ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ಅಸ್ಥಿ ಪಂಜರ ಹುಡುಕಾಟದ ನಡುವೆ ನಿನ್ನೆ ಒಂದು ದೊಡ್ಡ ಗಲಾಟೆಯೇ ನಡೆದಿದೆ. ಯೂಟ್ಯೂಬರ್ಸ್ ಗಳ ಮೇಲೆ ಹಲ್ಲೆ ನಡೆದಿದ್ದು, ದೊಡ್ಡ ಅವಾಂತರವನ್ನೇ ಸೃಷ್ಟಿ ಮಾಡಿದೆ. ಈ ಸಂಬಂಧ ಬಿಗ್ ಬಾಸ್ ರಜತ್ ಮಾತನಾಡಿದ್ದಾರೆ. ಅಲ್ಲಿ ನಡೆದ ವಿಚಾರದ ಬಗ್ಗೆ ಮಾತನಾಡಿದ್ದಾರೆ.
ಧರ್ಮಸ್ಥಳ ಕ್ಷೇತ್ರದ ಬಗ್ಗೆ ಮಾತನಾಡಿದ್ದಾರೆಂದು ಆರೋಪಿಸಿ ಹಲ್ಲೆ ಮಾಡಲಾಗಿದೆ. ನಾನು ಸ್ಥಳದಲ್ಲಿಯೇ ಇದ್ದೆ ಅನ್ನೋ ವಿಷ್ಯಕ್ಕೆ ಗಲಾಟೆಯಾಗಿದೆ. ಒಮ್ನಿ, ಮಾರುತಿ ಕಾರು, ಬೈಕ್ ಗಳಲ್ಲಿ ಬಂದು ಹಲ್ಲೆ ಮಾಡಿದ್ದಾರೆ. ಮೂವರ ಮೇಲೆ ಹಲ್ಲೆಮಾಡಿ, ಕೆಟ್ಟ ರೀತಿಯಲ್ಲಿ ವರ್ತಿಸಿದರು ಎಂದು ರಜತ್ ಹೇಳಿದ್ದಾರೆ.
ಮೊದಲಿಗೆ ಮಾತಾಡ್ತಾ ಇದ್ದರು. ಆಮೇಲೆ ಇದ್ದಕ್ಕಿದ್ದ ಹಾಗೇ ಹಲ್ಲೆ ಮಾಡೋದಕ್ಕೆ ಶುರು ಮಾಡುದ್ರು. ಯಾಕೆ ಅಂತ ಕೇಳಿದ್ರೆ ಕ್ಷೇತ್ರದ ಬಗ್ಗೆ ಮಾತನಾಡಿದ್ರು ಅಂತ ಹೇಳ್ತಾರೆ. ತುಂಬಾ ಹೊಡೆದಿದ್ದರು. ಆಮೇಲೆ ನನ್ನ ಕಾರಿನಲ್ಲಿ ಕೂರಿಸಿಕೊಂಡು ಮೊದಲು ಇಲ್ಲಿಂದ ಹೋಗಿ ಅಂತ ಹೇಳಿದೆವು. ನಾನು ನೋಡಿದ ಹಾಗೇ ಅಲ್ಲಿ ಯಾರೂ ಕೂಡ ಕ್ಷೇತ್ರದ ಬಗ್ಗೆ ಮಾತನಾಡಲೇ ಇಲ್ಲ. ಆದ್ರೆ ಕ್ಷೇತ್ರದ ಬಗ್ಗೆ ಮಾತನಾಡಿದರು ಅಂತ ಹಲ್ಲೆ ಮಾಡಿದರು. ನಾವೆಲ್ಲಾ ಇದ್ದಾಗಲೇ ಆ ರೀತಿ ಮಾಡ್ತಾರೆ ಅಂದ್ರೆ ಇನ್ನು ರಾತ್ರಿ ಸಮಯದಲ್ಲಿ ಅಲ್ಲಿ ಇನ್ನು ಏನೆಲ್ಲಾ ಆಗಿರಬಹುದು. ಇದು ಒಳ್ಳೆಯ ಬೆಳವಣಿಗೆ ಅಲ್ವೇ ಅಲ್ಲ. ಪ್ರೆಸ್ ನವರ ಮೇಲೆ ಈ ರೀತಿ ಹಲ್ಲೆಮಾಡಬಾರದು ಎಂದು ರಜತ್ ಹೇಳಿದ್ದಾರೆ. ಯೂಟ್ಯೂಬರ್ಸ್ ಕೂಡ ಕ್ಷೇತ್ರದ ಬಗ್ಗೆ ಮಾತನಾಡಿಲ್ಲ ಎಂಬುದನ್ನು ಕ್ಲಿಯರ್ ಮಾಡಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.










