ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮದ ಕೂಗು ಬೂದಿ ಮುಚ್ಚಿದ ಕೆಂಡದಂತೆ. ಆಗಾಗ ಚರ್ಚೆಗೆ ಬರ್ತಾನೆ ಇರುತ್ತೆ. ಇದೀಗ ಸಚಿವ ಎಂಬಿ ಪಾಟೀಲ್ ಅವರಿಂದಾನೇ ಲಿಂಗಾಯತ ಧರ್ಮದ ಪ್ರತ್ಯೇಕ ಕೂಗು ಕೇಳಿ ಬಂದಿದೆ. ಜೈನರು, ಸಿಖ್ಖರು, ಬೌದ್ಧರಿಂದ ಯಾರರಿಗಾದ್ರೂ ತೊಂದರೆ ಆಗಿದೆಯಾ..? ತೊಂದರೆ ಆಗಿಲ್ಲವಲ್ಲ, ಹಾಗೆಯೇ ಲಿಂಗಾಯತ ಧರ್ಮ ಕೂಡ ಬೇಕು.ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತಲೆಗೆ ಕಟ್ಟುವುದಕ್ಕೆ ಆಗುವುದಿಲ್ಲ. ಹಿಂದೆ ಆಟ ಆಡಿದ ಹಾಗೇ ಈಗ ಆಡಲು ಆಗುವುದಿಲ್ಲ.
ಭೌಗೋಳಿಕವಾಗೊ ನಾವೆಲ್ಲಾ ಭಾರತೀಯರು, ಭೌಗೋಳಿಕವಾಗಿ ನಾವೆಲ್ಲಾ ಹಿಂದೂಗಳು. ಇದನ್ನ ನಾವೂ ನಿನ್ನೆಯೇ ಹೇಳಿದ್ದೇವೆ. ಆದರೆ ಇದು ಬಸವ ಧರ್ಮ ಇಂಡಿಕ್ ರಿಲಿಜಿಯನ್, ಇದರಲ್ಲಿ ಪ್ರಶ್ನೆ ಏನಿದೆ..? ಹೋದ ಸಲ ಸಿದ್ದರಾಮಯ್ಯ ತಲೆಗೆ ಕಟ್ಟಿದ್ದರು. ಆದರೆ ಈ ಬಾರಿ ಯಾರ ಆಟಗಳು ನಡೆಯುವು್ಇಲಗಲ. ನಾವೂ ಪಾಸಿಟೀವ್ ಆಗಿಯೇ ಹೋಗೋಣಾ.
ನಾವೂ ಲಿಂಗಾಯತ ಧರ್ಮದವರು, ಚತುರ್ವರ್ಣದಿಂದ ಹೊರಗೆ ಉಳಿದಿದ್ದೇವೆ. ನಿನ್ನೆ ಕಾರ್ಯಕ್ರಮ ನಡೆದಿದ್ದು ಮಠಾಧಿಪತಿಗಳ ಒಕ್ಕೂಟದಿಂದ. ಯಾರಿಗೆ ದ್ವಂದ್ವ ನಿಲುವು ಇದೆ ಅವರನ್ನು ಕರೆಸಿಲ್ಲ. ನೇರವಾಗಿ ಇರುವವರನ್ನು ನಿನ್ನೆ ಕರೆದಿದ್ದಾರೆ. ವೀರಶೈವ ಮಹಾಸಭಾ ಕೂಡ ಒಂದು ಹಂತಕ್ಕೆ ಹತ್ತಿರ ಬಂದಿದೆ. ಹಿಂದೂ ಧರ್ಮದ ಭಾಗವಲ್ಲ ಅಂತ ದಾವಣಗೆರೆಯಲ್ಲಿ ಮಹಾಸಭಾ ನಿರ್ಣಯ ಮಾಡಿದೆ. ಅವರೂ ನಮ್ಮೊಂದಿಗೆ ಅರ್ಧ ದಾರಿಗೆ ಬಂದಿದ್ದಾರೆ ಎಂದಿದ್ದಾರೆ. ಒಟ್ಟಾರೆ ಪ್ರತ್ಯೇಕ ಲಿಂಗಾಯತ ಧರಗಮದ ಕೂಗು ಸ್ವಲ್ಪ ಮಟ್ಟಿಗೆ ತಣ್ಣಗೆ ಆಗಿತ್ತು. ಆದ್ರೆ ಈಗ ಸಚಿವರಿಂದಾನೇ ಶುರುವಾಗಿದೆ. ಈ ಬಾರಿ ಬೆಳವಣಿಗೆ ಏನಾಗಲಿದೆ ಎಂಬುದನ್ನ ನೋಡಬೇಕಿದೆ.

