ಸುಪ್ರೀಂ ಕೋರ್ಟ್ ನಲ್ಲೂ ವಜಾ ಆಯ್ತು ಬಾನು ಮುಷ್ತಾಕ ವಿರೋಧಿಸಿದ್ದ ಅರ್ಜಿ..!

ನವದೆಹಲಿ: ಈ ಬಾರಿಯ ದಸರಾ ಉದ್ಘಾಟನೆ ಮಾಡುವುದಕ್ಕೆ ಸರ್ಕಾರವೇ ಬಾನು ಮುಷ್ತಾಕ ಅವರನ್ನು ಆಯ್ಕೆ ಮಾಡಿದೆ. ಆದರೆ ಪ್ರತಾಪ್ ಸೇರಿದಂತೆ ಹಲವರು ಬಾನು ಮುಷ್ತಾಕ ಆಯ್ಕೆ ತಪ್ಪು ಎಂದೇ ಹೇಳಿದರು, ಹೈಕೋರ್ಟ್ ಮೆಟ್ಟಿಲು ಕೂಡ ಹೇರಿದರು. ಹೈಕೋರ್ಟ್ ನಿಂದ ಆ ಅರ್ಜಿ ವಜಾಗೊಂಡಿತ್ತು. ಬಳಿಕ ವಿರೋಧಿಸಿದ ಅರ್ಜಿಯೊಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಸುಪ್ರೀಂ ಕೋರ್ಟ್ ನಲ್ಲೂ ಅರ್ಜಿ ವಜಾಗೊಂಡಿದೆ.

ಜಸ್ಟೀಸ್ ವಿಕ್ರಮ್ ನಾಥ್ ಅವರಿದ್ದ ಪೀಠವೂ ಈ ಅರ್ಜಿಯನ್ನು ವಜಾಗೊಳಿಸಿದೆ. ಅರ್ಜಿ ವಜಾಗೊಳಿಸುವುದಕ್ಕೂ ಮುನ್ನ ಅರ್ಜಿಯ ಉದ್ದೇಶವನ್ನು ಕೇಳಿದ ಕೋರ್ಟ್, ಬಳಿಕ ಅರ್ಜಿ ವಜಾಗೊಳಿಸಿದೆ. ಈ ವೇಳೆ ಅರ್ಜಿದಾರರ ಪರ ವಕೀಲರಾದ ಸುರೇಶ್ ಅವರು, ಮೈ ಲಾರ್ಡ್ ದಯವಿಟ್ಟು ನನ್ನ ವಾದವನ್ನು ಕೇಳಿ. ಇದು ಜಾತ್ಯಾತೀಯ ವ್ಯವಸ್ಥೆ ಹೌದು. ಆದರೆ ನನ್ನ ಧಾರ್ಮಿಕ ಚಟುವಟಿಕೆಗಳಲ್ಲಿ ಹಸ್ಯಕ್ಷೇಪ ಮಾಡಬೇಡಿ ಎಂದು ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ವಾದಿಸಿದ್ದರು. ಆಗ ನ್ಯಾಯಮೂರ್ತಿ ವಿಕ್ರಮ್ ನಾಥ್ ಅವರು, ಇದು ರಾಜ್ಯ ಸರ್ಕಾರದ ಕಾರ್ಯಕ್ರಮ. ರಾಜ್ಯವು ಎ, ಬಿ ಮತ್ತು ಸಿ ನಡುವೆ ಹೇಗೆ ವ್ಯತ್ಯಾಸವನ್ನು ತೋರಿಸುತ್ತದೆ ಎಂದು ಪ್ರಶ್ನೆ ಮಾಡಿದರು.

ಈ ಮೂಲಕ ಬಾನು ಮುಷ್ತಾಕ ಅವರು ದಸರಾ ಉದ್ಘಾಟನೆ ಮಾಡುವ ಹಾದಿ ಬಹಳ ಸುಲಭವಾದಂತೆ ಆಗಿದೆ. ಮೊದಲು ಈ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿ ಹೈಕೋರ್ಟ್ ನಲ್ಲಿ ವಜಾಗೊಂಡಿತ್ತು, ಈಗ ಸುಪ್ರೀಂ ಕೋರ್ಟ್ ನಲ್ಲೂ ಅರ್ಜಿ ವಜಾಗೊಂಡಿದೆ. ಈ ಎಲ್ಲಾ ಬೆಳವಣಿಗೆಯಿಂದ ಬಾನು ಮುಷ್ತಾಕ ಅವರೆ ಅರ್ಜಿ ಸಲ್ಲಿಕೆ ಮಾಡುವುದು ದೃಢವಾದಂತೆ ಆಯ್ತು.

Share This Article
Enable Notifications OK No thanks