ಉಡುಪಿ; ಬಿಗ್ ಬಾಸ್ ಸೀಸನ್ 11 ಸ್ಪರ್ಧಿಯಾಗಿದ್ದ ಚೈತ್ರಾ ಕುಂದಾಪುರ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಉಡುಪಿಯ ಕಮಲಶಿಲೆಯ ಬ್ರಾಹ್ಮೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಚೈತ್ರಾ ಕುಂದಾಪುರ ಹಾಗೂ ಶ್ರೀಕಾಂತ್ ಕಶ್ಯಪ್ ಮದುವೆಯಾಗಿದ್ದಾರೆ. ಬಿಗ್ ಬಾಸ್ ಮನೆಯೊಳಗಿದ್ದಾಗಲೇ ಮದುವೆ ಬಗ್ಗೆ ಚೈತ್ರಾ ಮಾತನಾಡಿದ್ದರು. ಬಿಗ್ ಬಾಸ್ ಮುಗಿದ ಮೇಲೂ ಚೈತ್ರಾ ಕುಂದಾಪುರ ಅವರ ಜೊತೆಗೆ ಇದ್ದು, ಎಲ್ಲಾ ಕಡೆ ಸಂದರ್ಶನಗಳಿಗೆ ಓಡಾಡಿದ್ದವರು ಶ್ರೀಕಾಂತ್ ಕಶ್ಯಪ್. ಇದೀಗ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಶ್ರೀಕಾಂತ್ ಕಶ್ಯಪ್ ಹಾಗೂ ಚೈತ್ರಾ ಕುಂದಾಪುರ ಅವರದ್ದು, ಪಕ್ಕ ಲವ್ ಮ್ಯಾರೇಜ್. ಸುಮಾರು 12 ವರ್ಷಗಳಿಂದ ಇಬ್ಬರು ಲವ್ ಮಾಡುತ್ತಿದ್ದರು. ಈಗ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿದ್ದಾರೆ. ಚೈತ್ರಾ ಕುಂದಾಪುರ ಅವರ ವಿವಾಹಕ್ಕೆ ಬಿಗ್ ಬಾಸ್ ಸ್ಪರ್ಧಿಗಳು ಎಲ್ಲರೂ ಭಾಗಿಯಾಗಿದ್ದರು. ಅದರಲ್ಲೂ ಬಿಗ್ ಬಾಸ್ ರಜತ್ ಕಿಶನ್ ಅಣ್ಣನ ಸ್ಥಾನದಲ್ಲಿ ನಿಂತು ಎಲ್ಲಾ ಕಾರ್ಯವನ್ನ ನೆರವೇರಿಸಿಕೊಟ್ಟರು.

ಬಿಗ್ ಬಾಸ್ ನಲ್ಲಿ ಇರುವಷ್ಟು ದಿನ ಬಾಸ್ ಬಾಸ್ ಅಂತ ಚೈತ್ರಾರನ್ನ ಗೋಳುಯ್ದುಕೊಂಡಿದ್ದರು. ಈಗ ಅಣ್ಣನ ಸ್ಥಾನದಲ್ಲಿ ನಿಂತು ಮದುವೆ ಶಾಸ್ತ್ರದಲ್ಲಿ ಭಾಗಿಯಾಗಿದ್ದಾರೆ. ರಜತ್ ಜೊತೆಗೆ ಧನರಾಜ್ ಆಚಾರ್ಯ, ಗೋಲ್ಡ್ ಸುರೇಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಬಿಗ್ ಬಾಸ್ ನಲ್ಲಿರುವಷ್ಟು ದಿನ ಜೋರು ಮಾತುಗಳಿಂದಾನೇ ಚೈತ್ರಾ ಫೇಮಸ್ ಆಗಿದ್ದರು. ತಂಗಿ ತಂಗಿ ಅಂತ ಎಲ್ಲರೊಟ್ಟಿಗೆ ಇರ್ತಾ ಇದ್ದರು. ಹೀಗಾಗಿ ಚೈತ್ರಾ ಮದುವೆಯಲ್ಲಿ ಭಾಗಿಯಾಗಿ ಶುಭ ಹಾರೈಸಿದ್ದಾರೆ. ದಂಪತಿಗೆ ಹೊಸ ಜೀವನ ಸುಖಕರವಾಗಲಿ ಎಂದು ಹಾರೈಸಿದ್ದಾರೆ.


















