ಬೆಂಗಳೂರು: ಜಾತಿ ಗಣತಿ ಸಮೀಕ್ಷೆ ವಿಚಾರ ಸಾಕಷ್ಟು ಚರ್ಚೆಯಲ್ಲಿರುವಾಗಲೇ ಆದಿ ಚುಂಚನಗಿರಿ ಸ್ವಾಮೀಜಿ ನಿರ್ಮಲಾನಂದನಾಥಶ್ರೀಗಳು ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ. ಇಂದು ನಡೆದ ಒಕ್ಕಲಿಗರ ಸಭೆಯ ಬಳಿಕ ಈ ಸಂಬಂಧ ಮಾತನಾಡಿ, 45 ದಿನಗಳ ಕಾಲ ಮುಂದೂಡುವಂತೆ ಸೂಚಿಸಿದ್ದಾರೆ.
ರಾಜ್ಯ ಸರ್ಕಾರದ ಸಮೀಕ್ಷೆಯ ನಿರ್ಧಾರವನ್ನು ನಾವೂ ಸ್ವಾಗತಿಸುತ್ತೇವೆ. 15 ದಿನಗಳಲ್ಲಿ 9 ದಿನ ಎಲ್ಲರೂ ನವರಾತ್ರಿ ಆಚರಣೆಯಲ್ಲಿ ಭಾಗಿಯಾಗುತ್ತಾರೆ. ನವರಾತ್ರಿಯ ಸಂಭ್ರಮದಲ್ಲಿ ಸಮೀಕ್ಷೆ ಮಾಡಲು ಹೊರಟರೆ ಪೂರ್ಣ ಫಲಿತಾಂಶ ಸಿಗಲು ಸಾಧ್ಯವಿಲ್ಲ. ಹೆಚ್ಚಿನವರು ಈ ರಜೆಯ ಸಂದರ್ಭದಲ್ಲಿ ಪ್ರವಾಸ ಹೋಗುತ್ತಾರೆ. ಈ ಹಿಂದಿನ ರೀತಿ ಆದರೆ ಸಮೀಕ್ಷೆ ಮತ್ತೊಂದು ಮಜಲಿಗೆ ಹೋಗಬಹುದು. ಹೀಗಾಗಿ ಸಮೀಕ್ಷೆಯನ್ನು 45 ದಿನಗಳ ಕಾಲ ಮುಂದೂಡಬೇಕು. 60 ದಿನಗಳ ಕಾಲ ಸಮೀಕ್ಷೆ ನಡೆಸಬೇಕು. ಪ್ರಜ್ಞಾವಂತ ಸರ್ಕಾತ ಇದನ್ನು ಪರಿಗಣಿಸಿ ಸಮೀಕ್ಷೆ ಮುಂದೂಡಬೇಕು. ಸಮುದಾಯದ 90%ಕ್ಕಿಂತ ಹೆಚ್ಚು ಜನರು ತಮ್ಮ ಉಪಜಾತಿಯನ್ನು ಬರೆಸಲು ಸಿದ್ಧರಿಲ್ಲ. ಉಪ ಪಂಗಡಗಳ ಅವಶ್ಯಕತೆಯನ್ನು ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗಷ್ಟೇ ಬಳಸಿಕೊಳ್ಳತ್ತೇವೆ.
ಸಮೀಕ್ಷೆ ಮುಂದೂಡಬೇಕು ಎಂಬುದು ನಮ್ಮ ನಿಲುವು ಮತ್ತು ಆಸೆ. ಇದರ ಮಧ್ಯೆ ಕೆಲಸ ಮಾಡಬೇಕಾದವರು ಸಮುದಾಯದ ನಾಯಕರು. ನಾವೂ ಅವರಿಗೆ ಏನು ನಿರ್ದೇಶನ ಕೊಟ್ಟಿದ್ದೇವೆ ಎಂಬುದು ಮುಂದೆ ಕ್ರಮದಲ್ಲಿ ಗೊತ್ತಾಗುತ್ತದೆ. ಸಮುದಾಯದ ಜೊತೆಗೆ ಧರ್ಮವನ್ನು ಸೇರಿಸಿರುವುದು ಸರಿಯಲ್ಲ ಎಂಬುದು ಸರ್ಕಾರದ ಗಮನಕ್ಕೆ ಬಂದು ಸರಿಪಡಿಸುತ್ತದೆ ಎಂಬ ಮಾಹಿತಿ ಇದೆ. ಹೀಗೇ ಆದರೆ ಮುಂದೆ ಒಕ್ಕಲಿಗ ಮುಸ್ಲಿಂ, ಹಿಂದು ಮುಸ್ಲಿಂ, ಹಿಂದೂ ಕ್ರಿಶ್ಚಿಯನ್ ಎಂದು ಆಗಬಹುದೇನೋ. ಪ್ರಜಾಪ್ರಭುತ್ವದಲ್ಲಿ ನಾಸ್ತಿಕ, ಆಸ್ತಿಕ ಎಂದು ಹೇಗೆ ಬೇಕಾದರೂ ಹೇಳಿಕೊಳ್ಳಬಹುದು ಎಂದಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











