ಸುದ್ದಿಒನ್, ಚಿತ್ರದುರ್ಗ, ಜುಲೈ. 20 : ನಗರದ ಜೆಸಿಆರ್ ಬಡಾವಣೆಯ ವಾಸಿ ಹಾಗೂ ಖ್ಯಾತ ನೇತ್ರ ತಜ್ಞರಾದ ಡಾ. ಉಜ್ಜಿನಪ್ಪ (75 ವರ್ಷ) ಇಂದು ಬೆಳಿಗ್ಗೆ ನಿಧನರಾದರು.
ಮೃತರು ಖ್ಯಾತ ದಂತ ವೈದ್ಯರಾದ ಪತ್ನಿ ಡಾ. ಶೋಭಾ, ಓರ್ವ ಪುತ್ರ ಖ್ಯಾತ ವೈದ್ಯರಾದ ಸಂತೋಷ್ ಉಜ್ಜನಪ್ಪ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಇಂದು ಸಂಜೆ ಮೆದೇಹಳ್ಳಿಯ ಅವರ ಸ್ವಂತ ತೋಟದ ಜಮೀನಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿರುತ್ತಾರೆ.
ಸಂತಾಪ : ಚಿತ್ರದುರ್ಗ ಮೆಡಿಕಲ್ ಅಸೋಸಿಯೇಷನ್, ಚಿತ್ರದುರ್ಗ ರೆಡ್ ಕ್ರಾಸ್ ಸಂಸ್ಥೆ, ಬಸವೇಶ್ವರ ಪುನರ್ ಜ್ಯೋತಿ ನೇತ್ರ ಭಂಡಾರ, ವಿ ಪಿ ಮತ್ತು ಜೆ ಸಿ ಆರ್ ಆ ಬಡಾವಣೆ ಕ್ಷೇಮಾಭಿವೃದ್ಧಿ ಸಂಘ ಸೇರಿದಂತೆ ಇತರೆ ಸಂಘ ಸಂಸ್ಥೆಗಳು ಸಂತಾಪ ಸೂಚಿಸಿದ್ದಾರೆ.
















