ಜೆಡಿಎಸ್ ನಿಂದ ತಂದೆ – ಮಗನ ಉಚ್ಛಾಟನೆ : ಪತ್ರಿಕಾ ಪ್ರಕಟಣೆಗೆ ಇಬ್ರಾಹಿಂ ಏನಂದ್ರು..?

suddionenews
1 Min Read

ಜೆಡಿಎಸ್ ನಲ್ಲಿ ಕುಮಾರಸ್ವಾಮಿ ಹಾಗೂ ರಾಜ್ಯಾಧ್ಯಕ್ಷರ ನಡುವೆಯೇ ಭಿನ್ನಾಭಿಪ್ರಾಯ ಮೂಡಿದೆ. ಇದಕ್ಕೆಲ್ಲಾ ಕಾರಣ ಬಿಜೆಪಿ ಹಾಗೂ ಜೆಡಿಎಸ್ ಲೋಕಸಭಾ ಚುನಾವಣೆಯ ಮೈತ್ರಿ. ಇದೀಗ ಸಂಜೆಯಿಂದ ಒಂದು ಲೆಟರ್ ಬೇರೆ ವೈರಲ್ ಆಗುತ್ತಾ ಇದೆ. ಜೆಡಿಎಸ್ ಪಕ್ಷದಿಂದ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿಯನ್ನು ಉಚ್ಛಾಟನೆ ಮಾಡಲಾಗಿದೆ ಎಂಬ ಪತ್ರ ಅದಾಗಿತ್ತು.

ಇತ್ತಿಚೆಗಷ್ಟೇ ಇಬ್ರಾಹಿಂ ಉಚ್ಛಾಟನೆ ಬಗ್ಗೆ ಮಾತನಾಡಿ, ಈಗ ಉಚ್ಛಾಟನೆಯನ್ನೇ ಮಾಡಿದರಾ ಎಂಬ ಪ್ರಶ್ನೆಗಳು ಹುಟ್ಟುಕೊಂಡಿದ್ದವು. ಆದರೆ ಇದಕ್ಕೆ ಇದೀಗ ಇಬ್ರಾಹಿಂ ಅವರೇ ಸ್ಪಷ್ಟನೆ ನೀಡಿದ್ದಾರೆ. ಉಚ್ಛಾಟನೆಯ ವಿಚಾರವೆಲ್ಲಾ ಸುಳ್ಳು ಎಂದಿದ್ದಾರೆ.

ಈ ರೀತಿಯ ಯಾವುದೇ ನಿರ್ಧಾರವನ್ನು ಪಕ್ಷವೂ ತೆಗೆದುಕೊಂಡಿಲ್ಲ. ಸುಳ್ಳು ಸುದ್ದಿ ಹಬ್ಬಿಸಿದರೆ ಕ್ರಮ ತೆಗೆದುಕೊಳ್ಳಲಾಗುವುದು. ಈ ಸಂಬಂಧ ಶೀಘ್ರವೇ ಸುದ್ದಿಗೋಷ್ಠಿ ನಡೆಸಲಾಗುತ್ತದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *