ಬಿಎಸ್ ವೈ ಸೈಡ್ ಲೈನ್ ಆಗೋ ವ್ಯಕ್ತಿ ಅಲ್ಲ; ಕೇಂದ್ರ ಸಚಿವ ಎ.ನಾರಾಯಣಸ್ವಾಮಿ

suddionenews
1 Min Read

 

ಚಿತ್ರದುರ್ಗ : ಬಿಜೆಪಿಯಲ್ಲಿ ಬಿಎಸ್ ಯಡಿಯೂರಪ್ಪ ಅವರ ಜಪ ಮಾಡದ ಯಾವುದೇ ರಾಜಕಾರಣಿ ಇಲ್ಲ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು.

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ರಾಜ್ಯದಲ್ಲಿ ಬಿಎಸ್ ವೈ ಸೈಡ್ ಲೈನ್ ಆಗಿಲ್ಲ. ಅಷ್ಟಕ್ಕೂ ಅವರು ಸೈಡ್ ಲೈನ್ ಆಗುವ ವ್ಯಕ್ತಿಯೇ ಅಲ್ಲ, ಅವರನ್ನು ಯಾರೂ ವಿರೋಧ ಮಾಡಿಲ್ಲ. ಅವರನ್ನ ಜಪ‌ ಮಾಡಿಯೇ ನಾವು ರಾಜಕಾರಣ ಮಾಡೋದು ಎಂದರು.

ಬೊಮ್ಮಾಯಿ ಅವರ ನೇತೃತ್ವದಲ್ಲಿ ಮುಂದಿನ ಚುನಾವಣೆಗೆ ಹೋಗುತ್ತವೆ ಎಂದು ಕೇಂದ್ರ ನಾಯಕ ಅಮಿತ್ ಶಾ ಅವರು ಹೇಳಿರುವುದು ಸರಿಯಾಗಿದೆ. ಆದರೆ ಬಿಜೆಪಿ ಯಾವುದೇ ಒಬ್ಬ ನಾಯಕತ್ವ, ಒಬ್ಬ ಸಿಎಂ ಜೊತೆ ಚುನಾವಣೆಗೆ ಹೋಗಿಲ್ಲ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ಹೋಗಿದ್ದೇವೆ. ಅದೇ ಮುಂದುವರೆಯಲಿದೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *