Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಈ ವಾರ ಬಿಗ್ ಬಾಸ್ ಮನೆಯಿಂದ ಬರ್ತಾ ಯಾರು ಗೊತ್ತಾ..? ಸುದೀಪ್ ಕೊಟ್ಟ ಅವಕಾಶವನ್ನು ಬಳಸಿಕೊಳ್ಳಲಾಗಲಿಲ್ವಾ..?

Facebook
Twitter
Telegram
WhatsApp

ಬಿಗ್ ಬಾಸ್ ಸೀಸನ್ 10.. ಈ ವಾರವಂತು ಸಾಕಷ್ಟು ಕಠಿಣವಾಗಿತ್ತು. ಬಿಗ್ ಬಾಸ್ ಏನೋ ನಿರೀಕ್ಷೆ ಮಾಡಿ ಕೊಟ್ಟ ಟಾಸ್ಕ್ ಸಂಪೂರ್ಣವಾಗಿ ಬೇರೆ ರೀತಿಯಾಗಿಯೇ ಟರ್ನ್ ಆಗಿತ್ತು. ರಾಕ್ಷಸರು ಹಾಗೂ ಗಂಧರ್ವರು ಅಂತ ಮಾಡಿದ್ದು ಮನರಂಜನೆಯಾಗಿರಬೇಕು ಅಂತ. ಆದರೆ ಮನೆ ದ್ವೇಷವಾಗಿ ಬದಲಾಗಿ ಹೋಗಿತ್ತು.

ಕಳೆದ ವಾರವೇ ಒಬ್ಬರು ಎಲಿಮಿನೇಷನ್ ಆಗಬೇಕಿತ್ತು. ಆದರೆ ಸುದೀಪ್ ಅವರ ಕೃಪಾ ಕಟಾಕ್ಷದಿಂದ ಮನೆಯಿಂದ ಹೊರಗೆ ಬರದೆ ಎಲ್ಲರೂ ಸೇಫ್ ಆಗಿದ್ದರು. ಈ ವಾರಪೂರ್ತಿ ಕ್ಯಾಪ್ಟನ್ ಆದಂತ ಸ್ನೇಹಿತ್ ಗೆ ವಿಶೇಷ ಅಧಿಕಾರವನ್ನೇ ನೀಡಲಾಗಿತ್ತು. ಆದರೆ ಸ್ನೇಹಿತ್, ಆ ವಿಶೇಷ ಅಧಿಕಾರಕ್ಕೂ ನ್ಯಾಯ ಕೊಡಲಿಲ್ಲ, ಸುದೀಪ್ ಅವರ ವಿಶೇಷ ಅವಕಾಶಕ್ಕೂ ನ್ಯಾಯ ಕೊಡಲಿಲ್ಲ.

ಕ್ಯಾಪ್ಟನ್ ಆಗಿ, ವಿಶೇಷ ಅಧಿಕಾರ ಪಡೆದು ಕೆಳ ಮಟ್ಟದ ಆಟವನ್ನೇ ಆಡಿದರು. ನ್ಯಾಯ ಕೊಡುವಾಗ ಒಬ್ಬರ ಪರವಾಗಿ ಕೊಡುವುದಕ್ಕೆ ಶುರು ಮಾಡಿದರು. ಸಮಾನವಾದ ಟೀಂ ಮಾಡಿ ಎಂದರೆ ತಮಗೆ ಇಷ್ಟವಾದ ಟೀಂ ಮಾಡಿದರು. ಇದೆಲ್ಲವನ್ನು ಬಿಗ್ ಬಾಸ್ ಗಮನಿಸಿತ್ತು, ಪ್ರಶ್ನಿಸಿತ್ತು. ತನ್ನದೇ ಸರಿ ಎಂದು ಹೇಳಿದ್ದ ಸ್ನೇಹಿತ್ ನನ್ನು ಸುಮ್ಮನೆ ಬಿಟ್ಟು ಬಿಟ್ಟಿತ್ತು. ಆದರೆ ಕಿಚ್ಚ ತನ್ನ ಪಂಚಾಯ್ತಿಯಲ್ಲಿ ಎಲ್ಲರ ತಪ್ಪನ್ನು ಸರಿ ಮಾಡುವ ಪ್ರಯತ್ನ ಮಾಡಿದರು. ಆದರೆ ಸ್ನೇಹಿತ್ ಆಟಕ್ಕಂತೂ ಬೇಸರವನ್ನು ವ್ಯಕ್ತಪಡಿಸಿದರು. ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದಾಗ ಮನೆಯಿಂದ ಹೊರಗೆ ಬರುತ್ತಿರುವುದು ಸ್ನೇಹಿತ್ ಎಂದೇ ಮೂಲಗಳು ತಿಳಿಸುತ್ತಿವೆ. ಸಿರಿ ಹಾಗೂ ಸ್ನೇಹಿತ್ ಬಾಟಮ್ ನಲ್ಲಿ ಕುಳಿತಿದ್ದು, ಸ್ಮೇಹಿತ್ ಬಿಗ್ ಬಾಸ್ ಆಟ ಮುಗಿಸಿದ್ದಾರೆ ಎನ್ನಲಾಗುತ್ತಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

Curry Leaves Juice : ಕರಿಬೇವಿನ ಜ್ಯೂಸ್ ಕುಡಿಯುವುದರಿಂದ ಆಗುವ ಲಾಭಗಳೇನು ?

ಸುದ್ದಿಒನ್ : ಅಡುಗೆಯಲ್ಲಿ ಕರಿಬೇವಿನ ಸೊಪ್ಪನ್ನು ಸಾಮಾನ್ಯವಾಗಿ ಬಳಸುತ್ತೇವೆ. ವಿವಿಧ ರೀತಿಯ ಅಡುಗೆಗೆ ಅವಶ್ಯವಾಗಿ ಬಳಸಲಾಗುತ್ತದೆ. ಕರಿಬೇವಿನ ಎಲೆಗಳನ್ನು ಹಾಕುವುದರಿಂದ ಉತ್ತಮ ರುಚಿ ಮತ್ತು ಪರಿಮಳ ಹೆಚ್ಚುತ್ತದೆ. ರುಚಿ ಮತ್ತು ವಾಸನೆ ಮಾತ್ರವಲ್ಲದೆ ತುಂಬಾ

ಈ ರಾಶಿಯ ಗುತ್ತಿಗೆದಾರರಿಗೆ ಹೊಸ ಟೆಂಡರ್ ಹಾಗೂ ಹಳೆ ಬಾಕಿ ಅತಿ ಶೀಘ್ರದಲ್ಲಿ ಪಡೆಯಲಿದ್ದೀರಿ

ಈ ರಾಶಿಯ ಗುತ್ತಿಗೆದಾರರಿಗೆ ಹೊಸ ಟೆಂಡರ್ ಹಾಗೂ ಹಳೆ ಬಾಕಿ ಅತಿ ಶೀಘ್ರದಲ್ಲಿ ಪಡೆಯಲಿದ್ದೀರಿ, ಈ ರಾಶಿಯವರು ಆಸ್ತಿ ಉಡುಗೊರೆಯಾಗಿ ಪಡೆಯುವಿರಿ, ಶನಿವಾರ ರಾಶಿ ಭವಿಷ್ಯ -ಜುಲೈ-27,2024 ಸೂರ್ಯೋದಯ: 05:58, ಸೂರ್ಯಾಸ್ತ : 06:47

error: Content is protected !!