Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಳ್ಳಕೆರೆ | ವಿಷಜಂತು ಕಚ್ಚಿ ಬಾಲಕ ಸಾವು

---Advertisement---

ಸುದ್ದಿಒನ್, ಚಳ್ಳಕೆರೆ, ಆಗಸ್ಟ್. 25 : ಮಳೆಗಾಲ ಬೇರೆ ಇದೆ. ಹಾವು, ಚೇಳು ಸೇರಿದಂತೆ ವಿಷ ಜಂತುಗಳು ಎಲ್ಲೆಂದರಲ್ಲಿ ಅಡ್ಡಾಡುತ್ತಾ ಇರುತ್ತವೆ. ಅದರಲ್ಲೂ ಜಮೀನು ಗಳಿಗೆ ಹೋಗುವವರು, ಜಮೀನಿನಲ್ಲಿರುವ ಮನೆಗಳಲ್ಲಿ ಮಲಗುವವರು ಎಚ್ಚರದಿಂದ ಇರಬೇಕು. ಜಮೀನಿನಲ್ಲಿರುವ ಮನೆಗಳನ್ನು ಕ್ಲೀಸ್ ಮಾಡದೆ ಇದ್ದಲ್ಲಿ ಮಲಗುವುದಕ್ಕೆ ಹೋಗಬೇಡಿ. ಇಷ್ಟೆಲ್ಲ ಹೇಳುವುದಕ್ಕೆ ಕಾರಣ ಚಳ್ಳಕೆರೆಯಲ್ಲಿ ನಡೆದ ಘಟನೆ.

ಜಮೀನಿನ ಶೆಡ್ ಒಂದರಲ್ಲಿ ಮಲಗಿದ್ದ ಬಾಲಕ ಈಗ ಶವವಾಗಿ ಬಿದ್ದಿದ್ದಾನೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ರವಿತೇಜ ಹೀಗೆ ಸತ್ತು ಮಲಗಿರುವುದು. ಈ ಬಾಲಕನಿಗೆ ಈಗಿನ್ನು ಕೇವಲ 8 ವರ್ಷ. ಆಟವಾಡಿಕೊಂಡಿದ್ದವ ಈಗ ಜೀವಂತವಾಗಿಲ್ಲ. ಅದಕ್ಕೆ ಕಾರಣ, ಜಮೀನಿಗೆ ಹೋಗಿ ಶೆಡ್ ನಲ್ಲಿ ಮಲಗಿದ್ದಷ್ಟೇ.

ಎಂಟು ವರ್ಷದ ಮೃತ ರವಿತೇಜ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಸಿದ್ದಾಪುರ ಗ್ರಾಮದವರು. ಸಿದ್ದಾಪುರದ ಬಳಿಯೇ ಇವರದ್ದು ಜಮೀನು ಇದೆ. ಆ ಜಮೀನಿನಲ್ಲಿ ಏನಾದರು ವಸ್ತುಗಳನ್ನು ಹಾಕುವುದಕ್ಕೆಂದು ಶೆಡ್ ನಿರ್ಮಾಣ‌ ಮಾಡಿದ್ದಾರೆ. ಇತ್ತೀಚೆಗೆ ಒಂದೇ ಸಮನೆ ಮಳೆ ಬಂದು ಈಗ ಎರಡ್ಮೂರು ದಿನದಿಂದ ವಿಶ್ರಾಂತಿ ನೀಡಿದೆ. ಕೊಂಚ ಬಿಸಿಲು ತಟ್ಟಿದೆ. ಇಂದು ಭಾನುವಾರವೂ ಆದ ಕಾರಣ ಬಾಲಕ ಜಮೀನಿಗೆ ಹೋಗಿದ್ದಾನೆ. ಮಧ್ಯಾಹ್ನದ ಸಮಯ ಆಗಿದ್ದರಿಂದ ನಿದ್ದೆ ಬಂದಿದೆ. ತಮ್ಮ ಜಮೀನಿನಲ್ಲಿಯೇ ಶೆಡ್ ಇದ್ದ ಕಾರಣ ಬಾಲಕ ಸೀದಾ ಹೋಗಿ ಶೆಡ್ ನಲ್ಲಿ ಮಲಗಿದ್ದಾನೆ. ಆದರೆ ಅದ್ಯಾವ ವಿಷ ಜಂತು ಕಚ್ಚಿತೋ ಏನೋ, ಬಾಲಕ ಸಾವನ್ನಪ್ಪಿದ್ದಾನೆ. ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ಇದಾಗಿದೆ. ಜಮೀನಿಗೆ ಹೋದ ಬಾಲಕ ಸೀದಾ ಮನೆಗೆ ಬಂದಿದ್ದರೆ ಜೀವಂತವಾಗಿ ಆದ್ರೂ ಇರುತ್ತಿದ್ದ. ಆದರೆ ವಿಧಿ ಶೆಡ್ ನಲ್ಲಿ ಯಾವುದೋ ವಿಷ ಜಂತು ಕಚ್ಚಿ ಪ್ರಾಣವನ್ನೇ ಬಲಿ ಪಡೆದಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment