ಚಿತ್ರದುರ್ಗ : ಜ. 26: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ 77 ನೇ ಗಣರಾಜ್ಯೋತ್ಸವ ಆಚರಣೆ ಮಾಡಲಾಯಿತು. ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿನ ವಾರ್ತಾ ಭವನದಲ್ಲಿ ಸೋಮವಾರ ಜಿಲ್ಲಾ ವಾರ್ತಾಧಿಕಾರಿ ಬಿ.ವಿ. ತುಕಾರಾಂರಾವ್ ರಾಷ್ಟ್ರ ಧ್ವಜರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಿಬ್ಬಂದಿಗಳಾದ ಎಂ. ಅವಿನಾಶ್, ಪಿ.ಎಂ.ವೇಣುಗೋಪಾಲ, ಜಿ.ವೆಂಕಟೇಶ್, ಅಲ್ಲದೆ ಎಂ.ಜೆ. ಬೋರೇಶ, ಪಾಶಾ, ಅಂಜನಮೂರ್ತಿ, ಅಪ್ರೆಂಟಿಸ್ ತರಬೇತಾರ್ಥಿ ಮುದ್ದುಕಿರಣ್, ಚಂದ್ರಶೇಖರ್, ಪತ್ರಕರ್ತ ಜಿ.ಒ.ಎನ್. ಮೂರ್ತಿ ಇದ್ದರು.






