ಅಗ್ನಿಪಥ್ ಯೋಜನೆ ದೇಶದ ಯುವಕರ ಬರ್ಬಾದ್ ಮಾಡುತ್ತೆ : ಯೂಥ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ ವಿ ಶ್ರೀನಿವಾಸ್

suddionenews
1 Min Read

ಅಗ್ನಿಪಥ್ ಯೋಜನೆ ದೇಶದ ಯುವಕರ ಬರ್ಬಾದ್ ಮಾಡುತ್ತೆ. ಆಮೇಲೆ ಯುವಕರಿಗೆ ಕೆಲಸ ಕೊಡ್ತೆವೆ ಅಂತಾರೆ. ಈಗಲೇ ದೇಶದ ಯುವಕರಿಗೆ ಕೆಲಸ ಕೊಡಲು ಆಗುತ್ತಿಲ್ಲ. ಒನ್ ರ್ಯಾಂಕ್ ಒನ್ ಪೆನ್ಸನ್ ಬಗ್ಗೆ ಬಿಜೆಪಿ ಹೇಳಿತ್ತು. ಅಗ್ನಿಪಥ್ ಯೋಜನೆಯಲ್ಲಿ ಯಾವುದೇ ರ್ಯಾಂಕ್ ಇಲ್ಲ ಎಂದು ಯೂಥ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ ವಿ ಶ್ರೀನಿವಾಸ್ ಕಿಡಿಕಾರಿದ್ದಾರೆ.

ಯುವಕರು ದೇಶ ಸೇವೆ ಮಾಡುವ ಕನಸು ‌ಕಂಡಿರ್ತಾರೆ. ಆದ್ರೆ ಯಾವುದೇ ಭದ್ರತೆ ಕೇಂದ್ರ ಸರ್ಕಾರ ನೀಡುತ್ತಿಲ್ಲ. ನಾಲ್ಕು ವರ್ಷ ಆದ ಮೇಲೆ ಬಿಜೆಪಿ ಆಫೀಸ್ ನಲ್ಲಿ‌ ಕೆಲಸ ಕೊಡ್ತೆವೆ ಅಂತಾರೆ. ಸೆಕ್ಯುರಿಟಿ ಗಾರ್ಡ್ ಕೆಲಸ ಕೊಡ್ತೆವೆ ಅಂತಿದ್ದಾರೆ. ಯುವಕರು ಫುಲ್ ಟ್ರೇನಿಂಗ್ ಆಗಿರ್ತಾರೆ. ನಾಳೆ ದೇಶ ವಿರೋಧಿ ಸಂಘಟನೆ ಸೇರಿದ್ರೆ ಏನ್ ಮಾಡ್ತೀರಾ..?.

ಈಗಲೇ ಕದ್ದು ಮುಚ್ಚಿ ದೇಶ ವಿರೋಧಿ ಟ್ರೈನಿಂಗ್ ನಡೆಯುತ್ತೆ. ಫುಲ್ ಟ್ರೇನಿಂಗ್ ಆದ ಯುವಕರು ದೇಶ ವಿರೋಧಿಯಲ್ಲಿ ತೊಡಗ್ತಾರೆ. ಅವಾಗ ಯಾವ ಕಡಿವಾಣ ಹಾಕ್ತಿರ. ಅಮೀತ್ ಶಾ ಮಗ ಮಾತ್ರ ಬಿಸಿಸಿಐ ಕಾರ್ಯದರ್ಶಿ ಆಗಬೇಕು. ಬಡವರು ಮಕ್ಕಳು ಸೇನೆ ಸೇರಬೇಕು. ಬಿಜೆಪಿ ಆಡಳಿತದ ರಾಜ್ಯದಲ್ಲಿ ಪರೀಕ್ಷೆ ಪೇಪರ್ ಲೀಕ್ ಆಗ್ತಾ ಇದೆ. ಆಮೇಲೆ ಉದ್ಯೋಗ ರದ್ದು ಮಾಡ್ತೀರ. ಬಿಜೆಪಿ ಸರ್ಕಾರಗಳು ಕೇವಲ ಇಂತಹ ಗೊಲ್ಮಾಲ್ ಕೆಲಸ ಮಾಡುತ್ತಿವೆ ಎಂದು ಅಗ್ನಿಪಥ್ ಯೋಜನೆ ವಿರುದ್ಧ ಬಿ ವಿ ಶ್ರೀನಿವಾಸ್ .

Share This Article
Leave a Comment

Leave a Reply

Your email address will not be published. Required fields are marked *