ಚಿತ್ರದುರ್ಗ : ಬ್ಯಾಂಕ್ ಕಾಲೋನಿಯಲ್ಲಿ ಹಾಡು ಹಗಲೇ ದರೋಡೆ : ಮನೆಗೆ ನುಗ್ಗಿ ಒಡವೆ ಕದ್ದು, 50 ಲಕ್ಷ ಸುಲಿಗೆ…!

1 Min Read

 

ಸುದ್ದಿಒನ್, ಚಿತ್ರದುರ್ಗ, (ಜು.10): ಮೂವರು ದುಷ್ಕರ್ಮಿಗಳು ಮನೆಗೆ ನುಗ್ಗಿ, 50 ಲಕ್ಷ ನಗದು ಮತ್ತು ರೂ. 4.2 ಲಕ್ಷ ಬೆಲೆಬಾಳುವ ಆಭರಣಗಳನ್ನು ದೋಚಿ ಪರಾರಿಯಾಗಿದ ಘಟನೆ ನಗರದ ಬ್ಯಾಂಕ್ ಕಾಲೋನಿಯಲ್ಲಿ ಶನಿವಾರ ನಡೆದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಜೀರ್ ಸಾಬ್ ಎನ್ನುವವರು ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಶನಿವಾರ ಬೆಳಿಗ್ಗೆ ನಜೀರ್ ಸಾಬ್ ಅವರು ತಮ್ಮ ಪತ್ನಿ, ಮಗ ಮತ್ತು ಸೊಸೆ ಎಲ್ಲರೂ ಮನೆಯಲ್ಲಿರುವಾಗ ಬೆಳಗ್ಗೆ ಸುಮಾರು
09 : 20 ರ ಸಮಯದಲ್ಲಿ ಯಾರೋ ಮೂವರು ಏಕಾಏಕಿ ಕೈಯಲ್ಲಿ ಪಿಸ್ತೂಲ್, ಮಚ್ಚು ಮತ್ತು ಚಾಕುವಿನೊಂದಿಗೆ
ಮನೆಯೊಳಗೆ ನುಗ್ಗಿದ್ದಾರೆ.

ಅವರನ್ನು ಹೆದರಿಸಿ, ಹಲ್ಲೆ ಮಾಡಿ, ರೂಮಿನಲ್ಲಿ ಕೂಡಿಹಾಕಿದರು. ಅಷ್ಟರಲ್ಲೇ ಅವರ ಮಗಳು ಮತ್ತು ಅಳಿಯ ಕೂಡಾ ಮನೆಗೆ ಬಂದಿದ್ದಾರೆ ಅವರನ್ನೂ ಕೂಡಿ ಹಾಕಿ 50 ಲಕ್ಷ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಇಲ್ಲವಾದರೆ ಪ್ರಾಣ ತೆಗೆಯುವುದಾಗಿ ಹೆದರಿಸಿದ್ದಾರೆ.

ಮನೆಯಲ್ಲಿದ್ದ 12 ತೊಲ ಬಂಗಾರದ ಆಭರಣಗಳನ್ನು ದೋಚಿ, ಮಗ ಮತ್ತು ಅಳಿಯನನ್ನು ಅಪಹರಿಸಿ ಒತ್ತೆಯಾಳಾಗಿಟ್ಟುಕೊಂಡು ಒಟ್ಟು 50 ಲಕ್ಷ ಹಣವನ್ನು ಸುಲಿಗೆ ಮಾಡಿರುತ್ತಾರೆ ಎಂದು ನಜೀರ್ ಸಾಬ್ ಶನಿವಾರ ರಾತ್ರಿಯೇ  ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಐಜಿಪಿ ತ್ಯಾಗರಾಜನ್, ಎಸ್ ಪಿ ಪರುಶುರಾಮ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪೊಲೀಸರು ಈಗಾಗಲೇ ತನಿಖೆ ಕೈಗೊಂಡು ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *