Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಕಾರು ಚಾಲಕನ ಹಲ್ಲೆ ವಿಚಾರ : ತಲೆಕೆಡಿಸಿಕೊಳ್ಳಲ್ಲ ಎಂದಿದ್ದೇಕೆ ಪ್ರಜ್ವಲ್ ರೇವಣ್ಣ..?

---Advertisement---

ಹಾಸನ: ಜಮೀನು ವಿಚಾರಕ್ಕೆ ಹೆಚ್ ಡಿ ರೇವಣ್ಣ ಫ್ಯಾಮಿಲಿ ಹಲ್ಲೆ ನಡೆಸಿದೆ ಎಂದು ಮಾಜಿ ಕಾರು ಚಾಲಕ ಆರೋಪ ಮಾಡಿ, ಕೋರ್ಟ್ ಮೊರೆ ಹೋಗಿದೆ. ಈ ಸಂಬಂಧ ಸಂಸದ ಪ್ರಜ್ವಲ್ ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಕೇಸನ್ನ ಕೋರ್ಟ್ ಹಾಕಿಕೊಂಡಿದ್ದೀನಿ ಅಂತ ಹೇಳಿದ್ದಾರೆ. ಅದಾದ ಮೇಲೆ ಮಾಧ್ಯಮದ ಬಳಿ ಬರುವುದು ಏನಿದೆ. ಎಲೆಕ್ಷನ್ ಹತ್ತಿರ ಬರ್ತಾ ಇದೆ ಬರಬೇಕು, ಮಾತನಾಡಬೇಜು ಅಷ್ಟೇ. 8-9 ತಿಂಗಳ ಹಿಂದೆ ಆಗಿರುವುದು ಅಂತ ಅವರೇ ಹೇಳಿದ್ದಾರೆ. ಹಾಗಾದ್ರೆ ಈಗ ಯಾಕೆ ಅದನ್ನ ತೆಗೆಯಬೇಕು, ಮಾಧ್ಯಮದ ಮುಂದೆ ಬರಬೇಕು. ಅವತ್ತು ಯಾಕೆ ಮಾಧ್ಯಮದ ಮುಂದೆ ಬರಲಿಲ್ಲ. ಮಾಧ್ಯಮದಲ್ಲಿ ಕೂತು ಒಬ್ಬರಿಗೆ ತೇಜೋವಧೆ ಮಾಡುವುದಲ್ಲ. ಹಾಗಾದ್ರೆ ಇವರಿಗೆ ಕೋರ್ಟ್ ಮೇಲೆ ನಂಬಿಕೆ ಇಲ್ಲ ಅಂತ ಆಯ್ತು ಎಂದಿದ್ದಾರೆ.

ಯಾರು ಯಾರ ಮೇಲೂ ಹಲ್ಲೆ ಮಾಡುವುದಕ್ಕೆ ಆಗಲ್ಲ. ಹಲ್ಲೆ ಮಾಡಿದವರು ಎಂಟು ತಿಂಗಳ ತನಕ ಸುಮ್ಮನೆ ಕೂರುವುದಿಲ್ಲ. ಯಾಕೆ ಇವೆಲ್ಲಾ ಚರ್ಚೆ ಮಾಡುವುದು. ಕಾಂಗ್ರೆಸ್ ನವರ ಕುಮ್ಮಕ್ಕಿನಿಂದ ಈ ರೀತಿ ಮಾಡಬಹುದು. ನಾನು ಅವರ ಬಗ್ಗೆ ಏನು ಚರ್ಚೆ ಮಾಡುವುದಕ್ಕೆ ಹೋಗಲ್ಲ. ನಮ್ಮ ಜಿಲ್ಲೆಗಂತು ಗೊತ್ತಿದೆ ಯಾರದ್ದು ತಪ್ಪು ಯಾರದ್ದು ಸರಿ ಅಂತ. ಅದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಕ್ಕೆ ಹೋಗಲ್ಲ ಎಂದಿದ್ದಾರೆ.

ಇದೇ ವೇಳೆ ಇಂಡಿಯಾ ಅಂತ ಏನು ಮಾಡಿಕೊಂಡಿದ್ದಾರೆ ಅವರಲ್ಲಿ ಒಗ್ಗಟ್ಟು ಇಲ್ಲದೆ ಇರುವುದು ಎದ್ದು ಕಾಣಿಸುತ್ತಾ ಇದೆ. ನಿತೀಶ್ ಕುಮಾರ್ ಅವರು ಮೀಟಿಂಗ್ ನಿಂದ ಎದ್ದು ಹೋಗುವುದು. ಖರ್ಗೆ ಅವರನ್ನು ಪ್ರಧಾನಿ ಹುದ್ದೆಗೆ ಆಯ್ಕೆ ಮಾಡುತ್ತೀವಿ ಎಂದಾಗ ಅವರ ಜನಾಂಗಕ್ಕೆ ಸಪೋರ್ಟ್ ಮಾಡುವ ನಿರ್ಣಯವನ್ನು ಅವರ ಪಕ್ಷದವರೇ ತೋರಿಸುತ್ತಿಲ್ಲ ಎನ್ನುವುದಾದರೆ, ಇದು ಯಾವ ರೀತಿಯ ಮೆಸೇಜ್ ತೋರಿಸುತ್ತದೆ ಹೇಳಿ ಎಂದು ಪ್ರಶ್ನೆ ಮಾಡಿದೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment