ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, 23 : ಸರ್ಕಾರಿ ಹಾಗೂ ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ಕಾರ್ಯಭಾರ ಕೊರತೆಯಿಂದ ಬೇರೆ ಕಾಲೇಜುಗಳಿಗೆ ನಿಯೋಜನೆಗೊಂಡಿರುವ ಉಪನ್ಯಾಸಕರುಗಳನ್ನು ಕರ್ತವ್ಯಕ್ಕೆ ಹಾಜರಾಗಲು ಸೂಚಿಸುವಂತೆ ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ನಿಂದ ಸೋಮವಾರ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಮಕ್ಕಳೆ ಜಿಲ್ಲೆಯಲ್ಲಿ ಹೆಚ್ಚಾಗಿ ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ ಸಾಲಿನಲ್ಲಿ ಫಲಿತಾಂಶ ರಾಜ್ಯದಲ್ಲಿ ಕೆಳಗಿನಿಂದ ಆರನೆ ಸ್ಥಾನದಲ್ಲಿರುವುದನ್ನು ನೋಡಿದರೆ ಜಿಲ್ಲೆಯಲ್ಲಿ ಶೈಕ್ಷಣಿಕ ಫಲಿತಾಂಶ ಕಳೆಪೆಯಾಗಿದೆ. ಜಿಲ್ಲೆಯ ಸರ್ಕಾರಿ ಹಾಗೂ ಅನುದಾನಿತ ಬಹುತೇಕ ಕಾಲೇಜುಗಳಲ್ಲಿ ಅಗತ್ಯವಿರುವಷ್ಟು ಪೂರ್ಣ ಪ್ರಮಾಣದ ಉಪನ್ಯಾಸಕರುಗಳಿಲ್ಲ. ಲಭ್ಯವಿರುವ ಉಪನ್ಯಾಸಕರುಗಳಿಗೆ ಸರ್ಕಾರಿ ನಿಗಧಿಪಡಿಸಿರುವಂತೆ ಒಬ್ಬ ಉಪನ್ಯಾಸಕನಿಗೆ 20 ಗಂಟೆಗಳ ಕಾರ್ಯಭಾರವಿಲ್ಲದೆ ಕೇವಲ ಹತ್ತು ಗಂಟೆಗಳ ಕಾಲ ಪಾಠ ಮಾಡಬೇಕಾಗಿರುತ್ತದೆ. ಆದರೆ ಕಾರ್ಯಭಾರವಿರುವ ಕಾಲೇಜುಗಳಿಗೆ ನಿಯೋಜನೆಗೊಳಿಸಿ ಸರಿದೂಗಿಸುವಂತೆ ಸರ್ಕಾರ ಆದೇಶಿಸಿ ತಪ್ಪಿದಲ್ಲಿ ವೇತನ ಸ್ಥಗಿತಗೊಳಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಿದೆ.
36 ಸರ್ಕಾರಿ ಪದವಿಪೂರ್ವ ಕಾಲೇಜಗಳಿಂದ 65 ಉಪನ್ಯಾಸಕರುಗಳನ್ನು, ಅನುದಾನಿತ ಕಾಲೇಜುಗಳಿಂದ 73 ಉಪನ್ಯಾಸಕರುಗಳನ್ನು 45 ಅನುದಾನಿತ ಕಾಲೇಜುಗಳಿಗೆ ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ನಿಯೋಜನೆ ಮಾಡಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಪಾಠ ಪ್ರವಚನಗಳಿಗೆ ತೊಂದರೆಯಾಗಿದೆ. ಹಾಗಾಗಿ ನಿಯೋಜನೆಗೊಂಡಿರುವ ಉಪನ್ಯಾಸಕರುಗಳು ತಕ್ಷಣವೆ ಕರ್ತವ್ಯಕ್ಕೆ ಹಾಜರಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ರಾಜ್ಯಾಧ್ಯಕ್ಷ
ಬಿ.ಪಿ.ತಿಪ್ಪೇಸ್ವಾಮಿ ಅಪರ ಜಿಲ್ಲಾಧಿಕಾರಿಯವರಲ್ಲಿ ವಿನಂತಿಸಿದರು.
ದಲಿತ ಹೋರಾಟಗಾರ ಭೀಮನಕೆರೆ ಶಿವಮೂರ್ತಿ, ತಿರುಮಲೇಶ್ ಬಿ.ಓ. ಖಂಡೇನಹಳ್ಳಿ ಕುಮಾರ್, ಎ.ಕೆ.ತಿಪ್ಪೇಸ್ವಾಮಿ, ನ್ಯಾಯವಾದಿಗಳಾದ ಓ.ಪ್ರತಾಪ್ಜೋಗಿ
ಅವಿನಾಶ್, ಎನ್.ಚಂದ್ರಪ್ಪ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.






