ಚಿತ್ರದುರ್ಗ | ಅಕ್ರಮ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರ ಬಂಧನ, 300 ಗ್ರಾಂ ಗಾಂಜಾ ವಶ

1 Min Read

 

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.12 :  ಬೈಕ್​ನಲ್ಲಿ ಅಕ್ರಮವಾಗಿ ಗಾಂಜಾ (Ganja) ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಅಬಕಾರಿ ಅಧಿಕಾರಿಗಳು 300 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ.

ಗುರುನಾಥ ಮತ್ತು ಭರತ ಬಂಧಿತ ಆರೋಪಿಗಳು.
ಅಬಕಾರಿ ಇಲಾಖೆಗೆ ಬಂದ ಖಚಿತ ಮಾಹಿತಿ ಮೇರೆಗೆ ಅಕ್ಟೋಬರ್ 10 ರಂದು ಹಿರಿಯೂರು ನಗರದ ಗಾರೆದಿಂಡು ರಸ್ತೆಯಲ್ಲಿ ಅಬಕಾರಿ ದಾಳಿ ಮಾಡಿ ಇವರಿಬ್ಬರನ್ನೂ
ತಪಾಸಣೆ ನಡೆಸಿದ ವೇಳೆ ತೆನೆ, ಬೀಜಗಳಿಂದ ಕೂಡಿದ ಒಣ ಗಾಂಜಾವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವೇಳೆ
ಸಿಕ್ಕಿ ಬಿದ್ದಿದ್ದು, ಗಾಂಜಾವನ್ನು ವಶಕ್ಕೆ ಪಡೆದು ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಅಬಕಾರಿ ಡಿವೈಎಸ್‌ಪಿ ನಾಗರಾಜ್ ತಿಳಿಸಿದ್ದಾರೆ.

ಚಿತ್ರದುರ್ಗ ಉಪ ಆಯುಕ್ತರಾದ ವನಿತಾ. ಎ. ರವರ ಮಾರ್ಗದರ್ಶನದಲ್ಲಿ ಅಬಕಾರಿ ಪೇದೆ ರಾಮಾಂಜನೇಯ, ಮತ್ತು ವಾಹನ ಚಾಲಕ ನಾಗರಾಜ ಕಲ್ಲಪ್ಪ ತೋಳಮಟ್ಟಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *