ತುಮಕೂರು: ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಪಕ್ಷವನ್ನು ಅಧಿಕಾರಕ್ಕೆ ತರುವುದಕ್ಕೆ ಅವರ ಶ್ರಮವು ಹೆಚ್ಚಾಗಿರುವ ಕಾರಣ, ಸಿಎಂ ಆಗುವ ಭರವಸೆಯನ್ನ ಹಾಗೇ ಉಳಿಸಿಕೊಂಡಿದ್ದಾರೆ. ಅವರ ಬೆಂಬಲಿಗರು ಕೂಡ ಡಿಕೆ ಶಿವಕುಮಾರ್ ಸಿಎಂ ಆಗಲಿ ಅಂತಾನೇ ಬಯಸುತ್ತಿದ್ದಾರೆ. ಸದ್ಯ ರಾಜ್ಯ ರಾಜಕಾರಣದಲ್ಲಿ ಸಿಎಂ ಚರ್ಚೆಯೇ ಬಹಳ ಕುತೂಹಲಕಾರಿಯಾಗಿದೆ. ಇದೀಗ ದೈವ ನುಡಿ ಡಿಕೆಶಿ ಬೆಂಬಲಿಗರಿಗೂ ಖುಷಿ ನೀಡಿದೆ.
ಮುಖ್ಯಮಂತ್ರಿ ಸ್ಥಾನದ ವಿಚಾರದಲ್ಲಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಸಿದ್ದೇಶ್ವರ ಸನ್ನಿಧಿಯಲ್ಲಿ ದೈವ ನುಡಿದಿರುವ ಸನ್ನಿವೇಶ ನಡೆದಿದೆ. ಡಿಕೆ ಶಿವಕುಮಾರ್ ಅಭಿಮಾನಿಯೊಬ್ಬರು ದೈವದ ಬಳಿ ಪ್ರಶ್ನೆ ಕೇಳಿದ್ದಾರೆ. ಆಗ ದೈವ ಈಗಾಗಲೇ ಭವಿಷ್ಯ ನುಡಿದು ಆಗಿದೆಯಲ್ಲ. ಆದಷ್ಟು ಬೇಗ ಸಿಎಂ ಆಗ್ತಾರೆ ಎಂದಿದೆ. ಅವರಿಗೆ ಬೇಕಾದ ಪ್ರಸಾದವನ್ನು ಕಳುಹಿಸಿದ್ದೇನೆ. ಆದಷ್ಟು ಬೇಗ ಆಸೆ ಈಡೇರುತ್ತದೆ. ಇಷ್ಟು ದಿನ ತಡವಾಗಿದ್ದರು ಸಹ, ಇನ್ನು ಮುಂದೆ ಅವರ ಅನುಗ್ರಹ ಇರಲಿದೆ. ಅವರು ಯಾವಾಗ ಆ ಸ್ಥಾನದಲ್ಲಿ ಕೂರ್ತಾರೋ ಸನ್ನಿಧಾನಕ್ಕೆ ಕೆಲವೊಂದು ವಿಚಾರಗಳನ್ನ ತಿಳಿಸಿಕೊಟ್ಟಿದ್ದಾರೆ. ಅದನ್ನು ಚಾಚು ತಪ್ಪದೆ ನಡೆದುಕೊಳ್ಳುವುದಕ್ಕೆ ಹೇಳಿ. ಆ ನಂತರ ಪ್ರಯತ್ನಕ್ಕೆ ಫಲವನ್ನು ದೇವರು ಒದಗಿಸಿಕೊಟ್ಟಂತೆ ಆಗುತ್ತದೆ ಎಂದಿದ್ದಾರೆ.
ದೈವದ ನುಡಿಯನ್ನು ನಂಬುವವರು ಅಪಾರವಾಗಿದ್ದಾರೆ. ಹೀಗಾಗಿ ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಏರುವ ಬಗ್ಗೆ, ದೈವದ ಸೂಚನೆಯಂತೆ ನಡೆದುಕೊಳ್ಳುವ ಬಗ್ಗೆ ಸೂಚನೆ ಸಿಕ್ಕಿದೆ. ಒಂದು ವೇಳೆ ಡಿಕೆ ಶಿವಕುಮಾರ್ ಅವರು, ದೈವ ಹೇಳಿದಂತೆ ನಡೆದುಕೊಂಡರೆ ಸಿಎಂ ಸ್ಥಾನಕ್ಕೆ ಏರಲು ಬಹುದು.

