ಚಿತ್ರದುರ್ಗ: ಕ್ರಿಸ್ ಮಸ್ ರಜೆ ಇದೆ ಅಂತ ತನ್ನ ಸ್ನೇಹಿತೆಯರ ಜೊತೆಗೆ ಬಸ್ ಹತ್ತಿದ್ದ ಮಾನಸ ಇಂದು ಹೆಣವಾಗಿ ಪೋಷಕರಿಗೆ ಕಾಣಿಸಿದ್ದಾಳೆ. ಬೆಳಗ್ಗೆಯೇ ಬಸ್ ದುರಂತದ ವಿಚಾರ ತಿಳಿದು, ಮಗಳು ಅದೇ ಬಸ್ ನಲ್ಲಿ ಇದ್ದಳು ಎಂಬ ವಿಚಾರ ಗೊತ್ತಾದ ಕೂಡಲೇ ಮಾನಸ ತಂದೆ – ತಾಯಿ ದುರಂತದ ಸ್ಥಳಕ್ಕೆ ಓಡೋಡಿ ಬಂದರು. ಮಗಳು ಕಾಣದೆ ಕಂಗಾಲಾಗಿದ್ದಾರೆ. ಇದೀಗ ಮಾನಸ ಸಿಕ್ಕಿದ್ದಾಳೆ. ಆದರೆ ಜೀವಂತವಾಗಿ ಅಲ್ಲ. ಮಗಳ ಮದುವೆ ಮಾಡಬೇಕೆಂದು ಕನಸು ಕಂಡಿದ್ದ ತಂದೆ ಆಘಾತಗೊಂಡುದ್ದಾರೆ.
ಮಾನಸ ಮೃತದೇಹವನ್ನ ತಂದೆ ಚಂದ್ರೆಗೌಡ ಗುರುತು ಹಿಡಿದಿದ್ದಾರೆ. ಮಗಳ ಕುತ್ತಿಗೆಯಲ್ಲಿದ್ದ ಗಣೇಶನ ಲಾಕೆಟ್ ನೋಡಿ ಕಂಡು ಹಿಡಿದಿದ್ದಾರೆ. ದೇಹಗಳು ಸಾಕಷ್ಟು ಸುಟ್ಟಿವೆ. ಹೀಗಾಗಿ ಮೃತದೇಹಗಳನ್ನು ಕಂಡು ಹಿಡಿಯುವುದು ಕಷ್ಟವಾಗಿದೆ. ಆಸ್ಪತ್ರೆಗಳಲ್ಲೆಲ್ಲಾ ಹೋಗಿ ಮಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಕಡೆಗೆ ಘಟನಾ ಸ್ಥಳಕ್ಕೆ ಬಂದಾಗ ಮಗಳ ಶವ ಕಂಡಿದೆ.

ಬೆಳಗ್ಗೆ ಆಕೆಯ ಸ್ನೇಹಿತೆ ಮಿಲನಾ ಕರೆ ಮಾಡಿದ್ದಳು. ಈ ರೀತಿ ಆಕ್ಸಿಡೆಂಟ್ ಆಗಿದೆ. ಬಸ್ ಎಲ್ಲಾ ಸುಟ್ಟು ಹೋಗಿದೆ ಎಂದು ತಿಳಿಸಿದಳು. ತಕ್ಷಣ ಹೊರಟು ಕಾರಲ್ಲಿ ಬಂದೆವು. ಮಾರ್ಚ್ ಏಪ್ರಿಲ್ ನಲ್ಲಿ ಮದುವೆ ಫಿಕ್ಸ್ ಆಗಿತ್ತು. ಕಳೆದ ಸೋಮವಾರ ರಾತ್ರಿ ಬಸ್ ಹತ್ತಿಸಿದ್ದೆವು. ಅದೇ ಕಡೆ. ಬೆಂಗಳೂರಿಗೆ ಹೋಗ್ತಿನಿ ಅಂತ ಹೋದಳು. ನಾವೂ ಚನ್ನರಾಯಪಟ್ಟಣದಲ್ಲಿಯೇ ಇದ್ದವು. ಜೀವಂತವಾಗಿ ಇದ್ದಾಳೆ ಎಂಬ ಆಸೆಯಿಂದಾನೆ ಇದ್ದೆವು. ಆದರೆ ಇಲ್ಲಿ ಹೆಣವಾಗಿ ಸಿಕ್ಕಳು ಎಂದು ತಂದೆ ಚಂದ್ರೆಗೌಡ ದುಃಖ ವ್ಯಕ್ತಪಡಿಸಿದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.














