Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಂಘ ಶತಾಬ್ದಿ : ಮೊಳಕಾಲ್ಮೂರಿನಲ್ಲಿ ಆಕರ್ಷಕ ಆರ್‌ಎಸ್‌ಎಸ್‌ ಪಥಸಂಚಲನ

---Advertisement---

 

ವರದಿ ಮತ್ತು ಫೋಟೋ ಕೃಪೆ
ಹೆಚ್. ಮಹಾಂತೇಶ್, ರಾಯಾಪುರ, ಮೊಳಕಾಲ್ಮೂರು.
ಮೊ : 93806 27082

ಸುದ್ದಿಒನ್, ಮೊಳಕಾಲ್ಮುರು, ಅಕ್ಟೋಬರ್. 19 : ರಾಷ್ಟಿಯ ಸ್ವಯಂ ಸೇವಕಸಂಘವು (ಆರ್‌ಎಸ್‌ಎಸ್‌) ನೂರು ವರ್ಷಗಳು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಭಾನುವಾರ ವಿಜಯ ದಶಮಿ ಪಥಸಂಚಲನ ನಡೆಯಿತು.

ಬಿಳಿ ಶರ್ಟ್, ಕಪ್ಪು ಕ್ಯಾಪ್, ಖಾಕಿ ಪ್ಯಾಂಟ್ ಧರಿಸಿದ ಸಂಘದ 450ಕ್ಕೂ ಹೆಚ್ಚು ಸ್ವಯಂಸೇವಕರು ಶಿಸ್ತುಬದ್ದವಾಗಿ ಪಥಸಂಚಲನದಲ್ಲಿ ಭಾಗಿಯಾದರು.

ಪಟ್ಟಣದ ಕೋಟೆ ಬಡಾವಣೆಯ ನುಂಕಪ್ಪನಕಟ್ಟೆ ಬಳಿ ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸಿ ಪಥಸಂಚಲನಕ್ಕೆ ಚಾಲನೆ ನೀಡಲಾಯಿತು.

ಆಕರ್ಷಕ ಪಥಸಂಚಲನವು ಶ್ರೀ ಮಾರ್ಕಂಡಯ್ಯ ಸ್ವಾಮಿ ದೇವಸ್ಥಾನದ ರಸ್ತೆಯಿಂದ ಸಾಗಿ ದೊಡ್ಡಪೇಟೆ ರಸ್ತೆ,ದೊಡ್ಡಪೇಟೆ ಸರ್ಕಲ್,ಎಲ್ ಬಿ ಶಾಸ್ತ್ರಿ ರಸ್ತೆ ಮುಖ್ಯರಸ್ತೆ,ಕೋನಸಾಗರ ರಸ್ತೆ ದಾಸರಹಟ್ಟಿ, ಕೆಇಬಿ ಸರ್ಕಲ್, ಎಸ್ ಬಿ ಐ ರಸ್ತೆ, ತಿಮ್ಮಪ್ಪ ದೇವಸ್ಥಾನ ರಸ್ತೆ,ಬನ್ನಿ ಮಹಂಕಾಳಿ ದೇವಸ್ಥಾನ ರಸ್ತೆ, ಮಾರುತಿ ಬಡಾವಣೆ ರಸ್ತೆ, ಮತ್ತು ಪಟ್ಟಣ ಪಂಚಾಯಿತಿ ಮುಂಭಾಗದ ರಸ್ತೆ ಮೂಲಕ ಸಾಗಿ ನುಂಕಪ್ಪನ ಕಟ್ಟೆ ಬಳಿ ಪುನರ್ ಸಮಾವೇಶಗೊಂಡಿತು.

ಪಥಸಂಚಲನ ನಡೆಯುವ ದಾರಿಯುದ್ದಕ್ಕೂ ಪೊಲೀಸರು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಂಡಿದ್ದರು.

ಪಥಸಂಚಲನವು ರಾಷ್ಟ್ರಪ್ರೇಮ ಮತ್ತು ಶಿಸ್ತಿನ ಪ್ರದರ್ಶನವಾಗಿದ್ದು, ಸಂಘಟನೆಯ ಬಲ ಹಾಗೂ ಏಕತೆ ತೋರಿಸುವುದಾಗಿದೆ. ಸಮಾಜದಲ್ಲಿ ಶ್ರೇಷ್ಠ ನಡತೆ, ಸೇವಾಭಾವ ಮತ್ತು ಶಿಸ್ತು ಬೆಳೆಸುವುದು. ಯುವಕರಲ್ಲಿ ದೇಶಭಕ್ತಿ ಹಾಗೂ ಸೇವಾ ಮನೋಭಾವ ಜಾಗೃತಗೊಳಿಸುವ ಭಾಗವಾಗಿ ಪಥಸಂಚಲನವು ನಡೆಯಿತು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...