Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಿದ್ಧಾರ್ಥ್ ಟ್ವೀಟ್ ಗೆ ವಿರೋಧ : ಸೈನಾ ಬಳಿ ಕ್ಷಮೆ ಕೇಳಿದ ನಟ..!

Facebook
Twitter
Telegram
WhatsApp

 

ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಇತ್ತೀಚೆಗೆ ಒಂದು ಪೋಸ್ಟ್ ಹಾಕಿದ್ದರು. ಅದು ಪಂಜಾಬ್ ನಲ್ಲಿ ಪ್ರಧಾನಿ ಮೋದಿಗೆ ಉಂಟಾದ ಭದ್ರತೆಯ ಕೊರತೆ ಬಗ್ಗೆ. ಯಾವುದೇ ರಾಷ್ಟ್ರದಲ್ಲಿಯೇ ಆಗಲಿ ಪ್ರಧಾನಿಗೆ ಭದ್ರತೆ ಸಿಗದೇ ಹೋದಲ್ಲಿ ಆ ದೇಶದಲ್ಲಿ ನಾವೂ ಸುರಕ್ಷಿತವಾಗಿದ್ದೇವೆ ಎಂದು ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಅಜಾಗರೂಕತೆಯನ್ನ ನಾನು ಪ್ರಬಲವಾಗಿ ಖಂಡಿಸುತ್ತೇನೆ ಎಂದು ಪೋಸ್ಟ್ ಹಾಕಿದ್ದರು.

ಇದನ್ನ ವಿರೋಧಿಸುವ ಭರದಲ್ಲಿ ತಮಿಳು ನಟ ಸಿದ್ಧಾರ್ಥ್, ಮುಜುಗರಕ್ಕೀಡು ಮಾಡುವಂತ ಪ್ರತಿಕ್ರಿಯೆ ನೀಡಿದ್ದರು. ಆ ಪದಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ದೇಶವನ್ನ ಪ್ರತಿನಿಧಿಸುವ ಆಟಗಾರ್ತಿ ಬಗ್ಗೆ ಈ ರೀತಿ ಕಮೆಂಟ್ ಯಾರು ಒಪ್ಪಲಿಲ್ಲ. ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಇದೀಗ ನಟ ಸಿದ್ದಾರ್ಥ್ ಕ್ಷಮೆಯಾಚಿಸಿದ್ದಾರೆ.

ಡಿಯರ್ ಸೈನಾ.. ಕೆಲ ದಿನಗಳ ಹಿಂದೆ ನಿಮ್ಮ ಟ್ವೀಟ್ ಗೆ ಕೆಟ್ಟ ಪ್ರತಿಕ್ರಿಯೆ ನೀಡಿದ್ದೆ. ನಿಮ್ಮ ಹಲವು ವಿಚಾರಗಳನ್ನು ನಾನು ವಿರೋಧಿಸಬಹುದು. ಆದರೆ ನನ್ನ ವಿರೋಧ ಹಾಗೂ ನಾನು ಬಳಸಿದ ಕೆಟ್ಟ ಪದಗಳನ್ನ ನಾನು ಕೂಡ ಸಮರ್ಥಿಸಿಕೊಳ್ಳಲ್ಲ. ಒಂದು ಜೋಕ್ ಅನ್ನ ವಿವರಿಸಬೇಕಾದ ಸಂದರ್ಭ ಬರುತ್ತೆ ಅಂದ್ರೆ ಅದು ಒಳ್ಳೆಯ ಸಂದರ್ಭವಲ್ಲ. ಅದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ. ನೀವೂ ನನ್ನ ಕ್ಷಮೆಯನ್ನು ಸ್ವೀಕರಿಸುತ್ತೀರಿ ಎಂದು ಭಾವಿಸುತ್ತೇನೆಂದು ಟ್ವೀಟ್ ಮಾಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಬ್ರಹ್ಮಶ್ರಿ ನಾರಾಯಣ ಗುರುಗಳ 170 ನೇ ಜಯಂತಿ ಆಚರಣೆ : ಸಚಿವ ಸುಧಾಕರ್ ಸೇರಿದಂತೆ ಗಣ್ಯರು ಭಾಗಿ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 20 : ಹಿಂದಿನಿಂದಲೂ ಈಡಿಗರ ಸಮುದಾಯದ ಜೊತೆ ನಮ್ಮ ಕುಟುಂಬ ಉತ್ತಮ ಬಾಂಧವ್ಯವಿಟ್ಟುಕೊಂಡಿದೆ. ನನ್ನ

ಚಿತ್ರದುರ್ಗ | ಒನಕೆ ಓಬವ್ವ ಜಯಂತಿ ಅದ್ದೂರಿ ಆಚರಣೆಗೆ ಸಿದ್ದತೆ : ಪೂರ್ವಭಾವಿ ಸಭೆಯಲ್ಲಿ ಮುಖಂಡರು ಭಾಗಿ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 20 : ಮುಂದಿನ ತಿಂಗಳು ನಡೆಯುವ ಒನಕೆ ಓಬವ್ವ ಜಯಂತಿಯನ್ನು ಅದ್ದೂರಿಯಾಗಿ ಆಚರಿಸುವ ಸಂಬಂಧ

ಸುದೀಪ್ ಅವರ ತಾಯಿ ನಿಧನ : ಲಾಯರ್ ಜಗದೀಶ್ ಸುದ್ದಿಗೋಷ್ಟಿ ದಿಢೀರ್ ರದ್ದು..!

ಬೆಂಗಳೂರು: ಲಾಯರ್ ಜಗದೀಶ್ ಬಿಗ್ ಬಾಸ್ ಮನೆಯಲ್ಲಿ ಒಂದಷ್ಟು ಜಗಳನ್ನು ಮಾಡಿಕೊಂಡು ಹೊರಗೆ ಬಂದರು. ಮತ್ತೆ ಬಿಗ್ ಬಾಸ್ ಮನೆಯೊಳಗೆ ಹೋಗುತ್ತಾರೆ ಎಂಬ ಮಾತಿದೆ‌. ಆದರೆ ಇದರ ನಡುವೆ ನಿನ್ನೆ ಮಧ್ಯರಾತ್ರಿ ಅಂದ್ರೆ ಶನಿವಾರ

error: Content is protected !!