Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಡಿಕೆಶಿ ಜೊತೆಗೆ ವಿ ಸೋಮಣ್ಣ ಫೋಟೋ ವೈರಲ್ : ಸಿಎಂ ಸಂಧಾನ ಯಶಸ್ವಿಯಾಗಲಿಲ್ಲವಾ..?

---Advertisement---

 

ಬೆಂಗಳೂರು: ಎಲ್ಲ ಪಕ್ಷದಲ್ಲೂ ವೈಯಕ್ತಿಕ ಭಿನ್ನಾಭಿಪ್ರಾಯ, ಮನಸ್ತಾಪ ಇರುವುದು ಕಾಮನ್. ಚುನಾವಣೆ ಹತ್ತಿರವಾಗುವಾಗ ಭಿನ್ನಾಭಿಪ್ರಾಯದಿಂದಾನೇ ಪಕ್ಷ ಬದಲಾವಣೆ ಕೂಡ ನಡೆಯಲಿದೆ. ಈಗ ಬಿಜೆಪಿಯ ಸಚಿವ ಸೋಮಣ್ಣ ವಿಚಾರ ಚರ್ಚೆಯಲ್ಲಿದೆ.

ಹಲವು ತಿಂಗಳಿನಿಂದ ಸಚಿವ ಸೋಮಣ್ಣ, ಬಿಜೆಪಿ ನಡವಳಿಕೆಗೆ ಬೇಸತ್ತಿದ್ದಾರೆ. ಅದಾಗಲೇ ಅವ್ರು ಕಾಂಗ್ರೆಸ್ ಸೇರ್ಪಡೆಗೆ ಸಿದ್ಧತೆ ನಡೆದಿದೆ ಎಂಬೆಲ್ಲಾ ವಿಚಾರ ಜೋರಾಗಿತ್ತು. ಇದರ ಬೆನ್ನಲ್ಲೇ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಸಮಾಧಾನ ಮಾಡುವ ಪ್ರಯತ್ನ ನಡೆಸಿದ್ದರು. ಅಸಾಮಧಾನವನ್ನು ಅಳಿಸುವ ಪ್ರಯತ್ನಕ್ಕೆ ಕಾರಣವಾಗಿತ್ತು. ಆದರ ಸಿಎಂ ಬೊಮ್ಮಾಯಿ ಅವರ ಸಂಧಾನ ಸಭೆ ಸಫಲವಾಗಿರುವುದು ಅಷ್ಟಾಗಿ ಕಾಣಿಸುತ್ತಿಲ್ಲ. ಯಾಕಂದ್ರೆ ಇಂದು ಸಚಿವ ಸೋಮಣ್ಣ ಅವರಿಗೆ ಸಂಬಂಧಪಟ್ಟಂತ ಫೋಟೋವೊಂದು ವೈರಲ್ ಆಗ್ತಾ ಇದೆ.

ಫ್ಲೈಟ್ ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಜೊತೆಗೆ ವಿ ಸೋಮಣ್ಣ ಇರುವಂತ ಫೋಟೋವಿದು. ಕಾಂಗ್ರೆಸ್ ಸೇರುವ ವಿಚಾರವನ್ನು ಇಲ್ಲಿಯೇ ಚರ್ಚೆ ನಡೆಸಿದ್ರಾ ಎಂಬೆಲ್ಲಾ ಚರ್ಚೆಗಳು ಆರಂಭವಾಗಿದೆ. ಸಚಿವ ಸೋಮಣ್ಣ ಅವರು ಮಧ್ಯಾಹ್ನ ಸುದ್ದಿಗೋಷ್ಟಿ ಕರೆದಿದ್ದಾರೆ. ಇಲಾಖೆಗೆ ಸಂಬಂಧಪಟ್ಟಂತೆ ಮಾತನಾಡುವ ಸಾಧ್ಯತೆ ಜೊತೆಗೆ ಡಿಕೆಶಿ ಜೊತೆಗಿನ ಫೋಟೋ ಬಗ್ಗೆಯೂ ಕ್ಲಾರಿಟಿ ಕೊಡಬಹುದು ಎಂದು ಊಹಿಸಲಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...