ಬೆಂಗಳೂರು: ಬಿಗ್ ಬಾಸ್ ಶುರುವಾದ ಮೇಲೆ ಅಲ್ಲೊಂದು ಇಲ್ಲೊಂದು ದೂರು ದಾಖಲಾಗ್ತಾನೆ ಇರ್ತಾವೆ. ಆದರೆ ಈ ಸೀಸನ್ ನಲ್ಲಿ ಜಾಸ್ತಿ ದಾಖಲಾಗಿದಾವೆ ಅನ್ಸುತ್ತೆ. ಅಶ್ವಿನಿ ಮೇಲಾಯ್ತು, ಗಿಲ್ಲಿ ಮೇಲಾಯ್ತು, ರಿಷಾ ಮೇಲಾಯ್ತು, ರಕ್ಷಿತಾ ಮೇಲಾಯ್ತು. ಈಗ ಸುದೀಪ್ ಅವರ ಮೇಲೆ ದೂರು ನೀಡಿರೋದು ಆಶ್ಚರ್ಯವಾಗಿದೆ. ಅದು ರಕ್ಷಿತಾ ವಿಚಾರಕ್ಕೆ.
ಬಿಗ್ ಬಾಸ್ ಅಂದ್ರೆ ಸುದೀಪ್..ಸುದೀಪ್ ಅಂದ್ರೆ ಬಿಗ್ ಬಾಸ್. ಅಂದ್ರೆ ಸುದೀಪ್ ಬಿಟ್ಟು ಬೇರೆ ಯಾರೇ ಆ ಶೋ ನಡೆಸಿಕೊಟ್ಟರು ಬ್ಯೂಟಿಯಂತೆ ಕಾಣಿಸೋದಿಲ್ಲ. ವಾರವಿಡೀ ಸ್ಪರ್ಧಿಗಳ ಅವತಾರವನ್ನೆಲ್ಲ ನೋಡುವ ಬಿಗ್ ಬಾಸ್ ಕ್ಯಾಮೆರಾಗಳು, ವೀಕೆಂಡ್ ನಲ್ಲಿ ಕಿಚ್ಚ ಸುದೀಪ್ ಅದಕ್ಕೆಲ್ಲ ಉತ್ತರ ಕೊಡೋದೆನೆ ಚೆಂದ ಅನ್ಸುತ್ತೆ. ಆದರೆ ವೀಕೆಂಡ್ ನಲ್ಲಿ ಉತ್ತರ ಕೊಡುವಾಗಿನ ಸಂದರ್ಭದಲ್ಲಿ ಕಿಚ್ಚ ಆಡಿದ ಮಾತುಗಳನ್ನೇ ಇಟ್ಟುಕೊಂಡು ಅವರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.
ಸಂಧ್ಯಾ ಎಂಬುವವರಿಂದ ಈ ದೂರು ದಾಖಲಾಗಿದೆ. ಇವರು ಸಾಮಾಜಿಕ ಹೋರಾಟಗಾರ್ತಿ ಕೂಡ. ಪಿತ್ತ ನೆತ್ತಿಗೆ ಏರುತ್ತದೆ ಎಂಬ ಸಾಲನ್ನ ಇಟ್ಟುಕೊಂಡು ದೂರು ನೀಡಲಾಗಿದೆ. ಡಿವೈಎಸ್ಪಿಗೆ ದೂರು ಸಲ್ಲಿಕೆ ಮಾಡಿರುವ ಸಂಧ್ಯಾ, ಸ್ಪರ್ಧಿ ರಕ್ಷಿತಾಗೆ ಸುದೀಪ್ ನಿಂದಿಸಿದ್ದಾರೆ. ಸುದೀಪ್ ಜೊತೆಗೆ ಅಶ್ವಿನಿ ಗೌಡ ವಿರುದ್ಧವೂ ದೂರು ನೀಡಿದ್ದೇನೆ. ಸುದೀಪ್ ಅವರು ಪಿತ್ತ ನೆತ್ತಿಗೇರಲಿದೆ ಎಂಬ ಪದ ಬಳಕೆ ಮಾಡುವುದು ಎಷ್ಟು ಸರಿ..? ಇಂತಹ ಪದವನ್ನು ಬಳಕೆ ಮಾಡಿದ್ದು ಸರಿನಾ..? ಅಶ್ವಿನಿ ಗೌಡ ಅವರು ಎಸ್ ಹಾಗೂ ಸ್ಲಂ ಎಂದು ಬಳಸುತ್ತಾರೆ. ಹಾಗಾಗಿ ನಾನು ಈ ಬಗ್ಗೆ ದೂರು ನಿಡೀದ್ದೇ ಎಂದಿದ್ದಾರೆ.
