Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಾವೆಲ್ಲ ಕನ್ನಡಿಗರು ಮೊದಲು ಕನ್ನಡಿಗರಿಗೆ ಬೈಟ್ ಕೊಡ್ತೀನಿ : ಖುಷಿಯಲ್ಲಿ ಸಿದ್ದರಾಮಯ್ಯ

---Advertisement---

ಮೈಸೂರು: ಈ ಬಾರಿ ಕಾಂಗ್ರೆಸ್ ಪಕ್ಷ ಬಹುಮತ ಪಡೆದು ಸರ್ಕಾರ ರಚಿಸುವುದಕ್ಕೆ ರೆಡಿಯಾಗಿ ನಿಂತಿದೆ. ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ನನ್ನ ಪ್ರಚಾರ ಸಭೆಗಳಲ್ಲಿ ಹೇಳ್ತಾ ಇದ್ದೆ. ಹೈಕಮಾಂಡ್ ಬಳಿ ಹೇಳ್ತಾ ಇದ್ದೆ. 130 ಸ್ಥಾನಗಳನ್ನು ಗೆಲ್ಲುತ್ತೀವಿ ಅಂತ. ಈಗಿನ ಟ್ರೆಂಡ್ ನೋಡಿದ್ರೆ ಅದಕ್ಕಿಂತ ಹೆಚ್ಚಿನ ಸ್ಥಾನ ಗೆಲ್ಲುತ್ತೇವೆ. ಕಾಂಗ್ರೆಸ್ ಪಾರ್ಟಿ ಅದರ ಶಕ್ತಿ ಮೇಲೆನೆ ಸರ್ಕಾರ ಮಾಡುತ್ತೆ.

ಬಿಜೆಪಿ ಸರ್ಕಾರದ ಭ್ರಷ್ಟಾಚಾರ 40% ಭ್ರಷ್ಟಾಚಾರ. ಬಿಜೆಪಿ ಸರ್ಕಾರ 40% ತಗೋಳ್ತಾ ಇದೆ ಅಂತ ಹೇಳಿ ಪ್ರಧಾನ ಮಂತ್ರಿ ಅವರಿಗೆ ಪತ್ರ ಬರೆದಿದ್ದರು. ಆದ್ರೆ ಪ್ರಧಾನಿ ಏನು ಕ್ರಮ ತಗೊಂಡ್ಲಿಲ್ಲ. ರಾಜ್ಯದ ಜನ ಬೇಸತ್ತಿದ್ರು. ಬಿಜೆಪಿ ಎಷ್ಟು ಬೇಗ ತೊಲಗುತ್ತೋ ಅಷ್ಟು ಒಳ್ಳೆಯದ್ದು ಅಂತ ಜನ ಇವತ್ತು ಕಾಂಗ್ರೆಸ್ ಕೈ ಹಿಡಿದಿದ್ದಾರೆ.

ಮೋದಿ, ಅಮಿತ್ ಶಾ, ನಡ್ಡಾ, ಯಡಿಯೂರಪ್ಪ 150 ಸೀಟು ಗೆಲ್ತೀವಿ ಅಂತಿದ್ರು. ಅವರಿಗೆ ಗೊತ್ತಿದ್ರು ಸಹ ಸುಳ್ಳು ಹೇಳ್ತಾ ಇದ್ರು. ಯಾಕಂದ್ರೆ ಅಮಿತ್ ಶಾ ಬಳಿ ಇಂಟೆಲಿಜೆನ್ಸಿ ರಿಪೋರ್ಟ್ ಇತ್ತು. ಆದ್ರೂ ಹೇಗಾದರೂ ಹಣ ಬಲದಿಂದ ಗೆಲ್ಲುವ ಪ್ರಯತ್ನ ಮಾಡಿದ್ರು. ಜನ ಬುದ್ದಿ ಕಲಿಸಿದ್ರು. ಮೋದಿಯವರ ಪ್ರಭಾವ ಏನು ನಡೆದಿಲ್ಲ. ಅವರು ನೂರು ಸಲ ಬಂದ್ರು ಸಹ ಕರ್ನಾಟಕದ ಜನತೆಗೆ ಏನು ಪ್ರಭಾವ ಬೀರಲ್ಲ ಎಂದಿದ್ದಾರೆ.

ಈ ಮಧ್ಯೆ ಮೊದಲು ಇಂಗ್ಲಿಷ್ ಚಾನೆಲ್ ಗಳಿಗೆ ಬೈಟ್ ಕೊಟ್ಟಿದ್ದ ಸಿದ್ದರಾಮಯ್ಯ, ಕನ್ನಡ ಮಾತನಾಡಲು ಹೊರಟಾಗ ಮತ್ತೊಂದು ಇಂಗ್ಲಿಷ್ ಪ್ರಶ್ನೆ ಬಂತು. ಆಗ ಏ ಸುಮ್ನೆ ಇರ್ರಪ್ಪ.. ಮೊದಲು ನಾವೂ ಕನ್ನಡಿಗರು ಅಂತ ಹೇಳಿ ಕನ್ನಡದಲ್ಲಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...