Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಯಶ್ ತಾಯಿ ಪುಷ್ಪ ನಿರ್ಮಾಣದ ‘ಕೊತ್ತಲವಾಡಿ’ ಬಗ್ಗೆ ಮತ್ತೊಂದು ಆರೋಪ

---Advertisement---

ಈ ಹಿಂದೆ ಸ್ವರ್ಣ ಎಂಬ ಕಲಾವಿದೆ ಗಂಭೀರ ಆರೋಪ ಮಾಡಿದ್ದರು. ಇದೀಗ ಈ ಸಂಬಂಧ ನಿರ್ದೇಶಕ ಶ್ರೀರಾಜ್ ತಲಘಟ್ಟಪುರ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಪಿಆರ್ಓ ಹರೀಶ್ ಅರಸು, ನಿತೀನ್, ಸ್ವರ್ಣ ಈ ಮೂವರು ಸೇರಿಕೊಂಡು ಚಿತ್ರತಂಡದ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ. ಪಬ್ಲಿಸಿಟಿಗೋಸ್ಕರ 65 ಲಕ್ಷ ರೂಪಾಯಿ ಹಣವನ್ನು ಪಡೆದುಕೊಂಡು, ಬಳಿಕ ಅದಕ್ಕೆ ಯಾವುದೇ ರೀತಿಯ ಲೆಕ್ಕವನ್ನು ಕೊಡದೆ, ಇನ್ನು ಹಣ ಕೊಡದೆ ಹೋದರೆ ಮುಂದಿನ ದಿನಗಳಲ್ಲಿ ಚಿತ್ರತಂಡದ ವಿರುದ್ಧ ಕೆಟ್ಟಕೆಟ್ಟ ಪೋಸ್ಟ್ ಗಳನ್ನ ಮಾಡ್ತೇವೆ ಎಂಬ ಬ್ಲಾಕ್ ಮೇಲ್ ಮಾಡಿದ್ದಾರೆ ಎಂಬ ದೂರನ್ನ ದಾಖಲು ಮಾಡಿದ್ದಾರೆ. ದೂರಿನ ಅನ್ವಯ ತಲಘಟ್ಟಪುರ ಪೊಲೀಸರು ಈಗಾಗಲೇ ಮೂರು ಜನರಿಗೂ ನೋಟೀಸ್ ನೀಡಿದ್ದಾರೆ. ಬಳಿಕ ಅವರ ಹೇಳಿಕೆಗಳನ್ನು ಪೊಲೀಸರು ದಾಖಲು ಮಾಡಿಕೊಳ್ಳಲಿದ್ದಾರೆ.

 

ಸಿನಿಮಾ ಪ್ರಚಾರಕ್ಕೆಂದು ಬರೋಬ್ಬರಿ 65 ಲಕ್ಷ ರೂಪಾಯಿ ಪಡೆದುಕೊಂಡಿದ್ದರಂತೆ. ಆದರೆ ಲೆಕ್ಕವೇ ಕೊಟ್ಟಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಸಿನಿಮಾ ನಿರ್ದೇಶಕ ಶ್ರೀರಾಜ್ ಅವರಿಂದಲೇ ಲೆಕ್ಕದ ಆರೋಪ ಕೇಳಿ ಬಂದಿದೆ. 65 ಲಕ್ಷದ ಹಣದ ಲೆಕ್ಕ ಕೊಟ್ಟಿಲ್ಲ, ಮತ್ತೆ ಮತ್ತೆ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಹಣ ಕೊಡದೆ ಹೋದರೆ ಶ್ರೀರಾಜ್ ರನ್ನ ಕೆಟ್ಟದಾಗಿ ಬಿಂಬಿಸುತ್ತೇವೆಂದು ಬೆದರಿಕೆ ಹಾಕುತ್ತಿದ್ದಾರಂತೆ.

ಈ ಬಗ್ಗೆ ಮಾತನಾಡಿರುವ ನಿರ್ದೇಶಕ ಶ್ರೀರಾಜ್, ಸಿನಿಮಾದ ಆಗುಹೋಗುಗಳ ಬಗ್ಗೆ ಅಮ್ಮನ ಬಳಿ ಚರ್ಚೆ ಮಾಡುತ್ತಲೆ ಇದ್ದೆ. ಯಾರಿಗೆ ಪೇಮೆಂಟ್ ಕೊಡಬೇಕಿರುತ್ತೆ ಅವರಿಗೆ ಮಾಹಿತಿ ನೀಡಿರುತ್ತೇವೆ. ಉದಾಹರಣೆಗೆ 10 ಸಾವಿರ ಕೊಡ್ತೀವಿ ಅಂದ್ರೆ ಅಷ್ಟೇ ಕೊಡೋದಕ್ಕೆ ಆಗೋದು. ಅದರ ಮೇಲೂ ಎಕ್ಸ್ ಟ್ರಾ ಕೊಡಿ ಅಂದ್ರೆ ಹೇಗೆ ಕೊಡೋದು. ಕಾನೂನು ಮುಖಾಂತರವೇ ಹೋರಾಟ ಮಾಡುತ್ತೇನೆ. ಹೊಸ ಕಲಾವಿದರನ್ನ ತೆಗೆದುಕೊಳ್ಳುವಾಗ ಯೋಚನೆ ಮಾಡಿ ಎಂದು ನಿರ್ದೇಶಕ ಶ್ರೀರಾಜ್ ಹೇಳಿದ್ದಾರೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now