Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ದಾವಣಗೆರೆ ಮೂಲದ ದಂಪತಿ ಅಮೆರಿಕಾದಲ್ಲಿ ಸಾವು : ಕಾರಣ ಏನು..? ಡಿಸಿ ಹೇಳಿದ್ದು ಹೀಗೆ..!

Facebook
Twitter
Telegram
WhatsApp

 

ದಾವಣಗೆರೆ ಮೂಲದ ಯೋಗೀಶ್, ಪ್ರತಿಭಾ, ಯಶ್ ಎನ್ನುವವರು ಅಮೆರಿಕಾದ ನ್ಯೂಯಾರ್ಕ್ ಬಳಿ ನಿಧನರಾಗಿದ್ದಾರೆ. ಮೂಲಗಳ ಪ್ರಕಾರ ಅವರ ಪತಿ ಯೋಗೀಶ್, ಮೊದಲು ಹೆಂಡತಿ ಮತ್ತು ಮಗನಿಗೆ ಗುಂಡು ಹಾರಿಸಿ, ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕಳೆದ ಹತ್ತು ವರ್ಷದಿಂದ ಈ ಕುಟುಂಬ ಅಮೆರಿಕಾದಲ್ಲಿ ವಾಸವಾಗಿದೆ. ಈ ಸಂಬಂಧ ದಾವಣಗೆರೆ ಡಿಸಿ ಪ್ರತಿಕ್ರಿಯೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಮಾತನಾಡಿ, ಅಮೆರಿಕಾದ ಕನ್ಸಲ್ ಜನರಲ್ ಮಂಜುನಾಥ್, ಡೆಪ್ಯೂಟ್ ಕನ್ಸಲ್ ಜನರಲ್ ವರುಣ್ ಅವರನ್ನು ಈಗಾಗಲೇ ಆನ್ಲೈನ್ ಮೂಲಕ ಸಂಪರ್ಕ ಮಾಡಿದ್ದೇವೆ. ಅವರ ಬಳಿ ಸಾವಿನ ಬಗ್ಗೆ ವಿವರಣೆ ಕೇಳಲಾಗಿದೆ. ಮೃತದೇಹಗಳನ್ನು ದಾವಣಗೆರೆಗೂ ಶಿಫ್ಟ್ ಮಾಡುವುದಕ್ಕೆ ಚರ್ಚೆ ನಡೀತಾ ಇದೆ. ಈ ಕೇಸ್ ಸಂಬಂಧ ಈಗಾಗಲೇ ತನಿಖೆ ನಡೀತಾ ಇದೆ. ಮೃತರ ಸಂಬಂಧಿಕರು ಕೂಡ ಅಲ್ಲಿ ಇದ್ದಾರೆ. ಎಲ್ಲಾ ಪ್ರಕ್ರಿಯೆ ಮುಗಿಸಿ, ಮೃತದೇಹಗಳನ್ನು ತರಬೇಕಾ ಅಥವಾ ಅಲ್ಲಿಯೇ ವಿಸರ್ಜನೆ ಮಾಡಬೇಕಾ ಎಂಬ ಬಗ್ಗೆ ನಿರ್ಧಾರ ಮಾಡ್ತಾ ಇದ್ದೇವೆ.

ನಮ್ಮ ಜಿಲ್ಲಾಡಳಿತ ಪ್ರತಿ ಎರಡು ಗಂಟೆಗೊಮ್ಮೆ ಅಲ್ಲಿನ ಸಂಪರ್ಕ ಮಾಡ್ತಾ ಇದ್ದೇವೆ‌. ಅಲ್ಲಿನ ನಿಯಮಗಳನ್ನು ಫಾಲೋ ಮಾಡಬೇಕಾಗಿರುವ ಕಾರಣ ಸಮಯಾವಕಾಶ ಬೇಕಾಗಿದೆ. ಕುಟುಂಬಸ್ಥರು ಶೂಟ್ ಮಾಡಿಕೊಂಡು ಸಾವನ್ನಪ್ಪಿದ್ದಾರೆ ಎಂದಿದ್ದಾರೆ. ಆದ್ರೆ ಅಮೆರಿಕಾದ ಅಧಿಕಾರಿಗಳು ಅಸ್ವಾಭಾವಿಕ ಸಾವು ಅಂತಷ್ಟೇ ತಿಳಿಸಿದ್ದಾರೆ. ತನಿಖೆಯಾದ ಬಳಿಕ ಎಲ್ಲಾ ಸತ್ಯ ಹೊರ ಬರಲಿದೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮೋದಿ ನನ್ನ ಹೃದಯದಲ್ಲಿದ್ದಾರೆ, ಫೋಟೋ ಬಳಕೆಗೆ ಅನುಮತಿ ಸಿಕ್ಕಿದೆ : ಕೆ. ಎಸ್. ಈಶ್ವರಪ್ಪ

    ಶಿವಮೊಗ್ಗ: ಬಿಜೆಪಿಯಿಂದ ಟಿಕೆಟ್ ಸಿಗದ ಹಿನ್ನೆಲೆ ಬಂಡಾಯವೆದ್ದು, ಪಕ್ಷೇತರ ಅಭ್ಯರ್ಥಿಯಾಗಿ ಕೆ ಎಸ್ ಈಶ್ವರಪ್ಪ ಶಿವಮೊಗ್ಗ ಅಖಾಡದಲ್ಲಿ ನಿಂತಿದ್ದಾರೆ. ಆರಂಭದಿಂದಲೂ ಪ್ರಧಾನಿ ಮೋದಿಯವರ ಫೋಟೋವನ್ನೇ ಬಳಕೆ ಮಾಡಿಕೊಳ್ಳುತ್ತಿದ್ದರು. ಆದರೆ ಬಿಜೆಪಿ ನಾಯಕರು

ಹೊರಗೆ ಬಾರದಂತೆ ಮೈಸೂರಿಗರಿಗೆ ಹವಮಾನ ಇಲಾಖೆಯಿಂದ ಎಚ್ಚರಿಕೆ : ಆರೆಂಜ್ ಅಲರ್ಟ್ ಘೋಷಣೆ

ಮೈಸೂರು: ಬೆಳಗಿನ ಜಾವವೇ ಬಿಸಿಲಿನ ತಾಪ ಜೋರಾಗಿರುತ್ತೆ. ಮೇ ಸಮಯಕ್ಕೆ ಅದಾಗಲೇ ಭೂಮಿ ತಂಪಾಗಬೇಕಿತ್ತು. ಆದರೆ ಧಗೆ ಎಷ್ಟಿದೆ ಅಂದ್ರೆ ಹೊರಗೆ ಬರೋದಕ್ಕೆ ಸಾಧ್ಯವಾಗುತ್ತಿಲ್ಲ. ದಾಹವೂ ಹೆಚ್ಚಾಗಿದೆ. ಪಾನೀಯಗಳ ಬೆಲೆಯೂ ಗಗನಕ್ಕೇರುತ್ತಿದೆ. ಅದರಲ್ಲೂ ಕೆಲವು

ಮೇ 8 ರಂದು ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ..?

ಬೆಂಗಳೂರು: ಈಗಾಗಲೇ ರಾಜ್ಯದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಬಂದಿದೆ. ಭವಿಷ್ಯದ ಮುಖ್ಯ ಘಟ್ಟದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯು ಒಂದು. ಈಗಾಗಲೇ ಪರೀಕ್ಷೆ ಬರೆದ 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಕರ್ನಾಟಕ ಪ್ರೌಢ

error: Content is protected !!