ಚಿತ್ರದುರ್ಗ. ಆಗಸ್ಟ್.05: ಹತ್ತಿ ಖರೀದಿದಾರು ತಾವು ಖರೀದಿಸಿದ ಹತ್ತಿಯ ಪೇಮೆಂಟ್ ಸರಿಯಾದ ಸಮಯಕ್ಕೆ ನೀಡದೆ ಇರುವುದರಿಂದ, ಹತ್ತಿ ದಲ್ಲಾಲರು ರೈತರಿಗೆ ಪೇಮೆಂಟ್ ಮಾಡಲು ಕಷ್ಟವಾಗುತ್ತಿದೆ.
ಈ ಹಿನ್ನಲೆಯಲ್ಲಿ ಆಗಸ್ಟ್ 6 ರಿಂದ ಚಿತ್ರದುರ್ಗ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ, ಹತ್ತಿ ಮಾರ್ಕೆಟ್ ನಡೆಸದಿರಲು ಮಾರುಕಟ್ಟೆ ದಲ್ಲಾಲರ ಸಂಘ ತೀರ್ಮಾನಿಸಿದೆ. ಆದ್ದರಿಂದ ರೈತರು ಆಗಸ್ಟ್ 6 ರಿಂದ ತಾವು ಬೆಳದ ಹತ್ತಿಯನ್ನು ಮಾರುಕಟ್ಟೆ ತರದಿರುವಂತೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.





