Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅಳವಿ ಬೀಜ ಗೊತ್ತಲ್ವಾ.. ಅದರಿಂದ ಎಷ್ಟೆಲ್ಲಾ ಲಾಭಗಳಿದಾವೆ ಅನ್ನೋದು ನಿಮಗೆ ಗೊತ್ತಿಲ್ಲ..?

---Advertisement---

ಅಡುಗೆ ಮನೆಯಲ್ಲಿ ಅಮ್ಮಂದಿರು ಬಳಸುವ ಪ್ರತಿಯೊಂದು ಪದಾರ್ಥದಲ್ಲೂ ಹಲವು ಪೌಷ್ಠಿಕಾಂಶಗಳು ಅಡಗಿವೆಮ ಅಷ್ಟೇ ಅಲ್ಲ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸಲು ಬೇರೆಲ್ಲೂ ಹೋಗಬೇಕಾದ ಅವಶ್ಯಕತೆಯೇ ಇರುವುದಿಲ್ಲ. ಅದರಲ್ಲೂ ಅಳವಿ ಬೀಜ ಒಂದಿದ್ದರು ಎಷ್ಟೋ ಕಾಯಿಲೆಗಳು ಗುಣಮುಖವಾಗುತ್ತವೆ.

ಅಳವಿ ಬೀಜದಲ್ಲಿ ಕಬ್ಬಿಣಾಂಶ, ಫಾಲಿಕ್ ಆಸಿಡ್, ವಿಟಮಿನ್ ಎ ಹಾಗೂ ವಿಟಮಿನ್ ಸಿ ಅಂಶಗಳು ಇದಾವೆ. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಈ ಅಳವಿ ಬೀಜಗಳನ್ನ ಬಳಸುವುದರಿಂದ ಮೈ ಕೈ ನೋವು ಸೊಂಟ ನೋವು ಮಾಯವಾಗುತ್ತದೆ. ರಿಲ್ಯಾಕ್ಸ್ ಸಿಗುತ್ತದೆ. ಅಷ್ಟೇ ಅಲ್ಲ, ಬಾಣಂತಿಯರ ಎದೆ ಹಾಲು ಹೆಚ್ಚಿಸುವ ಗುಣ ಹೊಂದಿವೆ. ಮಲಬದ್ಧತೆಯ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಅತಿಸಾರ ಏನಾದರೂ ಹೆಚ್ಚಾಗಿದ್ದರೆ ಕಡಿಮೆ ಮಾಡುತ್ತದೆ.

ಸಾಕಷ್ಟು ಜನ ತೂಕ ಇಳಿಸಲು ಒದ್ದಾಡುತ್ತಾರೆ ಅಲ್ವಾ ಅಂಥವರು , ಅಳವಿ ಬೀಜಗಳನ್ನ ಡಯೆಟ್ ರೀತಿ ಬಳಸಬಹುದಾಗಿದೆ. ಕೈ ಕಾಲು ಉಳುಕಿದಾಗ ಬೀಜಗಳನ್ನು ಅರೆದು ಲಿಂಬೆ ರಸ ಸೇರಿಸಿ ಲೇಪಿಸಬೇಕು. ಬೀಜಗಳನ್ನು ಎಳ್ಳೆಣ್ಣೆ ಯಲ್ಲಿ ಕುದಿಸಿ ಸೋಸಿ ಶರೀರದ ಬಾವು ನೋವುಗಳಿಗೆ ಲೇಪಿಸಬೇಕು. ಬೀಜಗಳನ್ನು ನೀರಿನಲ್ಲಿ ನೆನೆಸಿದಾಗ ಕಾಮ ಕಸ್ತೂರಿ ಬೀಜಗಳ ಹಾಗೆ ಉಬ್ಬುತ್ತವೆ. ಈ ಬೀಜಗಳನ್ನು ಸಕ್ಕರೆ
ಬೆರೆಸಿದ ಬಿಸಿ ಹಾಲಿನಲ್ಲಿ ಹಾಕಿ ತುಪ್ಪ ಸೇರಿಸಿ ಕುಡಿಯ ಬಹುದು. ಈ ಮೂಲಕ ಅಳವಿ‌ಬೀಜ ಹಲವು ರೋಗಗಳಿಗೆ ಮದ್ದು ಸರಿ. ಅದರಲ್ಲೂ ಬಾಣಂತಿಯರಿಗೆ ಈ ಬೀಜಗಳನ್ನ ಹೆಚ್ಚಾಗಿ ನೀಡುತ್ತಾರೆ. ರೋಗನಿರೋಧಕ ಶಕ್ತಿಯನ್ನು ಇದರಿಂದ ಹೆಚ್ಚಿಸಿಕೊಳ್ಳಬಹುದಾಗಿದೆ. ಹೀಗಾಗಿ ನೀವೂ ಅದನ್ನ ಸ್ವೀಟ್ ಉಂಡೆ ಮಾಡಿಕೊಂಡು ಸೇವಿಸಬಹುದು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment