣನವರ್ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಯೂಟ್ಯೂಬ್ ಚಾನೆಲ್ ನಲ್ಲಿ ಮಾತನಾಡುವಾಗ, ಜೈನ ರಾಜರು ಕ್ರೂರಿಗಳು, ಮತಾಂಧರಿಗಳು ಅಂದಿದ್ದರು. ಬಾಹುಬಲಿ ಏಕಾಶಿಲಾ ಮೂರ್ತಿಯನ್ನ ನಾವಿಂದು ಪೂಜಿಸ್ತೇವೆ. ಆ ಮೂರ್ತಿಯನ್ನ ಕೆತ್ತಿದ್ದಂತ ಶಿಲ್ಪಿಯ ಕೈಯನ್ನೇ ಕಟ್ ಮಾಡಿದ್ರು ರಾಜರುಗಳು. ಅಂತ ಕ್ರೂರಿಗಳು ರಾಜರು ಅಂತ ಹೇಳಿದ್ದಾರೆ.

ಆದರೆ ನಮ್ಮ ಇತಿಹಾಸ ಹೇಳುವುದು ಬೇರೆ. ಏನು ಶಿಲ್ಪಿಗಳ ಕೈ ಕಟ್ ಮಾಡಿದ್ರು, ಎಷ್ಟು ಕಲ್ಲನ್ನ ಕಟ್ ಮಾಡ್ತಾ ಇದ್ರು ಅಷ್ಟೇ ತೂಕದ ಬಂಗಾರವನ್ನ ತೂಗುತ್ತಾ ಇದ್ದವರು ನಮ್ಮ ರಾಜರು. ಆದರೆ ಇವರು ಅದನ್ನ ತಿರುಚಿ ಬೇರೆ ಥರ ಹೇಳಿಕೆಗಳನ್ನ ಕೊಡ್ತಾ ಇದ್ದಾರೆ. ಅಷ್ಟೇ ಅಲ್ಲದೆ ಇನ್ನೊಂದು ಮಾಹಿತಿಯನ್ನು ಹೇಳುವುದಕ್ಕೆ ಹೋಗ್ತಾ ಇದ್ದಾರೆ. ಹಿಂದಿನ ಕಾಲದಲ್ಲಿ ರಾಜರು, ಮದುವೆಯಾದ ಮೊದಲ ರಾತ್ರಿ ರಾಜರ ಮನೆಗೆ ಕಳುಹಿಸಿಕೊಡಬೇಕು ಅಂತೆ ಎಂಬ ಹೇಳಿಕೆಯನ್ನ ನೀಡಿದ್ದಾರೆ. ಅಷ್ಟೇ ಕ್ರೂರಿಗಳನ್ನು ಎಂಬುದನ್ನ ಬಿಂಬಿಸುವುದಕ್ಕೆ ಹೋಗ್ತಾ ಇದ್ದಾರೆ.
ನಮ್ಮ ಧರ್ಮ ಅಂಥದ್ದಲ್ಲ. ನಮ್ಮವರು ಯಾರಿಗೂ ಹಿಂಸೆ ಮಾಡುವಂತದ್ದಲ್ಲ. ಅಹಿಂಸೋ ಪರಮ ಧರ್ಮ ನಮ್ಮದು. ಹೀಗಾಗಿ ಇಂದು ಅವರ ಹೇಳಿಕೆಯನ್ನ ಖಂಡಿಸಿ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದೇನೆ. ಅವರು ಬೆಳ್ತಂಗಡಿಯಲ್ಲಿ ಹೇಳಿಕೆ ಕೊಟ್ಟ ಕಾರಣ, ಆ ಕೇಸ್ ಇಲ್ಲಿಗೆ ವರ್ಗಾವಣೆಯಾಗಿತ್ತು. ಸಾಕ್ಷಿ ಏನಿದೆ ಅದನ್ನ ತೆಗೆದುಕೊಂಡು ಬನ್ನಿ ಅಂತ ಬೆಳ್ತಂಗಡಿ ಪೊಲೀಸರು ಕರೆ ಮಾಡಿದ್ದರು. ಹೀಗಾಗಿ ಬಂದು, ಸಾಕ್ಷಿಗಳನ್ನ ಕೊಟ್ಟಿದ್ದೇನೆ ಎಂದು ಧಾರವಾಡದ ಮಂಜುನಾಥ್ ತಿಳಿಸಿದ್ದಾರೆ.















