ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮೇಲೆ‌ ಬಾಲಿವುಡ್ ಗಾಯಕ ಆರೋಪ: ಜೀವಬೆದರಿಕೆಯ ಜೊತೆಗೆ ಏನೆಲ್ಲಾ ಹೇಳಿದ್ರು..?

1 Min Read

 

ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತೆ ಸುದ್ದಿಯಲ್ಲಿದ್ದಾರೆ. ಬಾಲಿವುಡ್ ನ ಫೇಮಸ್ ಗಾಯಕ ಲಕ್ಕಿ ಅಲಿ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಸೋಷಿಯಲ್ ಮೀಡಿಯಾ ಎಕ್ಸ್ ನಲ್ಲಿ ನಲ್ಲಿ, ಭೂಮಾಫಿಯಾ ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದೆ ಎಂದು ಹಾಕಿದ್ದಾರೆ.

‘ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ‌ ಮತ್ತು ಪತಿ ಐಎಎಸ್ ಸುಧೀರ್ ರೆಡ್ಡಿ ಭೂ ಮಾಫಿಯಾ ಜೊತೆಗೆ ಕೈ ಜೋಡಿಸಿದ್ದು, ಜೀವ ಬೆದರಿಕೆ ಹಾಕುತ್ತಿದ್ದಾರೆ. ಯಲಹಂಕ ಬಳಿ ಇರುವ ನನ್ನ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

ಬಲವಂತವಾಗಿ ನನ್ನ ಜಮೀನನ್ನು ಕಬಳಿಸುವ ಯತ್ನ ನಡೆಯುತ್ತಿದೆ. ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ನಿರಾಕರಿಸುತ್ತಿದ್ದಾರೆ. ಇದು ಸಂಪೂರ್ಣ ಕಾನೂನುಬಾಹಿರವಾಗಿದೆ. ಕಳೆದ ಐವತ್ತು ವರ್ಷಗಳಿಂದ ನಾನು ಅಲ್ಲಿ ವಾಸ ಮಾಡುತ್ತಿದ್ದೇನೆ. ಸ್ಥಳೀಯ ರೌಡಿಗಳನ್ನು ನನ್ನ ಮೇಲೆ ದಾಳಿ ಮಾಡಲು ಸೇರಿಸಿಕೊಂಡಿದ್ದಾರೆ.

ಲಕ್ಕಿ ಅವರ ತಂದೆ ಮೊಹಮ್ಮದ್ ಅಲಿ 1969ರಲ್ಲಿ ಯಲಹಂಕ ಬಳಿ 400 ಎಕರೆ ಜಮೀನನ್ನು ಖರೀದಿ ಮಾಡಿದ್ದರು. ಅದರಲ್ಲಿ ಈಗಾಗಲೇ 220 ಎಕರೆ ಜಮೀನನ್ನು ಕಳೆದುಕೊಂಡಿದ್ದಾರೆ. ಇನ್ನುಳಿದ 160 ಎಕರೆ ಭೂಮಿಯನ್ನು ತಮ್ಮ ಆರು ಮಕ್ಕಳಿಗೆ ಲಕ್ಕಿ ವರ್ಗಾವಣೆ ಮಾಡಿದ್ದಾರೆ. ಆದರೆ 1991ರ‌ ನಂತರ ಬೇರೆ ಬೇರೆ ಡೀಲರ್ಸ್ ಗಳಿಗೆ ಮಾರಾಟ‌ ಮಾಡುತ್ತಾರೆ. ಅಲ್ಲಿಂದ ಕಾನೂನು ಸಮಸ್ಯೆ ಶುರುವಾಗಿದೆ ಎನ್ನಲಾಗಿದೆ. ಇನ್ನು ಲಕ್ಕಿ ಅವರಿಗೆ ಅನಾರೋಗ್ಯ ಕಾಡುವುದಕ್ಕೆ ಶುರುವಾದ ಮೇಲೆ ಮಾಫಿಯಾ ಗ್ಯಾಂಗ್, ಜಮೀನಿನ ದಾಖಲೆಗಳನ್ನು ತಿರುಚಿದ್ದಾರೆ ಎನ್ನಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *