Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನೀವೂ ಸಸ್ಯಹಾರಿಗಳಾ..? ಕಬ್ಬಿಣಾಂಶ.. ಕ್ಯಾಲ್ಶಿಯಂಗಾಗಿ ರಾಗಿ ಸೇವಿಸಿ..!

---Advertisement---

ರಾಗಿ ತಿಂದವ ನಿರೋಗಿಯಾಗಿರ್ತಾನೇ ಅನ್ನೋದು ಲೋಕಾರೂಢಿ ಮಾತು. ಹಾಗೇ ಹಿರಿಯರ ಅನುಭವದ ಮಾತು. ರಾಗಿ ತಿನ್ನುವುದರಿಂದ ದೇಹ ಶಕ್ತಿಯುತವಾಗಿಯೂ ಇರುತ್ತೆ, ರೋಗಗಳಿಂದಾನೂ ದೂರ ಇರಬಹುದು. ಯಾಕಂದ್ರೆ ರಾಗಿಯಲ್ಲಿ ಅಷ್ಟು ಪೋಷಾಕಾಂಶಗಳು ಇರುತ್ತವೆ. ನಮ್ಮ ದೇಹಕ್ಕೆ ಎಲ್ಲಾ ರೀತಿಯಿಂದಾನು ಅನುಕೂಲ ಒದಗಿಸುತ್ತದೆ.

ರಾಗಿಯಲ್ಲಿ ಕ್ಯಾಲ್ಶಿಯಂ ಹಾಗೂ ಕಭಿಣದ ಅಂಶಗಳು ಯಥೇಚ್ಛವಾಗಿರುತ್ತವೆ. ಈ ಎರಡು ನಮ್ಮ ದೇಹಕ್ಕೆ ಬೇಕಾದ ಬಹುಮುಖ್ಯವಾದ ಪೋಷಕಾಂಶಗಳು. ಕಬ್ಬಿಣದ ಪೂರೈಕೆ ದೇಹದಲ್ಲಿ ಹೆಚ್ಚಾಗಿಯೇ ಇರಬೇಕು. ಹೀಗಾಗಿ ಈ ಎರಡು ಅಂಶಗಳು ದೇಹದಲ್ಲಿ ಇರಬೇಕು ಅಂದ್ರೆ ರಾಗಿಯನ್ನು ಪ್ರತಿದಿನ ನಿಮ್ಮ ಆಹಾರದಲ್ಲಿ ಸೇವಿಸಬೇಕಾಗುತ್ತದೆ.

ಇನ್ನು ಮನುಷ್ಯನಿಗೆ ಕ್ಯಾಲ್ಶಿಯಂ ಅನ್ನೋದು ಬಹಳ ಮುಖ್ಯ. ಬೆಳೆಯುವ ಮಕ್ಕಳಿಗೆ, ಗರ್ಭಿಣಿಯರಿಗೆ ಅತ್ಯಂತ ಅವಶ್ಯಕವಾಗಿದೆ. ಈಗಂತೂ ಸೂರ್ಯನ ಬಿಸಿಲನ್ನೇ ನೋಡದ ಮಕ್ಕಳಲ್ಲಿ ಮೂಳೆಗಳ ಸಮಸ್ಯೆ ಹೆಚ್ಚಾಗಿಯೇ ಕಾಡುತ್ತದೆ. ಅದಕ್ಕಾಗಿ ವೈದ್ಯರು, ಔಷಧಿಗಳು ಅಂತಾನೇ ಹೋಗುವುದು ಹೆಚ್ಚು. ಅಡುಗೆ ಮನೆಯಲ್ಲಿಯೇ, ತಿನ್ನುವ ಆಹಾರದಲ್ಲಿಯೇ ನಾವೂ ಕ್ಯಾಲ್ಶಿಯಂ ಕಂಡುಕೊಳ್ಳಬಹುದು. ಅದರಲ್ಲಿ ಮುಖ್ಯವಾಗಿ ಬಳಕೆ ಮಾಡಬೇಕಿರುವುದೇ ರಾಗಿ.

ಮಾಂಸಹಾರಿಗಳಿಗೆ ಹೇಗೋ ಒಂದಷ್ಟು ಪೋಷಕಾಂಶಗಳು ಸಿಗುತ್ತವೆ. ಆದರೆ ಸಸ್ಯಹಾರಿಗಳಿಗೆ ವಿಟಮಿನ್ ಕೊರತೆ ಎದುರಾಗಬಾರದು ಎಂದರೆ ರಾಗಿ ಬಳಕೆ ಉತ್ತಮ. ಇದರಲ್ಲಿ ಹೆಚ್ಚಿನ ಕಬ್ಬಿಣಾಂಶ ಇದೆ. ರಾಗಿಯನ್ನ ಸೇವನೆ ಮಾಡುವುದಕ್ಕೆ ಹಲವು ವಿಧಗಳಿವೆ. ಹಲವು ಜಿಲ್ಲೆಯಲ್ಲಿ ಮುದ್ದೆ ಮಾಡಿ ಸವಿದರೆ, ಇನ್ನು ಕೆಲವು ಕಡೆ ಮುದ್ದೆಯ ಬಗ್ಗೆ ಪರಿಚಯವಿರಲ್ಲ. ಹೀಗಾಗಿ ರಾಗಿಯನ್ನ ಮಿಲ್ಲೆಟ್ ರೂಪದಲ್ಲು ತಿನ್ನಬಹುದು. ಹಾಗೇ ಇಡ್ಲಿ, ದೋಸೆಯನ್ನು ಮಾಡಿಕೊಂಡು ತಿನ್ನಬಹುದು. ಒಟ್ಟಾರೆ ದೇಹಕ್ಕೆ ಬೇಕಾದ ಪೋಷಾಕಾಂಶಗಳ ಆಗರವಿರುವ ರಾಗಿಯನ್ನು ತಪ್ಪದೆ ಸೇವಿಸಿ.

 

(ಪ್ರಮುಖ ಸೂಚನೆ: ಆರೋಗ್ಯ ತಜ್ಞರು ಮತ್ತು ಇತರ ಅಧ್ಯಯನಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ ನಾವು ಈ ವಿವರಗಳನ್ನು ಒದಗಿಸುತ್ತಿದ್ದೇವೆ. ವಿಷಯಗಳು ಕೇವಲ ತಿಳುವಳಿಕೆಗಾಗಿ ಮಾತ್ರ. ನಿಮಗೆ ಯಾವುದೇ ಅನುಮಾನಗಳು ಅಥವಾ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.)

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment