ವಿಜಯಪುರ: ಇತ್ತೀಚೆಗಷ್ಟೇ ವಿಜಯಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಾಗೂ ಯತ್ನಾಳ್ ಒಂದೇ ವೇದಿಕೆಯನ್ನ ಹಂಚಿಕೊಂಡಿದ್ದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರು ವೇದಿಕೆ ಮೇಲೆ ಇದ್ದರು ಕೂಡ ಯತ್ನಾಳ್ ಬೆಂಬಲಿಗರು ಯತ್ನಾಳ್ ಪರ ಘೋಷಣೆಯನ್ನ ಕೂಗ್ತಾ ಇದ್ದರು. ಆ ಸಂಬಂಧ ಯತ್ನಾಳ್ ಅವರು ಇಂದು ಪ್ರತಿಕ್ರಿಯೆ ನೀಡಿದ್ದಾರೆ.
ಹಿಂದೂಗಳ ಸಂಘಟನೆ ಆಗ್ಬೇಕು. ಇಂದು ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆ ಆಗ್ತಾ ಇದೆ. ಕರ್ನಾಟಕದಲ್ಲಿ ಬಾಂಗ್ಲಾದೇಶದವರು, ರೊಹಿಂಗ್ಯಾಗಳು ಇರುವುದರಿಂದ ಮುಂದೊಂದು ದಿನ ಬಾಂಗ್ಲಾದೇಶದಲ್ಲಿ ಆದಂತ ಪರಿಸ್ಥಿತಿ ಕರ್ನಾಟಕದಲ್ಲಿ ಹಿಂದೂಗಳಿಗೆ ಬರಬಾರದು ಅಂತ ಹೇಳಿ, ಹಿಂದುಗಳು ಸಂಘಟಿತರಾಗಬೇಕು. ಬಾಂಗ್ಲಾದೇಶದಲ್ಲಾದ ಘಟನೆ ಬಗ್ಗೆ ಎಚ್ಚೆತ್ತುಕೊಂಡು ಮುಂದಿನ ದಿನಗಳಲ್ಲಿ ನಮ್ಮ ಸನಾತನ ಧರ್ಮ, ಭಾರತ ಉಳಿಯುವುದಕ್ಕೆ ಸಂಘಟನೆ ಅನಿವಾರ್ಯತೆ ಇದೆ. ಈ ಮೂಲಕ ಹಿಂದೂ ಧರ್ಮ ಉಳಿಸುವುದಕ್ಕೂ ಸಾಧ್ಯತೆ ಇದೆ. ಹೀಗಾಗಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ನಾನು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ ಎಂದಿದ್ದಾರೆ.
ವಿಜಯಪುರದ ಕಾರ್ಯಕ್ರಮದಲ್ಲಿ ಸರ್ಕಾರಕ್ಕೆ ಮುಜುಗರ ಆಯ್ತು ಎಂಬ ಮಾತಿಗೆ, ಯಾವಾಗಲೂ ಒಂದನ್ನ ತಿಳಿದುಕೊಳ್ಳಬೇಕು, ಸಿದ್ದರಾಮಯ್ಯ ಅವರು ಕಾಂಗ್ರೆಸ್ ಮುಖ್ಯಮಂತ್ರಿ ಅಲ್ಲ, ರಾಜ್ಯದ ಮುಖ್ಯಮಂತ್ರಿ ಅನ್ನೋದನ್ನ. ನಮ್ಮ ಪ್ರಧಾನ ಮಂತ್ರಿಗಳು ಬಿಜೆಪಿ ಪ್ರಧಾನಿಯಲ್ಲ ದೇಶದ ಪ್ರಧಾನಿಗಳು. ನಾನೇಗೆ ಸಿದ್ದರಾಮಯ್ಯ ಅವರಿಗೆ ಗೌರವ ಕೊಟ್ಟಿದ್ದೀನಿ, ಅದೇ ನಿರೀಕ್ಷೆ ಮಾಡ್ತೇನೆ. ನಮ್ಮ ಪ್ರಧಾನಿಗಳಿಗೂ ಅಷ್ಟೇ ಗೌರವ ಕೊಡಬೇಕು ಅಂತ. ಸಿದ್ದರಾಮಯ್ಯ ಅವರಿಗೆ ಬಹಳಷ್ಟು ಮಂದಿ ಹೋಗಿ ಹೇಳಿರ್ತಾರೆ. ಅವ ಏನು ಇಲ್ಲ ಜೀರೋ ಇರ್ತಾನೇ ಅಂತ. ಸಿದ್ದರಾಮಯ್ಯ ಅವರು ಬಂದ್ಮೇಲೆ ನೋಡಿದ್ದಾರೆ ಎಂದು ಜೈಕಾರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ
ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






