Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಇಂದು ಸಂಜೆ ಆಕಾಶದಲ್ಲಿ ಮೂಡಲಿದೆ ವಿಸ್ಮಯ: ತಪ್ಪದೇ ವಿಕ್ಷಿಸಿ 

---Advertisement---

ಫೆಬ್ರುವರಿ 28, ಬಾನಂಗಳದಲ್ಲಿ ಅದ್ಭುತವೊಂದು ನಡೆಯಲಿದೆ. ಇಂದು ಸಾಯಂಕಾಲ ಆಕಾಶದಲ್ಲಿ ಮತ್ತೊಂದು ಅಪರೂಪದ ಮಹಾ ಅದ್ಭುತ ಅನಾವರಣಗೊಳ್ಳಲಿದೆ. ಇಂದು ಎಲ್ಲಾ ಗ್ರಹಗಳು ಆಕಾಶದಲ್ಲಿ ಒಟ್ಟಿಗೆ ಗೋಚರಿಸುತ್ತವೆ. 2040 ರವರೆಗೆ ಮತ್ತೆ ನಿರೀಕ್ಷಿಸಲಾಗದ ಅಪರೂಪದ ಆಕಾಶ ಘಟನೆ ಇದಾಗಿದೆ. ಬುಧ, ಶುಕ್ರ, ಗುರು, ಶನಿ ಮತ್ತು ಮಸುಕಾದ ಹೊರಗಿನ ಗ್ರಹಗಳು ಪಶ್ಚಿಮ ದಿಗಂತದಲ್ಲಿ ಇಂದು ಕಾಣಿಸಿಕೊಳ್ಳಲಿವೆ.

ಸೌರಮಂಡಲದ ಆರು ಪ್ರಮುಖ ಗ್ರಹಗಳು ಒಂದೇ ಸಾಲಿನಲ್ಲಿ ಬರುವ ‘ಪ್ಲಾನೆಟರಿ ಪರೇಡ್’ ಇಂದು ನಡೆಯಲಿದೆ.
ಖಗೋಳ ವಿಜ್ಞಾನಿಗಳ ಪ್ರಕಾರ, ಹೀಗೆ ಆರು ಗ್ರಹಗಳು ಒಂದೇ ಸರಳರೇಖೆಯಲ್ಲಿ ಕಾಣಿಸಿಕೊಳ್ಳುವುದು ಅತ್ಯಂತ ಅಪರೂಪದ ಘಟನೆ. ಈ ದೃಶ್ಯವು ಆಕಾಶದಲ್ಲಿ ಒಂದು ಸುಂದರ ಮೆರವಣಿಗೆಯಂತೆ ಕಾಣಿಸಲಿದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.

ಈ ಪ್ಲಾನೆಟರಿ ಪರೇಡ್‌ನಲ್ಲಿ ಗುರು (Jupiter), ಶುಕ್ರ (Venus), ಬುಧ (Mercury), ಶನಿ (Saturn), ಯುರೇನಸ್ ಮತ್ತು ನೆಪ್ಚೂನ್ ಗ್ರಹಗಳು ಪಾಲ್ಗೊಳ್ಳಲಿವೆ. ಈ ಆರು ಗ್ರಹಗಳು ಸೂರ್ಯನ ಸುತ್ತ ತಮ್ಮ ಕಕ್ಷೆಗಳಲ್ಲಿ ತಿರುಗುತ್ತಾ, ಭೂಮಿಯಿಂದ ನೋಡಿದಾಗ ಒಂದೇ ಸಮತಲಕ್ಕೆ ಬರುತ್ತವೆ.

ಸೂರ್ಯಾಸ್ತದ ತಕ್ಷಣವೇ, ಅಂದರೆ ಸಾಯಂಕಾಲ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಈ ಅದ್ಭುತವನ್ನು ಸ್ಪಷ್ಟವಾಗಿ ನೋಡಬಹುದು.ನೇರವಾಗಿ ಕಣ್ಣುಗಳಿಂದ ನೋಡಬಹುದು.ಆದರೆಯುರೇನಸ್ ಮತ್ತು ನೆಪ್ಚೂನ್ ಗ್ರಹಗಳು ಭೂಮಿಯಿಂದ ಬಹಳ ದೂರ ಇರುವುದರಿಂದ, ಅವುಗಳನ್ನು ವೀಕ್ಷಿಸಲು ಬೈನಾಕ್ಯುಲರ್ ಅಥವಾ ಟೆಲಿಸ್ಕೋಪ್ ಅತ್ಯಗತ್ಯ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now