Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬಿರು ಬೇಸಿಗೆಗೆ ಈ ಹಣ್ಣುಗಳನ್ನು ತಪ್ಪದೆ‌ ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ

---Advertisement---

ಹೊರಗೆ ಹೋದರೆ ತಣ್ಣನೆಯ ಗಾಳಿ ಎಲ್ಲಾದರೂ ಬೀಸುತ್ತಾ, ನೆರಳು ಸಿಗುತಚತಾ, ಎಷ್ಟೊತ್ತಿಗೆ ಮನೆ ಸೇರ್ತೀವಿ ಎಂಬ ಚಿಂತೆ ಶುರುವಾಗುತ್ತದೆ. ಅದಕ್ಕೆ ಕಾರಣವೇ ಈ ಬೇಸಿಗೆ. ಹೌದು ಈ ವರ್ಷವಂತೂ ಬೇಸಿಗೆ ಬೇಗನೆ ಬಂದಿರೋದು ಅಲ್ಲದೆ, ಹೆಚ್ಚಿನ ತಾಪಮಾನ ಆರಂಭವಾಗಿದೆ. ಪ್ರತಿವರ್ಷ ಕೂಡ ಬಿಸಿಲು ಹೆಚ್ಚಾಗುತ್ತಲೆ ಇರುತ್ತದೆ. ಅದರಂತೆ ಈ ವರ್ಷವೂ ಸಿಕ್ಕಾಪಟ್ಟೆ ಜಾಸ್ತಿ ಇದೆ. ಈ ಬೇಸಿಗೆ ಕಾಲಕ್ಕೆ ನಮ್ಮ ಆರೋಗ್ಯದ ವಿಚಾರ ಬಹಳ ಮುಖ್ಯವಾಗುತ್ತದೆ. ನೀರಿನಂಶ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಸೇರಿಸಲೇಬೇಕು. ಇಲ್ಲವಾದಲ್ಲಿ ಡಿಹೈಡ್ರೇಷನ್ ಸಮಸ್ಯೆ ಶುರುವಾಗಿ ಬಿಡುತ್ತದೆ. ಹೀಗಾಗಿ ಈ ಹಣ್ಣುಗಳನ್ನು ಮಿಸ್ ಮಾಡದೆ ತಿನ್ಮಿ.

* ಕಲ್ಲಂಗಡಿ ಹಣ್ಣು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಹಾಗೇ ಈ ಸಮಯದಲ್ಲಿ ಹೆಚ್ಚು ಜನ ಕಲ್ಲಂಗಡಿ ಹಣ್ಣನ್ನೇ ತಿನ್ನುವುದು. ಇದರಲ್ಲಿ 96% ನೀರಿನಂಶ ಇರುವ ಕಾರಣ ದೇಹಕ್ಕರ ತಂಪನ್ನು ನೀಡುತ್ತದೆ.

* ಹಾಗೇ ಸ್ಟ್ರಾಬೆರಿ ಕೂಡ ಈ ಬೇಸಿಗೆಗೆ ಬಹಳ ಒಳ್ಳೆಯದು. ಇದರಲ್ಲೂ 92% ನೀರಿನ ಅಂಶ ಇರುವ ಕಾರಣ, ಪ್ರತಿದಿನ ಸ್ಟ್ರಾಬೆರಿ ಸೇವಿಸುವುದರಿಂದ ಆರೋಗ್ಯ ಚೆನ್ನಾಗಿರಲಿದೆ. ನೀರಿನ ಅಂಶ ದೇಹದಲ್ಲಿ ಶೇಕರಣೆಯಾದಂತೆ ಆಗುತ್ತದೆ.

* ಟಮೋಟೋ, ಹೌದು ಅಡುಗೆಗೆ ಬಳಸುವ ಟಮೋಟೋವನ್ನು ಹಾಗೇ ತಿನ್ನುವುದರಿಂದ ಸಾಕಷ್ಟು ಆರೋಗ್ಯಕರ ಲಾಭವಿದೆ ಅನ್ನೋದು ಗೊತ್ತಾ. ಅದರಲ್ಲೂ ಈ ಬೇಸಿಗೆ ಬೇಗೆಯನ್ನು ಒಂದು ಟಮೋಟೋ ನೀಗಿಸುತ್ತದೆ. ಟಮೋಟೋದಲ್ಲಿ ಕೂಡ 94% ನೀರಿನ ಅಂಶ ಇರುವ ಕಾರಣ ಈ ಬೇಸಿಗೆಗೆ ದೇಹವನ್ನು ಆರೋಗ್ಯಯುತವಾಗಿ ಕಾಪಾಡಲು ಉಪಯೋಗಕಾರಿ.

* ಕಿತ್ತಳೆ ಹಣ್ಣಿನಲ್ಲೂ ನೀರಿನಂಶ 96% ಪರ್ಸೆಂಟ್ ಇದೆ. ಹೀಗಾಗಿ ಈ ಎಲ್ಲಾ ಹಣ್ಣುಗಳನ್ನು ಪ್ರತಿದಿನ ಸೇವಿಸುವುದರಿಂದ ದೇಹ ಡಿಹೈಡ್ರೇಷನ್ ಆಗುವುದು ತಪ್ಪುತ್ತದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...