ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 10 : ವಿದ್ಯಾನಗರದಲ್ಲಿರುವ ವಿಜಯ ಕಿರಣ ಪರಿಸರ ಜಾಗೃತಿ ಮತ್ತು ಕ್ಷೇಮಾಭಿವೃದ್ದಿ ಸಂಘದಿಂದ ಜಿಲ್ಲಾಸ್ಪತ್ರೆಯಲ್ಲಿ ಗುರುವಾರ ಬಡ ರೋಗಿಗಳಿಗೆ ಉಪಹಾರ ವಿತರಿಸಲಾಯಿತು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ದಾದಾ ಸಾಹೇಬ್ ಡಾ.ಎನ್.ಮೂರ್ತಿ ಬಣದ ಜಿಲ್ಲಾಧ್ಯಕ್ಷ ವಿಶ್ವನಾರಾಯಣಮೂರ್ತಿ ಮಾತನಾಡಿ ವಿಜಯ ಕಿರಣ ಪರಿಸರ ಜಾಗೃತಿ ಮತ್ತು ಕ್ಷೇಮಾಭಿವೃದ್ದಿ ಸಂಘದವರು ವಾರದಲ್ಲಿ ಎರಡು ದಿನ ಜಿಲ್ಲಾಸ್ಪತ್ರೆ ರೋಗಿಗಳಿಗೆ ಉಚಿತವಾಗಿ ಉಪಹಾರ ನೀಡಿ ಮಾನವೀಯತೆ ಮೆರೆಯುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಬಣ್ಣಿಸಿದರು.
ಜಿಲ್ಲಾಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ನೆರವಾಗಲಿ ಎನ್ನುವ ಆಶಯದಿಂದ ಕೈಗೊಂಡಿರುವ ಇಂತಹ ಸಮಾಜ ಸೇವೆಗೆ ದಾನಿಗಳು ಮುಂದೆ ಬಂದು ಕೈಜೋಡಿಸಿದರೆ ಪ್ರತಿನಿತ್ಯವೂ ರೋಗಿಗಳಿಗೆ ಉಪಹಾರ ವಿತರಿಸುವ ಚಿಂತನೆಯಿದೆ ಎಂದರು.
ಬಿಜೆಪಿ.ಯುವ ಮುಖಂಡರಾದ ಬಸವರಾಜ್ ಬಾಡ, ಗಿರೀಶ್, ರೆಡ್ಕ್ರಾಸ್ ಸಂಸ್ಥೆಯ ವಿಜಯಕುಮಾರ್, ನ್ಯಾಯವಾದಿ ಇಸ್ಮಾಯಿಲ್ ಜಬೀವುಲ್ಲಾ, ಗೃಹ ರಕ್ಷಕದಳದ ಕಾಂತರಾಜ್ ಮತ್ತು ಸಿಬ್ಬಂದಿ, ವಸಂತ್ ಡಿ, ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.










