Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮೃತ ಅಭಿಮಾನಿಗಳಿಗೆ ಪರಿಹಾರ : ಯಶ್ ಕೊಟ್ಟಿದ್ದು ಎಷ್ಟು..?

Facebook
Twitter
Telegram
WhatsApp

 

ಸಿನಿಮಾದಲ್ಲಿ ಬ್ಯುಸಿಯಾಗಿರುವ ಯಶ್ ಈ ಬಾರಿ ಸಾರ್ವಜನಿಕವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿಲ್ಲ. ಆದರೆ ಅಭಿಮಾನಿಗಳು ಬಿಡಬೇಕಲ್ಲ..? ಯಶ್ ಬಾರದೆ ಇದ್ದರು ನಾವೂ ಅವರ ಹುಟ್ಟುಹಬ್ಬವನ್ನು ಸಂಭ್ರಮಿಸುತ್ತೀವಿ ಎಂದು ಆಚರಣೆ ಮಾಡುವುದಕ್ಕೆ ಹೊರಟಿದ್ದರು. ಆದರೆ ವಿಧಿ ಅವರನ್ನು ತನ್ನತ್ತ ಕರೆದುಕೊಂಡು ಬಿಟ್ಟಿತು. ಯಶ್ ಅಂದು ಎಲ್ಲೋ ಶೂಟಿಂಗ್ ನಲ್ಲಿ ಇದ್ದರು ಕೂಡ ಓಡೋಡಿ ಬಂದು ಮೃತ ಅಭಿಮಾನಿಗಳ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಇದೀಗ ಮೃತರ ಕುಟುಂಬಕ್ಕೆ ಯಶ್ ಕಡೆಯಿಂದ ಪರಿಹಾರ ಸಿಕ್ಕಿದೆ. ರಾಕಿಭಾಯ್ ಸ್ನೇಹಿತರಾದ ರಾಕೇಶ್, ಚೇತನ್ ಹಾಗೂ ಗದಗ ಜಿಲ್ಲೆಯ ಯಶ್ ಅಭಿಮಾನಿಗಳು ಮೃತರ ಮನೆಗೆ ಹೋಗಿ ಪರಿಹಾರ ನೀಡಿ ಬಂದಿದ್ದಾರೆ. ಹನಮಂತ ಹರಿಜನ, ಮುರಳಿ ನಡವಿನಮನಿ, ನವೀನ್ ಗಾಜಿ ಅವರು ಮೃತಪಟ್ಟಿದ್ದರು.

ಇದೀಗ ಮೃತರ ಕುಟುಂಬಕ್ಕೆ ತಲಾ ಎರಡು ಲಕ್ಷದಂತೆ ಪರಿಹಾರದ ಹಣ ನೀಡಿದ್ದಾರೆ. ಕಟೌಟ್ ಕಟ್ಟಲು ಹೋಗಿ ಗಾಯಗೊಂಡಿದ್ದವರಿಗೂ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಜನವರಿ 8ರಂದು ಈ ದುರ್ಘಟನೆ ನಡೆದಿತ್ತು. ಯಶ್ ಅವರ ಹುಟ್ಟುಹಬ್ಬಕ್ಕೆ ಕಟೌಟ್ ಕಟ್ಟಲು ಹೋಗಿದ್ದ ಮೂವರು, ಬಿದ್ದು ದುರ್ಮರಣ ಹೊಂದಿದ್ದರು. ಮೃತರೆಲ್ಲ ಇನ್ನು 20 ವರ್ಷದ ಆಸುಪಾಸಿನವರೂ. ಮಕ್ಕಳನ್ನು ಕಳೆದುಕೊಂಡ ಮನೆಯವರ ದುಃಖ ಮುಗಿಲು ಮುಟ್ಟಿತ್ತು. ಶೂಟಿಂಗ್ ನಿಂದ ಓಡೋಡಿ ಬಂದ ನಟ ಯಶ್, ಮೃತರ ಕುಟುಂಬಸ್ಥರ ಜೊತೆ ಮಾತನಾಡಿದರು. ಬಳಿಕ ಬೇಸರ ವ್ಯಕ್ತಪಡಿಸಿದರು. ಅಭಿಮಾನಿಗಳಲ್ಲಿ ಈ ರೀತಿಯೆಲ್ಲಾ ಮಾಡಬೇಡಿ. ನಂಗೆ ನನ್ನ ಹುಟ್ಟುಹಬ್ಬ ಎಂದರೇನೆ ಭಯ ಆಗುತ್ತೆ, ಅಸಹ್ಯ ಆಗುತ್ತೆ ಎಂದು ಬೇಸರ ಹೊರ ಹಾಕಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಭೋವಿ ಗುರುಪೀಠಕ್ಕೆ ಗೀತಾ ಶಿವರಾಜಕುಮಾರ ಭೇಟಿ

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 28 : ಇಲ್ಲಿನ ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠಕ್ಕೆ ಭಾನುವಾರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಗೀತಾ ಶಿವರಾಜಕುಮಾರ ಅವರು ಭೇಟಿ ನೀಡಿ, ಗುರುಪೀಠದ

ಚಿತ್ರದುರ್ಗ | ಭೋವಿ ಗುರುಪೀಠಕ್ಕೆ ಗೀತಾ ಶಿವರಾಜಕುಮಾರ್ ಭೇಟಿ

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 28 : ಇಲ್ಲಿನ ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠಕ್ಕೆ ಭಾನುವಾರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಗೀತಾ ಶಿವರಾಜಕುಮಾರ ಅವರು ಭೇಟಿ ನೀಡಿ, ಗುರುಪೀಠದ

ನೇಹಾ ಕೊಲೆ ಕೇಸ್ ಸಿಐಡಿಗೆ ಒಪ್ಪಿಸಿದ ಸರ್ಕಾರ : ಬೇಸರ ಮಾಡಿಕೊಂಡ ರಂಭಾಪುರಿ ಶ್ರೀಗಳು

ಹುಬ್ಬಳ್ಳಿ: ನೇಹಾಳ ಕೊಲೆಯಾದ ಮೇಲೆ ನಿರಂಜನ ಹೀರೆಮಠ ಅವರಿಗೆ ಸಾಂತ್ವನ ಹೇಳಲು ಇಂದು ರಂಭಾಪುರಿ ಶ್ರೀಗಳು ಭೇಟಿ ನೀಡಿದ್ದಾರೆ. ಮನೆಗೆ ಬಂದು ಧೈರ್ಯ ಹೇಳಿ, ಒಂದಷ್ಟು ಸಮಯ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಕೇಸನ್ನು

error: Content is protected !!