ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಪರದಾಟ : ಕೊಠಡಿಯಿಂದ ಕೂಡ ಹೊರಗೆ ಬರುವಂತಿಲ್ಲ..!

1 Min Read

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಒಂದು ಸಾರಿ ಜೈಲಿಗೆ ಹೋಗಿ ಬಂದಿದ್ದ‌ನಟ ದರ್ಶನ್, ಇನ್ಮೇಲೆ ರಿಲ್ಯಾಕ್ಸ್ ಅಂತ ಅಂದುಕೊಂಡಿದ್ದರು. ಆದರೆ ಈಗ ಮತ್ತೆ ಜೈಲು ಸೇರುವ ಪರಿಸ್ಥಿತಿಯೇ ಬಂದೊದಗಿದೆ. ಜಾಮೀನು ರದ್ದಾದ ಹಿನ್ನೆಲೆ ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್ ಗೆ ಸಾಕಷ್ಟು ಸಂಕಷ್ಟ ಎದುರಾಗಿದೆ. ಯಾಕಂದ್ರೆ ದರ್ಶನ್ ಅವರಿಗೆ ಅವರಿರುವ ಕೊಠಡಿಯಿಂದ ಹೊರಗೆ ಬರುವುದಕ್ಕೇನೆ ಬಿಡ್ತಾ ಇಲ್ಲ ಎಂಬುದೇ ಈಗಿನ ಟೆನ್ಶನ್.

ಕಳೆದ ಬಾರಿ ಇದೇ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್, ಅಲ್ಲಿ ಪರಿಚಯದವರ ಜೊತೆಗೂಡಿ ಸಿಗರೇಟ್ ಸೇದುತ್ತಾ, ಹರಟೆ ಹೊಡೆಯುತ್ತಾ ಕೂತ ಫೋಟೋ ವೈರಲ್ ಆಗಿತ್ತು. ಹೀಗಾಗಿಯೇ ಈಗಿರುವ ಕೊಠಡಿಯಿಂದ ಹೊರಗೆ ಬರುವುದಕ್ಕೂ ಅನುಮತಿ ನೀಡಿಲ್ಲ. ಜೈಲಿನ ಸಿಬ್ಬಂದಿ ದರ್ಶನ್ ಮೇಲೆ ಹದ್ದಿನ ಕಣ್ಣು ಇಟ್ಟಿದ್ದಾರೆ. ಕೊಠಡಿಯೊಳಗೆ ವಾಕಿಂಗ್, ಟಾಕಿಂಗ್ ಎಲ್ಲವು ಆಗಿದೆ.

ದರ್ಶನ್ ಕಾವಾಲಿಗಾಗಿ ಇಟ್ಟಿರುವ ಸಿಬ್ಬಂದಿಯ ಬಳಿ ಇರುವ ಕ್ಯಾಮೆರಾವನ್ನು ಜೈಲು ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. ಇದರಲ್ಲಿ ದರ್ಶನ್ ಕೊಠಡಿಯಲ್ಲಿ ವಾಕಿಂಗ್ ಮಾಡುವುದಿ, ಮಲಗುವುದಷ್ಟೇ ಕಾಣಿಸುತ್ತಿದ್ದು, ಬೇರೆ ಯಾವುದೇ ಬೆಳವಣಿಗೆ ಇಲ್ಲ. ಇನ್ನು ದರ್ಶನ್ ಅವರನ್ನು ನೋಡುವುದಕ್ಕೆ ಇಂದು ಅವರ ಪತ್ನಿ ವಿಜಯಲಕ್ಷ್ಮೀ ಜೈಲಿಗೆ ಬಂದಿದ್ದು, ಅವರಿಗೆ ಬೇಕಾದ ವಸ್ತುಗಳ ಬ್ಯಾಗ್ ಅನ್ನು ತಂದಿದ್ದರು. ದರ್ಶನ್ ಅವರನ್ನು ನೋಡಿ, ಧೈರ್ಯ ತುಂಬಿ ಹೋಗಿದ್ದಾರೆ. ಇದರ ನಡುವೆ ದರ್ಶನ್ ಕುಟುಂಬಕ್ಕೆ ಮತ್ತೊಂದು ಆಘಾತವೆಂದರೆ ಬಳ್ಳಾರಿ ಜೈಲಿಗೆ ಶಿಫ್ಟ್ ಆಗುವ ಆತಂಕ ಕಾಡುತ್ತಿದೆ. ಕಳೆದ ಬಾರಿ ಯಾವ್ಯಾವ ಆರೋಪಿಗಳು ಎಲ್ಲೆಲ್ಲಿ ಇದ್ದರೋ ಅದೇ ಜೈಲಿಗೆ ಕಳುಹಿಸುವಂತೆ ಮನವಿ ಮಾಡುವ ಸಾಧ್ಯತೆ ಇದೆ.

Share This Article
Leave a Comment

Leave a Reply

Your email address will not be published. Required fields are marked *