ಬೆಂಗಳೂರು: ಒಳಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ನಾಗಮೋಹನ್ ದಾಸ್ ವರದಿಯನ್ನ ಸಲ್ಲಿಕೆ ಮಾಡಿದ್ದರು. ಈ ವರದಿ ಇಂದು ಜಾರಿಯಾಗುತ್ತೆ ಅಂತಾನೇ ಎಲ್ಲರು ಭಾವಿಸಿದ್ದರು. ಆದರೆ ಅದಾಗಿಲ್ಲ. ಮತ್ತೆ ವರದಿ ಜಾರಿ ಮುಂದೂಡಿಕೆಯಾಗಿದೆ. ಒಳ ಮೀಸಲಾತಿಯಲ್ಲಿ ನಾವೆಲ್ಲಾ ಒಗ್ಗಟ್ಟಾಗಿರಬೇಕು ಎಂದು ಸಚಿವರು, ಶಾಸಕರು ಒಗ್ಗಟ್ಟಾಗಿದ್ದರು. ಆದರೆ ಅವರಲ್ಲಿಯೇ ಮೂಡದ ಒಮ್ಮತ, ಅವರಲ್ಲಿರುವ ಒಂದಷ್ಟು ಭಿನ್ನಾಭಿಪ್ರಾಯಗಳಿಂದ ವರದಿ ಜಾರಿ ಮುಂದಕ್ಕೆ ಹೋಗಿದೆ.
ಮುಂದಿನ ಅಚಿವ ಸಂಪುಟದಲ್ಲಿ ಒಳ ಮೀಸಲಾತಿ ಜಾರಿ ಕುರಿತು ಮುಂದಿನ ಸಚಿವ ಸಂಪುಟದಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ. ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯಲ್ಲಿ ಒಟ್ಟು 17% ಮೀಸಲಾತಿಯನ್ನ ಐದು ವರ್ಗಗಳಾಗಿ ವಿಂಗಡಣೆ ಮಾಡಿ ಶಿಫಾರಸು ಮಾಡಲಾಗಿತ್ತು. ಪ್ರವರ್ಗ -ಎಯಿಂದ ಪ್ರವರ್ಗ ಇ ವರೆಗೂ ಒಳ ಮೀಸಲಾತಿ ಹಂಚಿಕೆ ಮಾಡಲಾಗಿತ್ತು. ಪ್ರವರ್ಗ ಎ 1% ಒಳ ಮೀಸಲಾತಿ, ಪ್ರವರ್ಗ ಬಿ 6% ಒಳ ಮೀಸಲಾತಿ, ಪ್ರವರ್ಗ ಸಿ 5%, ಪ್ರವರ್ಗ ಡಿ 4% ಒಳ ಮೀಸಲಾತಿ, ಪ್ರವರ್ಗ ಇ 1% ಒಳ ಮೀಸಲಾತಿ, ಪರಿಶಿಷ್ಟ ಎಡ ಸಮುದಾಯಕ್ಕೆ 6% ಒಳ ಮೀಸಲಾತಿ, ಪರಿಶಿಷ್ಟ ಬಲ ಸಮುದಾಯಕ್ಕೆ 5% ಒಳ ಮೀಸಲಾತಿ ಸೇರಿದಂತೆ ಒಟ್ಟು 17% ಮೀಸಲಾತಿ ಪ್ರಮಾಣವನ್ನು ಹಂಚಿಕೆ ಮಾಡಲಾಗಿದೆ.
ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗದಿಂದ ಜಾತಿ ಜನಗಣತಿ ನಡೆಸುವ ವಿಚಾರವಾಗಿ ಸಮೀಕ್ಷೆಯನ್ನು ಡಿಜಿಟಲ್ ವಿಧಾನದಲ್ಲಿ ಕೈಗೊಳ್ಳಲು ಸರ್ಕಾರ ಸಲಹೆ ನೀಡಿದ್ದು, ಸಮೀಕ್ಷೆಯನ್ನು ಡಿಜಿಟಲ್ ವಿಧಾನದಲ್ಲಿ ಮಾಡಲು ತಂತ್ರಾಂಶದ ಅಭಿವೃದ್ಧಿ ಹಾಗೂ ಉಸ್ತುವಾರಿಯನ್ನು ಇ-ಆಡಳಿತ ಇಲಾಖೆ ಮೂಲಕ ಕೈಗೊಳ್ಳಲು ಸಲಹೆ ನೀಡಿದೆ.






