ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಎರಡನೇ ಬಾರಿಗೆ ಜೈಲು ಸೇರಿರುವ ನಟ ದರ್ಶನ್ ಗೆ ಹಲವು ಸಮಸ್ಯೆಗಳು ಎದುರಾಗಿದೆ. ಹಾಸಿಗೆ, ದಿಂಬು ಸರಿಯಾಗಿ ಸಿಗದೆ ಸಂಕಷ್ಟ ಅನುಭವಿಸಿದರು, ಚಳಿಗಾಲದಲ್ಲಿ ಚಳಿ ಹೆಚ್ಚಾಗಿ ಮಲಗಲು ನಡುಗುತ್ತಿದ್ದಾರೆ. ಈಗ ನೋಡಿದ್ರೆ ಬೆನ್ನು ನೋವು ಹೆಚ್ಚಾಗಿದೆ. ಇದರಿಂದ ದರ್ಶನ್ ಗೆ ಜೈಲು ಸಹವಾಸ ಸಾಕು ಸಾಕೆನಿಸಿದೆ.
ದರ್ಶನ್ ಗೆ ಬೆನ್ನು ನೋವು ಮೊದಲಿನಿಂದಾನೂ ಇದೆ. ಅದಕ್ಕೆ ಅಂತ ಫಿಸಿಯೋಥೆರಪಿ ಟ್ರೀಟ್ಮೆಂಟ್ ತೆಗೆದುಕೊಳ್ಳುತ್ತಿದ್ದರು. ಸರ್ಜರಿ ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆ ಇರುವುದಕ್ಕೆ ಮಧ್ಯಂತರ ಜಾಮೀನನ್ನು ನೀಡಿದ್ದರು. ಆದರೆ ಜೈಲಿಗೆ ಬಂದ ಮೇಲೆ ಮಲಗುವ ವ್ಯವಸ್ಥೆ ಸರಿಯಿಲ್ಲದ ಕಾರಣ ಮತ್ತೆ ಬೆನ್ನು ನೋವು ಹೆಚ್ಚಾಗಿದೆ. ಜೈಲಿನಲ್ಲಿಯೂ ಫಿಸಿಯೋಥೆರಪಿ ಚಿಕಿತ್ಸೆಯನ್ನು ಕೊಡಿಸುತ್ತಿದ್ದಾರೆ. ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾದ ದರ್ಶನ್, ಜಡ್ಜ್ ಮುಂದೆ ಬೆನ್ನು ನೋವಿನ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಸದ್ಯ ದರ್ಶನ್ ಅವರ ಗೈರಿನಲ್ಲಿಯೇ ಅವರ ಡೆವಿಲ್ ಸಿನಿಮಾದ ಪ್ರಚಾರ ಕಾರ್ಯವೂ ನಡೆಯುತ್ತಿದೆ. ವಿಜಯಲಕ್ಷ್ಮಿ ಹಾಗೂ ದಿನಕರ್ ತೂಗುದೀಪ ಅವರು ಓಡಾಡಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಮಧ್ಯಂತರ ಜಾಮೀನು ಸಿಕ್ಕಾಗಲೇ ದರ್ಶನ್, ಆ ಬೆನ್ನು ನೋವಿನಲ್ಲೂ ಸಿನಿಮಾದ ಉಳಿದ ಭಾಗದ ಕೆಲಸವನ್ನು ಮುಗಿಸಿ ಕೊಟ್ಟಿದ್ದರು. ಆದರೆ ಸಿನಿಮಾ ರಿಲೀಸ್ ವೇಳೆಗೂ ದರ್ಶನ್ ಅವರು ಬರುವುದಕ್ಕೆ ಸಾಧ್ಯವಿಲ್ಲ. ಹೀಗಾಗಿಯೇ ಅವರ ಕುಟುಂಬಸ್ಥರು ಸೇರಿ ಸಿನಿಮಾದ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಇದರ ನಡುವೆ ದರ್ಶನ್ ಅವರಿಗೆ ಚಳಿ ಜಾಸ್ತಿ ಇರುವ ಕಾರಣದಿಂದಾನೂ ಕೋರ್ಟ್ ಕೂಡ ಹೆಚ್ಚಿನ ಹೊದಿಕೆ ಕೊಡುವುದಕ್ಕೆ ಸೂಚನೆ ನೀಡಿದೆ.
