Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದರ್ಶನ್ ಬೇಡಿಕೆಗೆ ಒಪ್ಪಿಗೆ ಸೂಚಿಸಿದ ಕೋರ್ಟ್ : ಅಂತದ್ದೇನ್ ಕೇಳಿದ್ರು..?

---Advertisement---

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲಲ್ಲಿರುವ ದರ್ಶನ್ ಬೇಡಿಕೆಗೆ ಕೋರ್ಟ್ ಅಸ್ತು ಎಂದಿದೆ. ಜೈಲಿನ ಒಳ ಸಂದರ್ಶನಕ್ಕೆ ದರ್ಶನ್ ಅರ್ಜಿ ಸಲ್ಲಿಕೆ ಮಾಡಿದ್ದರು. ಅದಕ್ಕೆ ಕೋರ್ಟ್ ಒಪ್ಪಿಗೆ ನೀಡಿದೆ. ಆದರೆ ಇಲ್ಲಿ ಒಂದು ಷರತ್ತನ್ನು ಇಡಲಾಗಿದೆ. ಈ ಸಂಬಂಧ ಜೈಲಿನ ಅಧೀಕ್ಷಕರಿಗೆ ಅಧಿಕಾರವನ್ನ ನೀಡಿದೆ. ಜೈಲು ನಿಯಮದ ಪ್ರಕಾರ ಒಳ ಸಂದರ್ಶನ ಮಾಡಲು ಅವಕಾಶ ನೀಡಲಾಗಿದೆ. ಒಂದು ವೇಳೆ ಅಧೀಕ್ಷಕರು ಒಪ್ಪದೆ ಇದ್ದರೆ ಒಳ ಸಂದರ್ಶನಕ್ಕೆ ಅವಕಾಶ ಇರೋದಿಲ್ಲ ಎಂಬುದನ್ನು ಸೂಚನೆ ನೀಡಿದೆ.

ಈ ಸಂಬಂಧ 57ನೇ ಸೆಷನ್ ಕೋರ್ಟ್ ನಿಂದ ಆದೇಶ ಬಂದಿದೆ. ದರ್ಶನ್ ಬೇಡಿಕೆಗೆ ಒಪ್ಪಿಗೆ ಏನೋ ಕೊಟ್ಟಿದ್ದು, ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾಡಿದೆ. ಅಧೀಕ್ಷಕರ ಅನುಮತಿ ಮೇರೆಗೆ ದರ್ಶನ್ ಬೇಡಿಕೆಯ ಈಡೇರಿಕೆ ನಿಂತಿದೆ. ಈ ಒಳ ಸಂದರ್ಶನ ಹೇಗಿರುತ್ತೆ ಅಂದ್ರೆ ಕಂಪ್ಲೀಟ್ ಪ್ರೈವೆಸಿ ಇರುತ್ತೆ. ನಾರ್ಮಲ್ ಆಗಿ ದರ್ಶನ್ ಅವರನ್ನು ಭೇಟಿ ಮಾಡಲು ಬಂದಾಗ ಒಬ್ಬರು ಪೊಲೀಸ್ ಅಧಿಕಾರಿ ಇದ್ದೆ ಇರ್ತಾರೆ. ಅವರ ಮುಂದೆಯೇ ಮಾತುಕತೆ ನಡೆಯುತ್ತದೆ. ಆದರೆ ಈ ಒಳ ಸಂದರ್ಶನದಲ್ಲಿ ಯಾವ ರೀತಿಯಾಗಿರುತ್ತೆ ಅಂದ್ರೆ ಒಂದು ಕೊಠಡಿಯಲ್ಲಿ ದರ್ಶನ್ ಅವರ ಕುಟುಂಬಸ್ಥರು, ವಕೀಲರ ಜೊತೆಗೆ ಕೂತು ಮಾತನಾಡಬಹುದಾಗಿದೆ. ಈಗಾಗಲೇ ಟ್ರಯಲ್ ನಡೆಯುತ್ತಿರುವ ಕಾರಣ ದರ್ಶನ್ ಅವರಿಗೂ ಒಂದಷ್ಟು ಪ್ರಶ್ನೆಗಳಿರುತ್ತವೆ. ಇದೆಲ್ಲವನ್ನು ಕೇಳುವುದಕ್ಕೂ ದರ್ಶನ್ ಅವರಿಗೆ ಅವಕಾಶ ಬೇಕಾಗಿದೆ. ಹೀಗಾಗಿ ಒಳ ಸಂದರ್ಶನಕ್ಕೆ ಅರ್ಜಿಯನ್ನ ಹಾಕಲಾಗಿತ್ತು. ಅದಕ್ಕೆ ಕೋರ್ಟ್ ಏನೋ ಒಪ್ಪಿಗೆ ನೀಡಿದೆ, ಆದರೆ ಅಧೀಕ್ಷಕರ ಅನುಮತಿ‌ ಮೇರೆಗೆ ಈ ಸಾಧ್ಯತೆ ಇರಲಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now