ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
ಈಗಾಗಲೇ ಆಗಸ್ಟ್ ತಿಂಗಳು ಬಂದಿದೆ. ಜೂನ್ ಜುಲೈ ನಲ್ಲಿಯೇ ಒಳ್ಳೆ ಮಳೆಯಾದರೆ ಬಿತ್ತನೆಗೆ ಉತ್ತಮ. ಈ ಬಾರಿ ಆರಂಭವಾದ ಮುಂಗಾರು ಮಳೆ ನೋಡಿದ್ರೆ ಉತ್ತಮವಾದ ಮಳೆಯಾಗಲಿದೆ ಎಂದೇ ಅಂದುಕೊಳ್ಳಲಾಗಿತ್ತು. ಆದರೆ ಹವಮಾನ ವರದಿ ಈಗ ನೀಡಿರುವ ವರದಿಯನ್ನ ನೋಡಿದ್ರೆ ರೈತರಿಗೆ ಆತಂಕವಾಗಿದೆ. ಜುಲೈ ತಿಂಗಳಲ್ಲಿ ಅಷ್ಟಕ್ಕೆ ಅಷ್ಟೇ ಈಗ ಆಗಸ್ಟ್ ಶುರುವಾಗಿದೆ. ಆದರೆ ಈ ಬಾರಿಯೂ ಮಳೆಯ ಪ್ರಮಾಣ ಅಷ್ಟಕ್ಕೆ ಅಷ್ಟೆ ಎನ್ನಲಾಗ್ತಾ ಇದೆ.
ಮುಂಗಾರಿನ ಎರಡನೇ ಅವಧಿಯ ಮಳೆ ಸುಮಾರು 80 ರಷ್ಟು ಕೊರತೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ. ಜುಲೈ ತಿಂಗಳಲ್ಲಿ ವಾಡಿಕೆಗಿಂತ ಶೇಕಡ 11 ರಷ್ಟು ಮಾತ್ರ ಮಳೆಯಾಗಲಿದೆ. ಆಗಸ್ಟ್ ತಿಂಗಳಲ್ಲಿ ಸುಮಾರು 50ರಷ್ಟು ಮಳೆಯ ಕೊರತೆ ಕಾಣಲಿದೆ ಎಂಬ ಸೂಚನೆ ನೀಡಿದೆ. ಅಷ್ಟೇ ಅಲ್ಲ ಕರಾವಳಿ ಭಾಗದಲ್ಲೂ ಶೇಕಡ 80 ರಷ್ಟು ಮಳೆಯ ಕೊರತೆ ಕಾಣಲಿದೆ.
ಹವಮಾನ ಇಲಾಖೆ ನೀಡಿದ ಮಳೆಯ ವರದಿ ಸಹಜವಾಗಿಯೇ ಆತಂಕವನ್ನ ಸೃಷ್ಟಿಸಿದೆ. ಯಾಕಂದ್ರೆ ಕಳರದ ತಿಂಗಳೇ ಜಮೀನನ್ನೆಲ್ಲ ಉಳುಮೆ ಮಾಡಿ, ಬಿತ್ತನೆ ಮಾಡೋದಕ್ಕೆ ಅಂತ ಕಾದು ಕುಳಿತಿದ್ದರು. ಆದರೆ ಮಳೆರಾಯ ಅದ್ಯಾಕೆ ಕರುಣೆಯನ್ನೇ ತೋರಲಿಲ್ಲ. ಅದೆಷ್ಟೋ ರೈತರು ಬೀಜ, ಗೊಬ್ಬರಗಳನ್ನ ತಂದಿಟ್ಟುಕೊಂಡು ಕಾದು ಕುಳಿತಿದ್ದರು ಸಹ ಮಳೆರಾಯ ಬರಲಿಲ್ಲ. ನಿನ್ನೆಯಿಂದ ಕೊಂಚ ಅಲ್ಲಲ್ಲಿ ಮಳೆಯಾಗಿದೆ. ಈಗ ಬೀಜ ಬಿತ್ತನೆ ಮಾಡಿದರು, ಚಿಗುರೊಡೆಯೋದಕ್ಕೆ ಸಮಸ್ಯೆ ಇಲ್ಲ. ಆದರೆ ಮಳೆ ಸಮಸ್ಯೆ ಎದುರಾದರೆ ಬೆಳೆ ಫಸಲು ಕೊಡದೆ ಇದ್ದರೆ ಏನು ಮಾಡೋದು..? ಮಾಡಿದ ಸಾಲ ತೀರಿಸುವುದು ಹೇಗೆ ಎಂಬ ಪ್ರಶ್ನೆಯೂ ರೈತರನ್ನ ಕಾಡುತ್ತಿದೆ.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್ಡೇಟ್. ನೀವು ಯಾವಾಗಲೂ ಅಪ್ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್