Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

BBK10: ವಿನಯ್ ಗೆ ಗಿಫ್ಟ್ ಆಗಿ ಸಿಕ್ತು ಸಂಗೀತಾ ಬಳೆಗಳ ಫೋಟೋ: ಯಾಕೆ ಗೊತ್ತಾ..?

---Advertisement---

ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಮಧ್ಯೆ ಜಗಳಗಳು ಆಗುವುದು ಕಾಮನ್. ಆದರೆ ಆ ಜಗಳದಲ್ಲಿ ಬರುವ ಮಾತುಗಳು ಬಹಳ ಮುಖ್ಯವಾಗುತ್ತದೆ. ಈ ವಾರದ ಎಪಿಸೋಡಿನಲ್ಲಂತೂ ಸದಸ್ಯರ ಬಾಯಲ್ಲಿ ಬಂದ ಮಾತುಗಳು ಅತ್ಯುತ್ತಮವಾಗಿತ್ತು. ಯಾರಿಗೆ ಯಾರು ಕಡಿಮೆ ಇಲ್ಲ ಎಂಬಂತ ಸ್ಪರ್ಧೆಯೇ ಇತ್ತು.

ಇಡೀ ವಾರ ಸದಸ್ಯರು ರೀತಿ ಕಿಚ್ಚನಿಗೂ ಬೇಸರ ತರಿಸಿದೆ. ಅದಕ್ಕೆ ಖಡಕ್ ಆಗಿಯೇ ಸುದೀಪ್ ಎಲ್ಲರಿಗೂ, ಈ ಟೀಂ ಕಡೆಯಿಂದ ಒಬ್ಬರು ಫೈನಲಿಸ್ಟ್ ರೆಡಿಯಾಗಿದ್ದಾರೆ. ಇನ್ನು ಆ ಟೀಂನಿಂದ ಒಬ್ಬರನ್ನ ರೆಡಿ ಮಾಡಿಬಿಡಿ. ಹದಿನೆಂಟು ವಾರದ ಬಿಗ್ ಬಾಸ್ ಅನ್ನ ನಾಲ್ಕೆ ವಾರದಲ್ಲಿ ಮುಗಿಸಿಬಿಡೋಣಾ ಎಂದಿದ್ದಾರೆ. ಈ ರೀತಿಯ ಮಾತುಕತೆ ಮುಗಿದ ಮೇಲೆ ಸುದೀಪ್ ನಮ್ರತಾ ಹಾಗೂ ಸಂಗೀತಾ ಜಗಳ ಹಾಗೂ ವಿನಯ್ ಆಡಿದ ಮಾತಿನ ಬಗ್ಗೆ ಅವರಿಬ್ಬರ ಬಳಿಯೇ ಕ್ಲಾರಿಟಿ ಕೇಳಿದ್ದಾರೆ.

ವಿನಯ್ ಈ ವಾರ ಬಳಸಿದ ಪದಗಳು ಒಂದೆರಡಲ್ಲ. ಬಳೆಗಳ ರಾಜ, ಗಂಡಸರ ಥರ ಆಡು, ಬಾರೋ ಗಂಡಸು ಬಾ ಹೀಗೆ ಹಲವು ಪದಗಳನ್ನು ಕಾರ್ತೀಕ್ ಮೇಲೆ ಪ್ರಯೋಗ ಮಾಡಿದರು. ಇದಕ್ಕೆ ಕಿಚ್ಚ ಸುದೀಪ್ ಕೂಡ ಗರಂ ಆಗಿದ್ದರು. ವಿನಯ್ ಬಳಿಯೇ ಅದಕ್ಕೆ ಕ್ಲಾರಿಟಿಯನ್ನು ಪಡೆದುಕೊಂಡರು. ಆದರೆ ವಿನಯ್ ಆಡಿದ ಮಾತಿಗೆ ಸ್ಪಷ್ಟನೆ ಕೊಡುವುದಕ್ಕೆ ರೆಡಿ ಇಲ್ಲ. ಆ ಮಾತುಗಳಿಗೆ ಅರ್ಥ ನೀಡುವುದರಲ್ಲಿಯೇ ಸೋತರು. ಅವರ ಅಕ್ಕ ಪಕ್ಕ ಇದ್ದ ಸ್ನೇಹಿತ್ ಹಾಗೂ ನಮ್ರತಾ ಬಳಿಯೂ ಕೇಳಿ, ಅದರ ನಿಜವಾದ ಅರ್ಥವನ್ನು ತಿಳಿಸಿ, ಅವರಿಬ್ಬರಿಗೂ ತಪ್ಪಿನ ಅರಿವು ಮೂಡಿಸಿದರು.

ವಾರದ ಕೊನೆಯಲ್ಲಿ ಇಡೀ ವಾರ ಯಾರು ಚೆನ್ನಾಗಿ ಆಡುತ್ತಾರೋ ಅವರಿಗೆ ಕಿಚ್ಚನ ಚಪ್ಪಾಳೆ ಸಿಗುತ್ತೆ. ಕಿಚ್ಚನ ಚಪ್ಪಾಳೆಗಾಗಿಯೇ ಸಾಕಷ್ಟು ಎಫರ್ಟ್ ಹಾಕಲಾಗುತ್ತದೆ. ಈ ವಾರ ಕಿಚ್ಚನ ಚಪ್ಪಾಳೆ ಒಂದು ಸ್ಪೆಷಲ್ ಆಗಿತ್ತು. ಅದುವೇ ವಿನಯ್ ಗೆ ಆ ಗಿಫ್ಟ್ ಸಿಕ್ಕಿದೆ. ಸಂಗೀತಾ ಅವರ ಬಳೆ ಇದ್ದಂತ ಫೋಟೋ ಬಂದಿದೆ. ಆ ಬಳೆಗಳ ಕೈಗೆ ಕಿಚ್ಚನ ಚಪ್ಪಾಳೆ ಹೋಗಿದೆ. ಅಂದರೆ ಸಂಗೀತಾಗೆ ಆ ಚಪ್ಪಾಳೆ ಸಿಕ್ಕಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...