ರಾಜಣ್ಣ ನೀಡಿದ್ದು ರಾಜೀನಾಮೆನಾ ಅಥವಾ ತೆಗೆದು ಹಾಕಿದ್ದ : ಪರಮೇಶ್ವರ್ ಹೇಳಿದ್ದೇನು..?

1 Min Read
ಸಚಿವ ಪರಮೇಶ್ವರ್

ಬೆಂಗಳೂರು: ನಿನ್ನೆಯಿಂದ ಕೆ ಎನ್ ರಾಜಣ್ಣ ರಾಜೀನಾಮೆ ವಿಚಾರ ಬಹಳಷ್ಟು ಆಯಾಮದಲ್ಲಿ ಚರ್ಚೆಯಾಗ್ತಾ ಇದೆ. ಒಮ್ಮೆ ಅವರೇ ರಾಜೀನಾಮೆ ನೀಡಿದರು ಎಂದು ಹೇಳಿದರೆ ಇನ್ನೊಮ್ಮೆ ಇಲ್ಲ ಅವರನ್ನ ವಜಾ ಮಾಡಿರೋದು ಎಂಬ ಮಾತುಗಳು ಕೇಳಿ ಬರ್ತಾ ಇದೆ. ಈ ಸಂಬಂಧ ಗೃಹ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.

ಕಾರಣ ಅಷ್ಟು ವಿವರವಾಗಿ ನನಗೆ ಗೊತ್ತಿಲ್ಲ. ಹೈಕಮಾಂಡ್ ನಿರ್ಧಾರ ತೆಗೆದುಕೊಂಡಿದೆ. ನಮ್ಮಲ್ಲಿ ಹೈಕಮಾಂಡ್ ನಿರ್ಧಾರವನ್ನ ಎಲ್ಲರು ಗೌರವಿಸುತ್ತೇವೆ. ಹೈಕಮಾಂಡ್ ಈ ರೀತಿಯ ನಿರ್ಧಾರ ಯಾಕೆ ತೆಗೆದುಕೊಂಡಿದ್ದಾರೆ ಎಂಬುದು ಸಿಎಂ, ಡಿಸಿಎಂಗೆ ಗೊತ್ತಿರಬಹುದು. ಆದರೆ ನಮಗೆಲ್ಲಾ ಅದು ಗೊತ್ತಿಲ್ಲ. ರಾಜಣ್ಣ ಅವರಿಗೆ ಸ್ವಾಭಾವಿಕವಾಗಿಯೇ ಬೇಸರವಾಗಿರುತ್ತದೆ. ಅವರು ತೆಗೆದು ಹಾಕಿರೋದು. ಅವರೇ ಪತ್ರ ಬರೆದಿದ್ದಾರೆ ಅಂತ ಹೇಳಿದ್ರು. ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರೋದು. ನಾವೂ ಯಾರದ್ದೋ ಮೇಲೆ ಹೋಗಿ ಚಾಡಿ ಹೇಳಿದ್ರೆ ಹೈಕಮಾಂಡ್ ಅವರು ಕೇಳಿ ಬಿಡೋದಿಲ್ಲ. ಅವರದ್ದೇ ಆದಂತ ಸೋರ್ಸ್ ಇರುತ್ತೆ, ಮಾಹಿತಿ ಇರುತ್ತೆ. ನಮ್ಮಲ್ಲಿ ಹೈಕಮಾಂಡ್ ಗೆ ಎಲ್ಲರು ಬದ್ಧವಾಗಿರಬೇಕು. ಎಲ್ಲಾ ಪಕ್ಷದಲ್ಲೂ ಇದು ಇದ್ದೇ ಇದೆ. ಯಾವ ಕಾರಣಕ್ಕೆ ವಜಾ ಮಾಡಿದ್ದಾರೆ ಎಂಬುದು ಗೊತ್ತಿಲ್ಲ ಎಂದಿದ್ದಾರೆ.

ಸೆಪ್ಟೆಂಬರ್ ಕ್ರಾಂತಿ ಆಗುತ್ತೆ ಅಂತ ಹೇಳಿ ರಾಜಣ್ಣ ದೊಡ್ಡ ಸಂಚಲವನ್ನೇ ಸೃಷ್ಟಿ ಮಾಡಿದ್ದರು. ಈಗ ಅವರದ್ದೇ ತಲೆ ದಂಡ ಆಗಿರುವ ಬಗ್ಗೆ ಕೇಳಿದ್ದಕ್ಕೆ, ಆ ಬಗ್ಗೆ ನನಗೆ ಗೊತ್ತಿಲ್ಲ. ಸೆಪ್ಟೆಂಬರ್ ಕ್ರಾಂತಿ ಬಗ್ಗೆ ಎಲ್ಲಾ ಗೊತ್ತಿಲ್ಲ ಎಂದಿದ್ದಾರೆ. ನನಗೂ ಆಶ್ಚರ್ಯವಾಗ್ತಾ ಇದೆ ಏನು, ಯಾಕೆ ಎಂಬುದನ್ನ ಕೇಳಿ ಅಂತ ನನಗೆ ಹೇಳಿದ್ರು. ಆದ್ರೆ ನಾನು ಯಾರನ್ನು ಸಂಪರ್ಕ‌ ಮಾಡೋದಕ್ಕೆ ಹೋಗಲಿಲ್ಲ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks