Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬಿಗ್ ಬಾಸ್ ಮನೆಯಿಂದ ಇಂದು ಹೊರಗೆ ಬರೋದು ಯಾರು ಗೊತ್ತಾ..?

Facebook
Twitter
Telegram
WhatsApp

ಬಿಗ್ ಬಾಸ್ ಸೀಸನ್ 10 ಜಗಳ, ಮನಸ್ತಾಪ, ಒಬ್ಬರ ಮೇಲೊಬ್ಬರ ವಾಗ್ದಾಳಿ ಈ ಮೂಲಕವೇ ನಡೆದುಕೊಂಡು ಬರುತ್ತಿದೆ. ಬಿಗ್ ಬಾಸ್ ಶುರುವಾಗಿ ತಿಂಗಳಾಗಿದೆ. ಈ ವಾರವೂ ಮನೆಯಿಂದ ಒಬ್ಬರು ಹೊರಗೆ ಬರಲಿದ್ದಾರೆ. ದೀಪಾವಳಿ ಹಬ್ಬದ ದಿನ ಯಾರಿಗೆ ಕತ್ತಲು ಆವರಿಸಲಿದೆ ಎಂಬುದು ಕುತೂಹಲವಾಗಿದೆ.

ಈ ವಾರದ ನಾಮಿನೇಷನ್ ನಲ್ಲಿ ನಮ್ರತಾ, ಕಾರ್ತಿಕ್, ತುಕಾಲಿ, ಸ್ನೇಹಿತ್, ವರ್ತೂರ್ ಸಂತೋಷ್, ಇಶಾನಿ ಇದ್ದಾರೆ. ಈಗಾಗಲೇ ನಿನ್ನೆಯ ಎಪಿಸೋಡ್ ನಲ್ಲಿ ನಮ್ರತಾ, ಕಾರ್ತಿಕ್, ತುಕಾಲಿ ಸೇವ್ ಆಗಿದ್ದಾರೆ. ಇಂದು ವರ್ತೂರ್ ಸಂತೋಷ್ ಕೂಡ ಸೇವ್ ಆಗಲಿದ್ದಾರೆ. ಆದರೆ ವರ್ತೂರ್ ಸಂತೋಷ್ ಗೆ ಮನೆಯಲ್ಲಿ ಇರುವುದಕ್ಕೆ ಕೊಂಚವೂ ಇಷ್ಟವಿಲ್ಲ. ಹುಲಿ ಉಗುರು ಪ್ರಕರಣದಲ್ಲಿ ಜೈಲು ಸೇರಿದ್ದ ದಿನಗಳೇ ವರ್ತೂರ್ ಸಂತೋಷ್ ಅವರಿಗೆ ನೋವು ನೀಡಿದೆ. ಅದರಿಂದ ಹೊರಗೆ ಬರುವುದಕ್ಕೆ ಸಾಧ್ಯವೇ ಆಗುತ್ತಿಲ್ಲ. ಹೀಗಾಗಿ ನಾನು ಮನೆಯಲ್ಲಿ ಇರಲ್ಲ ಎಂದೇ ಹೇಳುತ್ತಿದ್ದಾರೆ. ಆದರೆ ಸುದೀಪ್, ಜನರ ಆಯ್ಕೆಗೆ ವಿರುದ್ಧವಾಗಿ ನಾನು ಹೋಗಲ್ಲ ಎಂದಿದ್ದಾರೆ.

ಇನ್ನು ಇಶಾನಿ ಕೂಡ ನಾಮಿನೇಷನ್ ಲೀಸ್ಟ್ ನಲ್ಲಿ ಇದ್ದಾರೆ. ಮೈಕೆಲ್ ತನ್ನ ಆಟವನ್ನು ಆಡುವುದಕ್ಕೆ ಬಿಡುತ್ತಿಲ್ಲ. ಡಾಮಿನೇಟ್ ಸಿಕ್ಕಾಪಟ್ಟೆ ಮಾಡುತ್ತಾರೆ. ಜೊತೆಗೆ ಮಾತಿಗೆ ಮುಂಚೆ ಜೋರಾಗಿ ಕಣ್ಣೀರು ಹಾಕಿ, ನೋಡುಗರಿಗೆ ಕಿರಿಕಿರಿ ಮಾಡುತ್ತಿದ್ದಾರೆ. ಹೀಗಾಗಿ ಈ ವಾರ ಇಶಾನಿಯೇ ಮನೆಯಿಂದ ಹೊರಗೆ ಬರುವ ಸಾಧ್ಯತೆ ಹೆಚ್ಚಾಗಿದೆ. ಇಂದು ಸೂಪರ್ ಸಂಡೇ ವಿತ್ ಸುದೀಪ್ ಪಂಚಾಯ್ತಿ ಕಟ್ಟೆಯಲ್ಲಿ ದೀಪಾವಳಿಯ ದಿನ ಯಾರ ಬಿಗ್ ಬಾಸ್ ಜರ್ನಿ ಮುಗಿಯುತ್ತೆ ಎಂಬುದನ್ನು ನೋಡಬೇಕಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹಿರಿಯೂರು | ಬೈಕ್ ಅಪಘಾತ, ಸ್ಥಳದಲ್ಲೇ ಓರ್ವ ಸಾವು..!

ಸುದ್ದಿಒನ್,  ಹಿರಿಯೂರು, ಮೇ. 05 : ನಗರದ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಆಲೂರು ಕ್ರಾಸ್ ಚಾನೆಲ್ ಬಳಿ ಸ್ಕೂಟಿ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಾಯಗೊಂಡ

ಪ್ರಜ್ವಲ್ ರೇವಣ್ಣ ಜೊತೆ ವಿಡಿಯೋದಲ್ಲಿದ್ದ ಮಹಿಳಾ ಅಧಿಕಾರಿಗಳಿಗೂ ಸಂಕಷ್ಟ : ಎಸ್ಐಟಿಯಿಂದ ನೋಟೀಸ್

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋದಲ್ಲಿ ಸರ್ಕಾರಿ ಅಧಿಕಾರಿಗಳು ಕೂಡ ಇರುವುದು ಗಮನಕ್ಕೆ ಬಂದಿದೆ. ಪೊಲೀಸ್ ಅಧಿಕಾರಿ, ಅರಣ್ಯಾಧಿಕಾರಿ, ಬೆಂಗಳೂರಿನ ಎಇಇ ಫೋಟೋ, ವಿಡಿಯೋಗಳು ವೈರಲ್ ಆಗಿದ್ದವು. ಇದೀಗ ಅವರಿಗೆಲ್ಲಾ ಟೆನ್ಶನ್ ಶುರುವಾಗಿದೆ. ಎಸ್ಐಟಿ

ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆ ಎರಡನೇ ಸ್ವಾತಂತ್ರ್ಯ ಹೋರಾಟ : ಮುಖ್ಯಮಂತ್ರಿ ಸಿದ್ದರಾಮಯ್ಯ

  ಬೆಳಗಾವಿ , ಮೇ 05 : ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 400 ಸ್ಥಾನಗಳನ್ನು ನೀಡಿದರೆ ಸಂವಿಧಾನವನ್ನು ಬದಲಾವಣೆ ಮಾಡುವುದಾಗಿ ಬಿಜೆಪಿ ಹಾಗೂ ಆರ್ ಎಸ್ ಎಸ್ ಹೇಳುತ್ತಿದ್ದು, ಈ ಚುನಾವಣೆ ಎರಡನೇ ಸ್ವಾತಂತ್ರ್ಯ

error: Content is protected !!