ದರ್ಶನ್ ಪತ್ನಿ ವಿಜಯಲಕ್ಷ್ಮಿಗೂ ಕೆಟ್ಟ ಕಮೆಂಟ್ ಕಾಟ..!

1 Min Read

ನಟಿ ರಮ್ಯಾ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಕೆಟ್ಟ ಕಮೆಂಟ್ ಗಳು ಬಂದ ಬಗ್ಗೆ ಎಲ್ಲರಿಗೂ ಗಿತ್ತು. ಆ ಕಮೆಂಟ್ ಗಳನ್ನೆಲ್ಲ ಇಟ್ಟುಕೊಂಡು ರಮ್ಯಾ ನೇರವಾಗಿ ಪೊಲೀಸ್ ಕಮಿಷನರ್ ಕಚೇರಿಗೆ ಹೋಗಿ ದೂರು ನೀಡಿ ಬಂದಿದ್ದರು. ಆಮೇಲೆ ಪೊಲೀಸರು ಕೂಡ ಆರೋಪಿಗಳನ್ನ ಬಂಧಿಸಿದ್ದರು. ಇದೀಗ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಕೂಡ ಕೆಟ್ಟ ಕಮೆಂಟ್ ಗಳನ್ನ ಎದುರಿಸುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ಪುತ್ರ ವಿನೀಶ್ ನನ್ನು ಟಾರ್ಗೆಟ್ ಮಾಡಲಾಗಿದೆ. ನಿಂದನೆ ಮಾಡಿ ಕಮೆಂಟ್ ಗಳನ್ನ ಹಾಕಲಾಗುತ್ತಿದ್ದು, ಈ ಸಂಬಂಧ ಕ್ರಮ ಕೈಗೊಳ್ಳಿ ಅಂತ ಪೊಲೀಸ್ ಆಯುಕ್ತರಿಗೆ ಮಹಿಳಾ ಆಯೋಗ ಪತ್ರವನ್ನ ಬರೆದಿದೆ. ಮಹಿಳಾ ಆಯೋಗ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಈ ಪತ್ರ ಬರೆದಿದ್ದಾರೆ. ಕ್ರಮದ ಬಗ್ಗೆ ಹದಿನೈದು ದಿನದಳಿ ವರದಯನ್ನು ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.

ಈ ಬಗ್ಗೆ ಮಾತನಾಡಿರುವ ನಾಗಲಕ್ಷ್ಮೀ ಚೌಧರು ಅವರು, ನಿನ್ನೆ ಭಾಸ್ಕರ್ ಪ್ರಸಾದ್ ಅವರು ವಿಜಯಲಕ್ಷ್ಮೀ ದರ್ಶನ್ ಅವರ ಬಗ್ಗೆ ಅವಹೇಳನಕಾರಿ ಸಂದೇಶಗಳನ್ನ ಮಾಡ್ತಾ ಇದ್ದಾರೆ. ರಮ್ಯಾ ಅವರಿಗೆ ಹೇಗೆ ಮಾಡುದ್ರೋ ಅದೇ ರೀತಿಯ ಕಮೆಂಟ್ ಗಳನ್ನ ಹಾಕ್ತಾ ಇದ್ದಾರೆ. ಇದು ವಿಜಯಲಕ್ಷ್ಮೀ, ರಮ್ಯಾ ಅಂತಲ್ಲ ಯಾವುದೇ ಹೆಣ್ಣು ಮಕ್ಕಳ ಬಗ್ಗೆಯೂ ಅವಹೇಳನಕಾರಿ ಪದಗಳನ್ನ, ಅವರ ಘನತೆಗೆ ಚ್ಯುತಿ ಬರುವಂತೆ ಬರೆದಿದ್ದೇ ಆದರೆ ಈಗಾಗಲೇ ಎಂಟು ಜನ ಜೈಲಿನಲ್ಲಿದ್ದಾರೆ. ನೀವೂ ಜೈಲು ಸೇರುತ್ತೀರಿ. ಸೋಷಿಯಲ್‌ಮೀಡಿಯಾದಲ್ಲಿ ಆ ರೀತಿಯ ಪದ ಬಳಸಬೇಡಿ. ಚರ್ಚೆ ಇದ್ದರೆ ಆರೋಗ್ಯ ರೀತಿ ಚರ್ಚೆ ಮಾಡಿ. ಹೆಣ್ಣು‌ ಮಕ್ಕಳಿಗೆ ಅಷ್ಟು ಕೆಟ್ಟ ಪದಗಳನ್ನ ಬಳಸಬೇಡಿ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks