ಬೆಂಗಳೂರು: ಸಿಪಿ ಯೋಗೀಶ್ವರ್ ವಿರುದ್ಧ ಮೊದಲ ಹೆಂಡತಿ, ಮಗಳು ರೊಚ್ಚಿಗೆದ್ದಿದ್ದಾರೆ. ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲ ಅವರಿಗೆ ದೂರನ್ನ ನೀಡಲಾಗಿದೆ. ಈ ಬಗ್ಗೆ ಮೊದಲ ಹೆಂಡತಿ ಮಾಳವಿಕ ಸೋಲಂಕಿ ಪ್ರತಿಕ್ರಿಯೆ ನೀಡಿದ್ದು, ಎಲ್ಲರಿಗೂ ಗೊತ್ತಿರುವಂತೆ ಈಗ ನನ್ನ ಮಕ್ಕಳು ಬೀದಿಯಲ್ಲಿದ್ದಾರೆ. ಇಷ್ಟು ದಿನ ಅವರ ತಂದೆಯ ಜೊತೆಗೆ ಇದ್ದರು. ಈಗ ಅವರ ಮೇಲೆ ಕೇಸ್ ಮೇಲೆ ಕೇಸ್ ಹಾಕಿದ್ದಾರೆ. ಯೋಗೀಶ್ ಅವರು, ಮಗನ ಸೈನ್ ಅನ್ನೇ ಫೋರ್ಜರಿ ಮಾಡಿದ್ದು, ಅದು ಒಂದು ಕೇಸ್ ಆಗಿದೆ.
ನನ್ನ ಮಗಳು ಮೇಲೂ ಆಸ್ತಿ ವಿಚಾರಕ್ಕೆ ಕೇಸ್ ಆಗಿದೆ. ಈಗ ನಾವೂ ಮೂರು ಜನರು ಬೆಳಗ್ಗೆ ಆದ್ರೆ ಕೋರ್ಟ್, ಕೇಸ್ ಅಂತ ಅಲಿತಾ ಇದ್ದೀವಿ. ನಮಗೆ ಅವರ ಬಳಿ ಇರುವಷ್ಟು ದುಡ್ಡಿನ ಪವರ್ ಆಗಲಿ, ಪೊಲಿಟಿಕಲ್ ಪವರ್ ಆಗ್ಲಿ ಇಲ್ಲ. ಯಾರಿಗೆ ವಿಷಯ ಮುಟ್ಟಿಸಬೇಕು ಅವರಿಗೆ ಮುಟ್ಟಿಸಿದ್ದೇವೆ. ನಾವೂ ಆರ್ಡಿನರಿ ಜನ. ಕೋರ್ಟ್, ಕೇಸ್ ಅಂತ ಓಡಾಡಿದ್ರೆ, ಹೇಗೆ ನಿಭಾಯಿಸೋದು ಅದನ್ನ. ಈಗ ನೋಡಿ ತಂದೆ ವಿರುದ್ಧ ಮಕ್ಕಳು ಓಡಾಡುವಂತೆ ಆಗಿದೆ ಎಂದಿದ್ದಾರೆ.

ಮಗಳು ನಿಶಾ ಮಾತನಾಡಿ, ಇದು ಪ್ರಾಪರ್ಟಿ ವಿಚಾರ ಅಲ್ವೇ ಅಲ್ಲ. ನಮ್ಮ ತಂದೆಯವರು ಮನೆ ಮೇಲೆ ಒಂದು ಕೇಸನ್ನ ಹಾಕ್ತಾರೆ ಆಗ ಪ್ರಾಪರ್ಟಿ ವಿಚಾರ ಬಂದದ್ದು. ಈಗ ಅವರ 250-300 ಪ್ರಾಪರ್ಟಿ ಮೇಲೆ ಸ್ಟೇ ಆರ್ಡರ್ ತಂದಿದ್ದೀನಿ. ಕಳೆದ 40 ವರ್ಷದಿಂದ ಈ ಪ್ರಾಪರ್ಟಿ ವಿಚಾರಕ್ಕೆ ಬಂದಿದ್ದಲ್ಲ. ಈಗ ಒಂದು ಅಧಿಕಾರ ಬೇಕು ಅಂತ ನಮ್ಮ ಅಮ್ಮನು ನಿಂತಿದ್ದಾರೆ ಎಂದಿದ್ದಾರೆ.















