ಮೈಸೂರು; ಮೂಡಾ ಕೇಸ್ ಹಗರಣದಲ್ಲಿ ಸದ್ಯ ಸಿದ್ದರಾಮಯ್ಯ ಅವರಿಗೆ ರಿಲೀಫ್ ಸಿಕ್ಕಿದೆ. ಆದರೆ ದೂರುದಾರ ಸ್ನೇಹಮಯಿ ಕೃಷ್ಣ ಮಾತ್ರ ಆ ಕೇಸನ್ನ ಇನ್ನು ಬಿಡ್ತಾ ಇಲ್ಲ. ಈಗಲೂ ಸಿಎಂ ಸಿದ್ದರಾಮಯ್ಯ ಅವರಿಗೆ ಶಿಕ್ಷೆ ಕೊಡಿಸದೆ ಬಿಡೋದಿಲ್ಲ ಅಂತ ಹೇಳ್ತಾ ಇದಾರೆ. ಈ ಬಗ್ಗೆ ಮತ್ತೆ ಮಾತನಾಡಿರುವ ಸ್ನೇಹಮಯಿ ಕೃಷ್ಣ, ಒಂದೇ ಕೈನಲ್ಲಿ ಚಪ್ಪಾಳೆ ಹೊಡೆಯೋಕೆ ಆಗಲ್ಲ. ಈ ಸುಳ್ಳು ದಾಖಲೆಗಳನ್ನ ಸೃಷ್ಟಿಸಿ ಅಪರಾಧ ಕೃತ್ಯ ಮಾಡಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ ಎಂದಿದ್ದಾರೆ.

ಈ ಕ್ರಯಪತ್ರಕ್ಕೆ, ಈ ದಾಖಲೆಗೆ ಯಾರೂ ಸಹಿ ಮಾಡಿದ್ದಾರೆ. ಅಧಿಕಾರಿ ತಪ್ಪು ಮಾಡಿರೋದು ಯಾಕೆ. ಅರ್ಜಿ ಕೊಟ್ಟಿದ್ದಕ್ಕೆ ತಾನೇ. ನೊಂದವರು ನನ್ನ ಹಿಂದೆ ಇದ್ದಾರೆ, ಸೈನಿಕರಿಗೆ ನಿವೇಶನ ಕೊಟ್ಟಿಲ್ಲ ಅವರೆಲ್ಲಾ ನನ್ನ ಹಿಂದೆ ಇದ್ದಾರೆ. ಬರೀ ಸಿದ್ದರಾಮಯ್ಯ ಅವರ ವಿಚಾರ ಅಲ್ಲ. ನಾನು ಕೊಟ್ಟ ಅರ್ಜಿಯಲ್ಲಿ ನಿವೇಶನದ ಬಗ್ಗೆ ಮೆನ್ಶನ್ ಮಾಡಿದ್ದೇನೆ. ಕಾಂಗ್ರೆಸ್ ನವರು ನೇರವಾಗಿ ಹೋರಾಟ ಮಾಡೋದಕ್ಕೆ ಆಗಲ್ಲ. ಅವರು ಪರೋಕ್ಷವಾಗಿ ಬೆಂಬಲ ಕೊಡ್ತಾ ಇದಾರೆ. ಹಲವು ದಾಖಲೆಗಳನ್ನ ಕಾಂಗ್ರೆಸ್ ಪಕ್ಷದ ಮುಖಂಡರೆ ನನಗೆ ತಂದುಕೊಟ್ಟಿದ್ದಾರೆ.

ವಕೀಲರನ್ನೇ ನಾನು ನೇಮಿಸಿಕೊಂಡಿಲ್ಲ. ನನಗೆ ಅಷ್ಟು ಜ್ಞಾನ ಇದೆ. ಹೀಗಾಗಿ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ವಾದವನ್ನ ನಾನೇ ಮಂಡಿಸಿದ್ದೀನಿ. ಆದರೆ ಹೈಕೋರ್ಟ್ ಗೆ ಇಂಗ್ಲಿಷ್ ಭಾಷೆಯ ಅವಶ್ಯಕತೆ ಇದ್ದ ಕಾರಣ ವಕೀಲರಿಗೆ ಮನವಿ ಮಾಡಿಕೊಳ್ಳುತ್ತಾ ಇದ್ದೀನಿ. ಮತ್ತೆ ತನಿಖೆ ಮಾಡಬೇಕು ಅಂತಾನೇ ಹೇಳೋದು. ತಾರ್ಕಿಕ ಅಂತ್ಯ ಕಾಣಿಸುವವರೆಗೂ ಈ ಹೋರಾಟ ನಿಲ್ಲಿಸೋದಿಲ್ಲ. ಸಿದ್ದರಾಮಯ್ಯ ಅವರಿಗೆ ಶಿಕ್ಷೆ ಆಗುವಂತೆ ತಕರಾರು ಅರ್ಜಿಯನ್ನ ಸಿದ್ಧ ಮಾಡ್ತಾ ಇದ್ದೀನಿ ಎಂದಿದ್ದಾರೆ.


