ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
ಚಿತ್ರದುರ್ಗ: ಆತ ಒಳ್ಳೆಯ ಕೆಲಸದಲ್ಲಿದ್ದ.. ಮುದ್ದಾದ ಹೆಂಡತಿ.. ಸುಖವಾದ ಸಂಸಾರ.. ಆದರೆ ಅವರ ಬಾಳಲ್ಲಿ ಬಂದ ಮತ್ತೊಬ್ಬ ಮಹಿಳೆಯಿಂದ ಸಂಸಾರ ಒಡೆದು ಹೋಯ್ತು. ಹೆಂಡತಿಗೆ ಡಿವೋರ್ಸ್ ನೀಡಿ, ಯುವತಿಯ ಪ್ರೇಮ ಬಲೆಗೆ ಬಿದ್ದು, ಲಕ್ಷ ಲಕ್ಷ ಕಳೆದುಕೊಂಡ.. ಈಗ ಆತ್ಮಹತ್ಯೆಗೆ ಯತ್ನಿಸಿ, ಆಸ್ಪತ್ರೆಯಲ್ಲಿದ್ದಾರೆ. ಇಂಥ ಸ್ಥಿತಿಗೆ ಬಂದಿರೋದು ಚಿತ್ರದುರ್ಗ ತಾಲೂಕಿನ ಹಿರೇಗುಂಟನೂರು ಗ್ರಾಮ ಪಂಚಾಯತಿ ಸದಸ್ಯ ಮಂಜುನಾಥ್.
ಮಂಜುನಾಥ್ ಗೆ 2016ರಲ್ಲಿ ಸೌಮ್ಯ ಎಂಬ ಮಹಿಳೆಯ ಪರಿಚಯವಾಗಿತ್ತು. ಆ ಪರಿಚಯ ಪ್ರೀತಿಯ ಕಡೆಗೆ ತಿರುಗಿತ್ತು. ಆಕೆಯೂ ತನ್ನ ಗಂಡನನ್ನ ಬಿಟ್ಟು ಬಂದಳು. ಇತ್ತ ಮಂಜುನಾಥ್ ಕೂಡ ಮೋಸದ ಪ್ರೀತಿಯನ್ನು ನಂಬಿ, ಕೈಹಿಡಿದ ಹೆಂಡತಿಗೆ ಡಿವೋರ್ಸ್ ಕೊಟ್ಟು ಬಂದರು. ಕಳೆದ ನಾಲ್ಕೈದು ವರ್ಷಗಳಿಂದ ಇಬ್ಬರು ಜೊತೆಗೆ ಇದ್ದರಂತೆ. ಆದರೆ ಕಳೆದ ಮೂರ್ನಾಲ್ಕು ವರ್ಷದಿಂದ ಆಕೆಯ ನಡವಳಿಕೆಯಲ್ಲಿ ಬದಲಾವಣೆಯಾಗಿತ್ತಂತೆ. ಮೂರು ಫೋನ್ ಗಳನ್ನ ಬೇರೆ ಬಳಸುತ್ತಿದ್ದಳಂತೆ. ಅದಕ್ಕೆ ವಿರೋಧಿಸಿದಾಗ ಮಂಜುನಾಥ್ ಮೇಲೆ ಜಗಳ ಮಾಡೋದಕ್ಕೆ ಶುರು ಮಾಡಿದ್ದಾಳೆ.
ಕಳೆದ 7 ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ನಾಲ್ಕೈದು ವರ್ಷಗಳ ಜೊತೆ ಚೆನ್ನಾಗಿ ಇದ್ದೇವು. ಮೂರು ವರ್ಷಗಳಿಂದ ಆಕ್ಟಿವಿಟೀಸ್ ಬದಲಾವಣೆ ಆಗಿದ್ದವು. ನಾನು ಅದನ್ನು ವಿರೋಧಿಸಿದೆ. ನಾಲ್ಕೈದು ಬಾರಿ ಚಾಪೆಕಾಗದ ಬರೆಸಿಕೊಂಡಳು. ಸುಮಾರು 30 ರಿಂದ 35 ಲಕ್ಷ ಹಣ ಕಿತ್ತುಕೊಂಡಳು. ಮನೆ ಬಾಡಿಗೆ, ಅಡ್ವಾನ್ಸ್ ನಾನೇ ಕೊಟ್ಟಿನಿ. ಇದೀಗ ರಿಸೆಂಟ್ ಆಗಿ ಹೊಸ ಬಾಡಿಗೆ ಮನೆ ಮಾಡಿಕೊಂಡಿದ್ದಾಹೆ. ಬೆಂಗಳೂರಿನಲ್ಲಿ ಒಡಾಸಿದಳು. ನಂಬರ್ 14ರಂದು 4ಲಕ್ಷ 17 ಸಾವಿರ ಹಣವನ್ನು ಅವರ ಮನೆಗೆ ತಗೊಂಡು ಇಟ್ಟಿದ್ದೇನು. ನವೆಂಬರ್ 26ರಂದು ಹೊಸಪೇಟೆ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದಳು. ನವೆಂಬರ್ 24ರಂದು ನನಗೂ ನಿನಗೂ ಸಂಬಂಧ ಇಲ್ಲವೆಂದು ಒಂದು ವಿಡಿಯೋ ಮಾಡಿಸಿಕೊಡು ಎಂದಳು. ಆ ವಿಡಿಯೋ ಇಟ್ಕೊಂಡು ನಿನ್ನ ಹಣವನ್ನು ವಾಪಸ್ ಕೊಡುವುದಾಗಿ ಹೇಳಿದಳು. ಇದೀಗ ಮಂಜುನಾಥ್ ಹಣವನ್ನು ವಾಪಸ್ ಕೊಡುವಂತೆ ಕೇಳಿದಾಗ ಹಲ್ಲೆ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾಳೆ. ಮರ್ಯಾದೆಗೆ ಅಂಜಿಕೊಂಡು ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ, ಆಸ್ಪತ್ರೆ ಸೇರಿ, ನನಗೆ ಆಕೆಯಿಂದ ಮುಕ್ತಿ ಕೊಡಿ ಅಂತಾ ಮಂಜುನಾಥ್ ಮನವಿ ಮಾಡಿದ್ದಾರೆ.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್ಡೇಟ್. ನೀವು ಯಾವಾಗಲೂ ಅಪ್ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್